ಮಂತ್ರಾಲಯ: ಅಯೋಧ್ಯೆಯಲ್ಲೇ ರಾಮ ಮಂದಿರ ನಿರ್ಮಾಣವಾಗಬೇಕು. ಆದರೆ ಶಾಂತಿಯುತವಾಗಿ ಹಾಗೂ ಸೌಹಾರ್ದಯುತವಾಗಿ ಸಮಸ್ಯೆ ಪರಿಹಾರ ಕಾಣಬೇಕು. ಎರಡೂ ಕಡೆಯವರ ಒಳಿತಿಗೂ ಗಮನಕೊಡುವುದು ಮುಖ್ಯ. ಸಂಧಾನ ಪ್ರಕ್ರಿಯೆ ವಿಳಂಬವಾಗುವುದು ಬೇಡ. ತ್ವರಿತವಾಗಿ ಸಂಧಾನ ಕೈಗೊಂಡು ಸೌಹಾರ್ದಯುತವಾಗಿ ಸಮಸ್ಯೆ ಪರಿಹರಿಸಲು ಮುಂದಾಗುವುದು ಸೂಕ್ತ ಎಂದು ಮಂತ್ರಾಲಯದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಗಳು ಹೇಳಿದ್ದಾರೆ.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಇಂದಿನ ಆದೇಶಕ್ಕೆ ಮಂತ್ರಾಲಯ ಶ್ರೀಗಳು ಈ ಪ್ರತಿಕ್ರಿಯೆ ನೀಡಿದರು.
ಉಗ್ರರ ದಮನದಲ್ಲಿ ರಾಜಕೀಯ ಬೇಡ:
ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದರ ಬಗ್ಗೆ ಸಂಶಯ ಬೇಡ. ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇಶದ ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದೇಶದ ಭದ್ರತೆ ವಿಚಾರದಲ್ಲಿ ಆರೋಪ ಮಾಡುವುದು ಸಲ್ಲದು. ಉಗ್ರರ ದಮನದ ವಿರುದ್ಧ ಮಾತನಾಡುವುದು ದೇಶಕ್ಕೆ ಒಳಿತು ಉಂಟುಮಾಡದು. ದೇಶದ ಸುರಕ್ಷತೆಗೆ ಎಲ್ಲರೂ ಬೆಂಬಲಿಸಬೇಕು ಎಂದು ಶ್ರೀಗಳು ನುಡಿದರು.
ಮಾ.12 ರಂದು ದೇಶ ಕಾಯುವ ಸೈನಿಕರ ಹಿತಕ್ಕಾಗಿ ಮಹಾರುದ್ರಯಾಗ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನ ಇಂದಿನ ಆದೇಶಕ್ಕೆ ಮಂತ್ರಾಲಯ ಶ್ರೀಗಳು ಈ ಪ್ರತಿಕ್ರಿಯೆ ನೀಡಿದರು.
ಉಗ್ರರ ದಮನದಲ್ಲಿ ರಾಜಕೀಯ ಬೇಡ:
ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿದ್ದರ ಬಗ್ಗೆ ಸಂಶಯ ಬೇಡ. ಈ ನಿಟ್ಟಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ದೇಶದ ಸೈನಿಕರ ಪ್ರಾಮಾಣಿಕತೆ ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ದೇಶದ ಭದ್ರತೆ ವಿಚಾರದಲ್ಲಿ ಆರೋಪ ಮಾಡುವುದು ಸಲ್ಲದು. ಉಗ್ರರ ದಮನದ ವಿರುದ್ಧ ಮಾತನಾಡುವುದು ದೇಶಕ್ಕೆ ಒಳಿತು ಉಂಟುಮಾಡದು. ದೇಶದ ಸುರಕ್ಷತೆಗೆ ಎಲ್ಲರೂ ಬೆಂಬಲಿಸಬೇಕು ಎಂದು ಶ್ರೀಗಳು ನುಡಿದರು.
ಮಾ.12 ರಂದು ದೇಶ ಕಾಯುವ ಸೈನಿಕರ ಹಿತಕ್ಕಾಗಿ ಮಹಾರುದ್ರಯಾಗ ಆಯೋಜಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.