ಆ್ಯಪ್ನಗರ

ದಾಳಿಂಬೆ ಗಿಡ ಸ್ಥಳಾಂತರ, ಕೃಷಿ ವಿವಿ ಕುಲಪತಿ ಭೇಟಿ

ತಾಲೂಕಿನ ನೀರಲಕೇರಾ ಗ್ರಾಮದಲ್ಲಿದಾಳಿಂಬೆ ಗಿಡಗಳನ್ನೇ ಸ್ಥಳಾಂತರಿಸಿ, ರಾಜ್ಯಾದ್ಯಂತ ಅಚ್ಚರಿ ಮೂಡಿಸಿದ್ದ ಜಮೀನಿಗೆ, ರಾಯಚೂರು ಕೃಷಿ ವಿವಿ ಕುಲಪತಿ ನೇತೃತ್ವದ ಕೃಷಿ ವಿಜ್ಞಾನಿಗಳ ತಂಡ ಮಂಗಳವಾರ ಭೇಟಿನೀಡಿ ಪರಿಶೀಲಿಸಿತು.

Vijaya Karnataka 22 Jan 2020, 2:47 pm
ಲಿಂಗಸುಗೂರು (ರಾಯಚೂರು); ತಾಲೂಕಿನ ನೀರಲಕೇರಾ ಗ್ರಾಮದಲ್ಲಿದಾಳಿಂಬೆ ಗಿಡಗಳನ್ನೇ ಸ್ಥಳಾಂತರಿಸಿ, ರಾಜ್ಯಾದ್ಯಂತ ಅಚ್ಚರಿ ಮೂಡಿಸಿದ್ದ ಜಮೀನಿಗೆ, ರಾಯಚೂರು ಕೃಷಿ ವಿವಿ ಕುಲಪತಿ ನೇತೃತ್ವದ ಕೃಷಿ ವಿಜ್ಞಾನಿಗಳ ತಂಡ ಮಂಗಳವಾರ ಭೇಟಿನೀಡಿ ಪರಿಶೀಲಿಸಿತು.
Vijaya Karnataka Web replacement of pomegranate plant visiting vv chancellor of agriculture
ದಾಳಿಂಬೆ ಗಿಡ ಸ್ಥಳಾಂತರ, ಕೃಷಿ ವಿವಿ ಕುಲಪತಿ ಭೇಟಿ


ಪ್ರಗತಿಪರ ರೈತ ಬಸವರಾಜಗೌಡ ಗಣೇಕಲ್‌ ಅವರು ತಮ್ಮ ಜಮೀನಿನಲ್ಲಿದಾಳಿಂಬೆ ಗಿಡಗಳ ಸ್ಥಳಾಂತರಿಸುವ ಪ್ರಕ್ರಿಯೆ ಕಳೆದ ಒಂದು ತಿಂಗಳಿಂದ ನಡೆಯುತ್ತಿದೆ. ಈ ಪ್ರಕ್ರಿಯೆಯ ಫಲಾಫಲ ಪರಿಶೀಲಿಸಲು ಕೃಷಿ ವಿವಿ ಕುಲಪತಿ ಡಾ.ಕೆ.ಎನ್‌.ಕಟ್ಟಿಮನಿ ಅವರು ಖುದ್ದುಭೇಟಿನೀಡಿದ್ದಾರೆ. ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಬೇರೆ ಕಡೆ ರೈತರು ಗಿಡಗಳನ್ನು ಸ್ಥಳಾಂತರಿಸಿ ಯಶಸ್ಸು ಕಂಡಿದ್ದಾರೆ. ಇಲ್ಲಿನ ರೈತರು ತಮ್ಮ ಆತ್ಮವಿಶ್ವಾಸದ ನಂಬಿಕೆಯಿಂದ ಗಿಡಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಗಿಡಗಳ ತಾಯಿ ಬೇರಿಗೆ ತೊಂದರೆಯಾಗದ ರೀತಿಯಲ್ಲಿಕಿತ್ತಿದರೆ ಗಿಡಗಳಿಗೆ ಯಾವುದೇ ಸಮಸ್ಯೆಯಿಲ್ಲ. ತಾಯಿ ಬೇರು ಸಮೇತ ಸುರಕ್ಷಿತವಾಗಿ ತಂದು ಹಚ್ಚಿದರೆ ಕ್ರಿಯಾಶೀಲವಾಗಬೇಕೆಂದರೆ ಹತ್ತು ದಿನ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿಹಚ್ಚಿದ ಗಿಡಗಳು ಚಿಗಿತು ಮತ್ತೆ ಒಣಗುವ ಸಾಧ್ಯತೆ ಇದೆ'' ಎಂದರು.

''ಒಂದೇ ಟೊಂಗೆಯ ಗಿಡ ಇದ್ದರೆ ಅದು ಬೇಗ ಬೆಳೆಯುತ್ತದೆ. ಇದು ದೊಡ್ಡ ಗಿಡವಾಗಿದ್ದರಿಂದ ಚಿಗುರಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಗಿಡಗಳು ಹಚ್ಚಿದ ಜಮೀನಿನ ಮಣ್ಣಿನ ಪ್ರಮಾಣ ಕಡಿಮೆಯಿದೆ. ಉಸುಕಿನ ಪ್ರಮಾಣ ಹೆಚ್ಚಿದ್ದರಿಂದ ಗಿಡಗಳ ಬೆಳವಣಿಗೆಗೆ ಯಾವುದೇ ತೊಂದರೆಯಿಲ್ಲ. ಮೂರು ತಿಂಗಳಲ್ಲಿಗಿಡಗಳು ಮೊದಲಿನ ರೂಪಕ್ಕೆ ಬರುತ್ತವೆ. ಆರು ತಿಂಗಳಲ್ಲಿಒಂದು ಗಿಡಕ್ಕೆ 70-80 ಹೂಗಳು ಬಿಡುತ್ತವೆ. ಆದರೆ, ಹೆಚ್ಚುವರಿ ಹೂಗಳನ್ನು ಕಿತ್ತುಕೇವಲ 50 ಹೂಗಳನ್ನು ಬೆಳೆಸಿ ಹಣ್ಣಿಗೆ ಬಿಡಬೇಕು. ಹೆಚ್ಚಿನ ಪ್ರಮಾಣದಲ್ಲಿಕಾಳಜಿವಹಿಸಿದರೆ ಯಶಸ್ಸುಗಳಿಸಲು ಸಾಧ್ಯ'' ಎಂದು ಸಲಹೆ ನೀಡಿದರು.

''ದೊಡ್ಡಗಿಡಗಳು ಸ್ಥಳಾಂತರಿಸಿದ್ದರಿಂದ ಹೆಚ್ಚು ಕಾಳಜಿವಹಿಸಬೇಕು. ಆರು ತಿಂಗಳವರೆಗೆ ಹಣ್ಣಿಗೆ ಬಿಡಬಾರದು. ಒಂದು ಗಿಡಕ್ಕೆ ರೋಗ ಬಂದರೆ ಗಿಡದ ಸಣ್ಣ ಟೊಂಗೆ ತಂದರೆ ಅದಕ್ಕೆ ಸೂಕ್ತ ಪರಿಹಾರ ನೀಡಲಾಗುವುದು'' ಎಂದು ತಿಳಿಸಿದರು.

ಈ ಸಂದರ್ಭದಲ್ಲಿಕೃಷಿ ವಿವಿ ವಿಸ್ತರಣಾ ನಿರ್ದೇಶಕ ಡಾ.ಬಿ.ಎಂ.ಚಿತ್ತಾಪುರ, ಪ್ರಾಧ್ಯಾಪಕ ಡಾ.ಅರುಣುಕುಮಾರ ಹೊಸಮನಿ, ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಡಾ.ಜಿ.ಎಸ್‌.ಯಡಹಳ್ಳಿ, ಸ್ಥಳೀಯ ವಿಸ್ತರಣಾ ಘಟಕದ ಮುಖ್ಯಸ್ಥ ಡಾ.ಜಿ.ಸಿ.ಶೇಖರ್‌, ಕೃಷಿ ವಿಜ್ಞಾನಿ ಡಾ.ಅರವಿಂದ ರಾಥೋಡ್‌ ಹಾಗೂ ಇತರರಿದ್ದರು.

.............

*ಗಿಡಗಳ ಸ್ಥಳಾಂತರ ಹಿನ್ನೆಲೆ

2014ರಲ್ಲಿನೆಟ್ಟಿದ್ದ ದಾಳಿಂಬೆ ಗಿಡಗಳು, ಆರು ವರ್ಷದಲ್ಲಿ10 ಅಡಿ ಎತ್ತರ ಬೆಳೆದಿವೆ. ಈ ಗಿಡಗಳನ್ನು ಸ್ಥಳಾಂತರಿಸಲಾಗುತ್ತಿದೆ. 22 ಎಕರೆ ಜಮೀನಿನಲ್ಲಿ10 ಸಾವಿರ ದಾಳಿಂಬೆ ಗಿಡಗಳನ್ನು ಕಡಿಮೆ ಅಂತರದಲ್ಲಿಬೆಳೆಸಲಾಗಿತ್ತು. ಈ ಗಿಡಗಳು ಬೆಳೆದು ಒಂದಕ್ಕೊಂದು ತಾಗಿ ಬಿಸಿಲು, ಗಾಳಿ ತಾಗದೇ ಇರುವುದರಿಂದ ಇಳುವರಿ ಬಾರದೇ ಸಂಕಷ್ಟ ಅನುಭವಿಸುವಂತಾಗಿತ್ತು. ಈ ನಷ್ಟದಿಂದ ಪಾರಾಗಲು ಮೂರು ಸಾವಿರಕ್ಕೂ ಅಧಿಕ ಗಿಡಗಳನ್ನು ಬೇರೆ ಜಮೀನಿಗೆ ಸ್ಥಳಾಂತರಿಸಲಾಗುತ್ತಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ