ಆ್ಯಪ್ನಗರ

'ಕೋಮುವಾದದಿಂದ ಧರ್ಮ ಬೆಳೆಸಲು ಅಸಾಧ್ಯ'

ಪ್ರವಾದಿ ಮುಹಮ್ಮದರು ಜಗತ್ತಿಗೆ ಶಾಂತಿ, ಸೌಹಾರ್ದತೆ, ಧಾರ್ಮಿಕ ಸ್ವಾತಂತ್ರತ್ರ್ಯದಿಂದ ಕೂಡಿದ ಸಮಾಜ ನಿರ್ಮಿಸಬೇಕು ಎಂದು ಸಂದೇಶ ನೀಡಿದ್ದಾರೆ. ಕೋಮುವಾದದಿಂದ ಧರ್ಮ ಬೆಳೆಸಲು ಹೊರಟವರನ್ನು ಪ್ರವಾದಿಗಳು ವಿರೋಧಿಸಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಇಸ್ಪಾಕ್‌ ಪುತ್ತೂರ ಹೇಳಿದರು.

Vijaya Karnataka 12 Nov 2019, 5:00 am
ಸಿಂಧನೂರು: ಪ್ರವಾದಿ ಮುಹಮ್ಮದರು ಜಗತ್ತಿಗೆ ಶಾಂತಿ, ಸೌಹಾರ್ದತೆ, ಧಾರ್ಮಿಕ ಸ್ವಾತಂತ್ರತ್ರ್ಯದಿಂದ ಕೂಡಿದ ಸಮಾಜ ನಿರ್ಮಿಸಬೇಕು ಎಂದು ಸಂದೇಶ ನೀಡಿದ್ದಾರೆ. ಕೋಮುವಾದದಿಂದ ಧರ್ಮ ಬೆಳೆಸಲು ಹೊರಟವರನ್ನು ಪ್ರವಾದಿಗಳು ವಿರೋಧಿಸಿದ್ದಾರೆ ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್‌ ಇಸ್ಪಾಕ್‌ ಪುತ್ತೂರ ಹೇಳಿದರು.
Vijaya Karnataka Web religion cannot be developed by communalism
'ಕೋಮುವಾದದಿಂದ ಧರ್ಮ ಬೆಳೆಸಲು ಅಸಾಧ್ಯ'


ನಗರದ ಸ್ತ್ರೀಶಕ್ತಿ ಭವನದಲ್ಲಿಈದ್‌ಮಿಲಾದ್‌ ಹಬ್ಬದ ಪ್ರಯುಕ್ತ ಭಾನುವಾರ ನಡೆದ ಸೀರತ್‌(ಸ) ಬೃಹತ್‌ ಸಮಾವೇಶದಲ್ಲಿಪಾಲ್ಗೊಂಡು ಅವರು ಮಾತನಾಡಿದರು. ಮೋಸ, ವಂಚನೆಯಿಂದ ದೂರ ಇರುವುದು. ಹಸಿವು ಮುಕ್ತ ಸಮಾಜ ನಿರ್ಮಾಣ, ಬಡ್ಡಿ ನಿಷೇಧ ಸೇರಿದಂತೆ ಪ್ರವಾದಿಗಳು ಆಗಿನ ಕಾಲದಲ್ಲಿಯೇ ದೊಡ್ಡ ಬದಲಾವಣೆಗೆ ಕಾರಣವಾಗಿದ್ದರು ಎಂದರು.

ವಿಶ್ವಶಾಂತಿ ಹಾಗೂ ಭಾವೈಕ್ಯ ಪ್ರವಚನಕಾರ ಮೌಲಾನಾ ಪಂಡಿತ ಸಯ್ಯದ್‌ ಬಾಷಾ ಮಾತನಾಡಿ, 12ನೇ ಶತಮಾನದಲ್ಲಿಬಸವಣ್ಣನವರು ಸಮಾನತೆಯ ಕ್ರಾಂತಿ ಮಾಡಿದರು. ಪ್ರವಾದಿಗಳು ಸಹ ಎಲ್ಲರೂ ಒಗ್ಗೂಡಿ ನಡೆಯುವುದನ್ನು ತಿಳಿಸಿದ್ದಾರೆ. 1400 ವರ್ಷಗಳ ಹಿಂದೆಯೇ ಭಾರತವನ್ನು ಯಾರು ನಾಶ ಮಾಡಲು ಆಗುವುದಿಲ್ಲಎಂದು ಪ್ರವಾದಿಗಳು ಹೇಳಿದ್ದಾರೆ. ಇಡೀ ವಿಶ್ವಕ್ಕೆ ಶಾಂತಿ, ಏಕತೆಯ ಉಪದೇಶ ಕೊಡುವ ಕೆಲಸ ನಮ್ಮ ದೇಶದಿಂದ ಆಗಲಿದೆ ಎಂದು ಹೇಳಿದರು.

ಸಾನಧ್ಯವಹಿಸಿದ್ದ ವಿಜಯ ಮಹಾಂತೇಶ್ವರ ಶಾಖಾಮಠದ ಬಾಗಲಕೋಟದ ಡಾ.ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಧರ್ಮ ಎಂಬುದು ನಮ್ಮ ಹೃದಯವಾಗಿದೆ ಎಂದರು. ಜಮಿಯತ್‌ ಉಲ್‌ ಉಲೆಮಾ ಹಿಂದ್‌ನ ರಾಜ್ಯ ಉಪಾಧ್ಯಕ್ಷ ಮೌಲಾನಾ ಅಹ್ಮದ್‌ ಸಿರಾಜ್‌ ಫೈಜಾಬಾದಿ ಉಮ್ರಿ ಖಾಸ್ಮೀ ಮಾತನಾಡಿದರು.

ಶಾಸಕ ವೆಂಕಟರಾವ್‌ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಕೃಷಿ ಬೆಲೆ ಆಯೋಗದ ರಾಜ್ಯಾಧ್ಯಕ್ಷ ಹನುಮನಗೌಡ ಬೆಳಗುರ್ಕಿ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್‌, ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ನಿವೃತ್ತ ಪ್ರೊ.ಶಾಶ್ವತಯ್ಯಸ್ವಾಮಿ ಮುಕ್ಕುಂದಿಮಠ, ಮುಖಂಡರಾದ ಹೆಚ್‌.ಎನ್‌.ಬಡಿಗೇರ, ವೀರಭದ್ರಪ್ಪ ಕುರುಕುಂದಿ, ಡಾ.ಎಚ್‌.ಎಸ್‌.ತೋಟದ ಸೇರಿ ಹಲವರು ಇದ್ದರು. ಇದೇ ಸಂದರ್ಭ ಪುಸ್ತಕ ಬಿಡುಗಡೆ ಮಾಡಲಾಯಿತು. ನಂತರ ಜೀವಮಾನ ಸಾಧನೆಗೆ ಭಾರತೀಯ ವೈದ್ಯಕೀಯ ಸಂಘದಿಂದ ಪ್ರಶಸ್ತಿ ಪಡೆದಿರುವ ಡಾ.ಎಚ್‌.ಎಸ್‌.ತೋಟದ ಅವರಿಗೆ ಸನ್ಮಾನಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ