ಆ್ಯಪ್ನಗರ

ಬಾಡಿಗೆ ಹರಾಜು ವಿಳಂಬ

ಸ್ಥಳೀಯ ಕ್ಯಾಂಪ್‌ನ ಅಧಿಸೂಚಿತ ಪ್ರದೇಶ ಸಮಿತಿ ಎಸ್‌ಎಫ್‌ಸಿ ನಿಧಿಯ 40 ಲಕ್ಷ ರೂ. ಅನುದಾನದಲ್ಲಿನಿರ್ಮಿಸಲಾದ ಮಳಿಗೆಗಳಿಗೆ ಬಾಡಿಗೆ ಹರಾಜು ಪ್ರಕ್ರಿಯೆ ನಡೆಯದೇ ಇರುವುದರಿಂದ ಹಾಳಾಗುತ್ತಿವೆ.

Vijaya Karnataka 19 Oct 2019, 5:00 am
ಸೋಮಣ್ಣ ಗುರಿಕಾರ ಹಟ್ಟಿಚಿನ್ನದಗಣಿ
Vijaya Karnataka Web rental auction delay
ಬಾಡಿಗೆ ಹರಾಜು ವಿಳಂಬ


ಸ್ಥಳೀಯ ಕ್ಯಾಂಪ್‌ನ ಅಧಿಸೂಚಿತ ಪ್ರದೇಶ ಸಮಿತಿ ಎಸ್‌ಎಫ್‌ಸಿ ನಿಧಿಯ 40 ಲಕ್ಷ ರೂ. ಅನುದಾನದಲ್ಲಿನಿರ್ಮಿಸಲಾದ ಮಳಿಗೆಗಳಿಗೆ ಬಾಡಿಗೆ ಹರಾಜು ಪ್ರಕ್ರಿಯೆ ನಡೆಯದೇ ಇರುವುದರಿಂದ ಹಾಳಾಗುತ್ತಿವೆ.

ಮಳಿಗೆಗಳು ಸಿದ್ಧಗೊಂಡು 4 ವರ್ಷ ಗತಿಸಿದರೂ ಅವುಗಳನ್ನು ಸಾರ್ವಜನಿಕ ಬಳಕೆಗೆ ನೀಡಿಲ್ಲ. ಸ್ವರ್ಣಭವನದ ಎದುರಿಗೆ 5, ಕ್ರೀಡಾಂಗಣದ ಹಿಂದಿನ ರಸ್ತೆಯಲ್ಲಿ14 ಸೇರಿ ಒಟ್ಟು 19 ಮಳಿಗೆಗಳನ್ನು ಬಾಡಿಗೆಗೆ ನೀಡುವ ಉದ್ದೇಶದಿಂದ ಅಧಿಸೂಚಿತ ಪ್ರದೇಶ ಸಮಿತಿ ನಿರ್ಮಿಸಿದೆ.

ಆದರೆ, ಅವುಗಳಿಗೆ ವಿದ್ಯುತ್‌ ಸಂಪರ್ಕ, ವೈರಿಂಗ್‌ನಂತ ಕಾಮಗಾರಿ ಮಾಡಲಾಗಿಲ್ಲ. ಮಲ್ಲೇಶ.ಜೆ, ಅಕ್ಕರಕ್ಕಿ ಎಂಬುವರು ಮುಖ್ಯಾಧಿಕಾರಿಯಾಗಿ 2017ರಲ್ಲಿಕಾರ್ಯನಿರ್ವಹಿಸುವಾಗ, ಜಿಲ್ಲಾಧಿಕಾರಿಗಳ ಅನುಮತಿ ಪಡೆದು, ಮಳಿಗೆಗಳನ್ನು ಹರಾಜಿನಲ್ಲಿಬಾಡಿಗೆ ಪಡೆಯುವವರು ವಿದ್ಯುತ್‌ ಸಂಪರ್ಕ, ಇತರ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಖರ್ಚಾದ ಮೊತ್ತವನ್ನು ತಿಂಗಳ ಬಾಡಿಗೆಯಲ್ಲಿಹೊಂದಾಣಿಕೆ ಮಾಡಿಕೊಳ್ಳಲಾಗುವುದೆಂಬ ಷರತ್ತುಗಳ ಮೇರೆಗೆ 2018 ಜೂ.29 ರಂದು ಬಾಡಿಗೆ ಹರಾಜು ಪ್ರಕ್ರಿಯೆಯನ್ನು ಕರೆದಿದ್ದರು.

ಷರತ್ತು: ಮಳಿಗೆಗಳ ಬಾಡಿಗೆ ಹರಾಜಿನಲ್ಲಿಭಾಗವಹಿಸುವವರು 50 ಸಾವಿರ ರೂ. ಠೇವಣಿ ಮೊತ್ತ ನಿಗದಿ ಮಾಡಲಾಗಿತ್ತು. ಮೀಸಲಾತಿಗೆ ಅನುಗುಣವಾಗಿ ಮಳಿಗೆಗಳನ್ನು ನಿಗದಿಮಾಡಿ ಬಾಡಿಗೆ ಹರಾಜು ಪ್ರಕ್ರಿಯೆ ಆರಂಭಿಸಿದಾಗ, ಸ್ವರ್ಣಭವನ(ಕಲ್ಯಾಣ ಮಂಟಪ) ಎದುರಿಗಿನ 5 ಮಳಿಗೆಗಳಲ್ಲಿ2 ಮಳಿಗೆಗಳಿಗೆ ಸರಕಾರ ನಿಗದಿಪಡಿಸಿದ ಬಾಡಿಗೆ ಮೊತ್ತಕ್ಕಿಂತ ಅಧಿಕ ಬಾಡಿಗೆ ಹರಾಜು ಬಂದರೆ, ಕ್ರೀಡಾಂಗಣದ ಹಿಂದಿನ ರಸ್ತೆಯ 14 ಮಳಿಗೆಗಳಿಗೆ ಒಂದು ಸಾವಿರ ರೂ. ಸಹ ಬಾಡಿಗೆ ಮೊತ್ತ ಹರಾಜುದಾರರಿಂದ ಏರಿಕೆ ಬರಲಿಲ್ಲ.

ಕಡಿಮೆ ಮೊತ್ತ: 14 ಮಳಿಗೆಗಳಿಗೆ ಅತಿ ಕಡಿಮೆ ಮೊತ್ತದ ಬಾಡಿಗೆ ಹರಾಜುದಾರರು ಕೂಗಿದ್ದರಿಂದ ಅವುಗಳನ್ನು ಹರಾಜುದಾರರಿಗೆ ನೀಡಲು ಒಪ್ಪದ ಮುಖ್ಯಾಧಿಕಾರಿ, ಸ್ವರ್ಣಭವನದ ಎದುರಿಗಿನ 5 ಮಳಿಗೆಗಳಲ್ಲಿ2 ಮಳಿಗೆಗಳ ಬಾಡಿಗೆ ಹರಾಜನ್ನು ಒಪ್ಪಿಕೊಂಡು ಉಳಿದ 17 ಮಳಿಗೆಗಳಿಗೆ ಅತಿ ಕಡಿಮೆ ಬಾಡಿಗೆ ಹರಾಜು ಕೂಗಿದ್ದರು. ಇದರಿಂದ ಹರಾಜುದಾರರಿಗೆ ಮಳಿಗೆಗಳನ್ನು ನೀಡದೆ ಮರು ಹರಾಜು ಕರೆಯುವುದಾಗಿ ತಿಳಿಸಿ ಹರಾಜು ಪ್ರಕ್ರಿಯೆ ರದ್ದು ಪಡಿಸಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ತಿಳಿಸಿದರು.

ಜನವಸತಿ ಇಲ್ಲ: ಕ್ರೀಡಾಂಗಣದ ಹಿಂದಿನ ರಸ್ತೆಯ ಮಳಿಗೆಗಳು ಜನವಸತಿಯಿಂದ ದೂರವಾಗುವುದರಿಂದ ಅಲ್ಲಿವ್ಯವಹಾರ ಕೈಗೊಂಡರು ವ್ಯಾಪಾರ ನಡೆಯುವುದಿಲ್ಲ. ಹೀಗಾಗಿ ಬಾಡಿಗೆ, ಇತರ ಖರ್ಚು ವೆಚ್ಚಗಳನ್ನು ಗಣನೆಗೆ ತೆಗೆದುಕೊಂಡರೆ ಸರಕಾರ ನಿಗದಿಮಾಡಿದ 3 ಸಾವಿರ ಬಾಡಿಗೆ ಕೊಟ್ಟು ಮಳಿಗೆ ಪಡೆಯುವುದು ಯಾರಿಂದಲೂ ಸಾಧ್ಯವಿಲ್ಲವೆಂದು ಹರಾಜುದಾರರು ಒಂದು ಸಾವಿರ ರೂ. ಒಳಗೆ ಹರಾಜು ಕೂಗಿದ್ದಾರೆ. ಆದರೆ ಅಧಿಸೂಚಿತ ಪ್ರದೇಶ ಸಮಿತಿಯವರು ಇದು ಸಾಧ್ಯವಿಲ್ಲವೆಂದು ಮರು ಹರಾಜು ಕರೆಯುವುದಾಗಿ ಹೇಳಿ ಠೇವಣಿ ಹಿಂತಿರಿಗಿಸಿದ್ದಾರೆ.

---
ಅಧಿಸೂಚಿತ ಪ್ರದೇಶ ಸಮಿತಿಯಲ್ಲಿದ್ದ ಹಿಂದಿನ ಮುಖ್ಯಾಧಿಕಾರಿಗಳು 19 ಮಳಿಗೆಗಳಲ್ಲಿ2 ಮಳಿಗೆಗಳ ಬಾಡಿಗೆ ಹರಾಜು ಸ್ವೀಕರಿಸಿ, ಉಳಿದ 17 ಮಳಿಗೆಗಳ ಮರು ಹರಾಜು ಪ್ರಕ್ರಿಯೆಗಾಗಿ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದಾರೆ. ಜಿಲ್ಲಾಧಿಕಾರಿಗಳಿಂದ ಸೂಚನೆ ಬಂದ ನಂತರ ಬಾಡಿಗೆ ಹರಾಜು ಪ್ರಕ್ರಿಯೆ ನಡೆಸಿ ಆದಷ್ಟು ಬೇಗ ಸಾರ್ವಜನಿಕ ಬಳಕೆಗೆ ನೀಡಲಾಗುವುದು.

- ದುರುಗಪ್ಪ .ಎಂ, ಮುಖ್ಯಾಧಿಕಾರಿ, ಅಧಿಸೂಚಿತ ಪ್ರದೇಶ ಸಮಿತಿ, ಹಟ್ಟಿಚಿನ್ನದಗಣಿ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ