ಆ್ಯಪ್ನಗರ

ತಹಸೀಲ್ದಾರ್‌ ಮೂಲಕ ಸಿಎಂಗೆ ಮನವಿ

ಬಗರ್‌ಹುಕುಂ ಸಾಗುವಳಿದಾರರ ಭೂಮಿಗೆ ಪಟ್ಟಾ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ರವಾನಿಸಿದರು.

Vijaya Karnataka 13 Jul 2018, 5:00 am
ರಾಯಚೂರು : ಬಗರ್‌ಹುಕುಂ ಸಾಗುವಳಿದಾರರ ಭೂಮಿಗೆ ಪಟ್ಟಾ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಪದಾಧಿಕಾರಿಗಳು ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಗಳಿಗೆ ಗುರುವಾರ ಮನವಿ ರವಾನಿಸಿದರು.
Vijaya Karnataka Web RAC-RCH12HD01


ನಗರದ ತಹಸಿಲ್‌ ಕಚೇರಿ ಮುಂದೆ ಪ್ರತಿಭಟಿಸಿ ಮನವಿ ಸಲ್ಲಿಸಿದ ಪದಾಧಿಕಾರಿಗಳು, ತಾಲೂಕಿನ ಬಾಪೂರು, ಉಂಡ್ರಾಳದೊಡ್ಡಿ, ಅರಸಿಗೇರ ತಾಂಡಾ, ಚಂದ್ರಬಂಡಾ, ಮಂಡಲಗೇರ, ಸಿಂಗನೋಡಿ, ಪುಚ್ಚಲದಿನ್ನಿ, ಡಿ.ರಾಂಪುರ, ಬೂರ್ದಿಪಾಡ, ತುಂಟಾಪುರ, ಮಾಸದೊಡ್ಡಿ, ಕೊತ್ತದೊಡ್ಡಿ ಸೇರಿ ಮುಂತಾದ ಹಳ್ಳಿಗಳಲ್ಲಿ ಕೃಷಿ ಕೂಲಿಕಾರರು 50-60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಕೃಷಿ ಕೂಲಿಕಾರರ ಜಮೀನಿಗೆ ಪಟ್ಟಾ ನೀಡುತ್ತಿಲ್ಲ. ತಾಲೂಕಿನ ಕೃಷಿ ಕೂಲಿಕಾರರಿಗೆ ಸ್ವಂತ ನಿವೇಶನ ಮತ್ತು ಮನೆಯಿಲ್ಲದೆ ಬೀದಿಯಲ್ಲೇ ಜೀವನ ನಡೆಸುತ್ತಿದ್ದಾರೆ. ನಿವೇಶನ ಮತ್ತು ಮನೆಗಳನ್ನು ಸರಕಾರ ನಿರ್ಮಿಸಿಕೊಡುತ್ತಿಲ್ಲ. ಅದಲ್ಲದೇ ಬಡಕೂಲಿಕಾರರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿ ಭೂಮಿಯಲ್ಲಿ ಸಸಿ ನೆಡಲು ಪ್ರಯತ್ನಿಸುತ್ತಿರುವುದು ಖಂಡನೀಯ. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಹಾಕುತ್ತಿರುವ ಕೇಸುಗಳನ್ನು ನಿಲ್ಲಿಸಬೇಕು. ಈಗಾಗಲೇ ಹಾಕಿರುವ ಕೇಸುಗಳನ್ನು ವಾಪಸ್‌ ಪಡೆಯಬೇಕು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ತಾಲೂಕಿನಲ್ಲಿ ಸಮಗ್ರವಾಗಿ ಜಾರಿಗೊಳಿಸಬೇಕು. ಯೋಜನೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯಬೇಕು. ಕೃಷಿ ಕೂಲಿಕಾರರಿಗೆ ಮೇಕೆ, ಎಮ್ಮೆಗಳಿಗೆ ಪ್ರತ್ಯೇಕವಾಗಿ ಜಮಾನತ್ತು ಇಲ್ಲದೇ ಸಾಲ ನೀಡಬೇಕು. ಸಮಗ್ರ ಕಾಯಿದೆ ಜಾರಿಗೊಳಿಸಬೇಕು. ಕೃಷಿ ಕೂಲಿಕಾರರಿಗಾಗಿ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಬೇಕು. ಕೃಷಿಕರಿಗೆ ಇಪಿಎಫ್‌, ಇಎಸ್‌ಐ ಸೌಲಭ್ಯ ಮತ್ತು ಪಿಂಚಣಿ ಜಾರಿ ಮಾಡಬೇಕು. ಸರಕಾರದ ಜಮೀನಿನಲ್ಲಿ ಮನೆ ಹಾಗೂ ಗುಡಿಸಲು ನಿರ್ಮಿಸಿಕೊಂಡವರಿಗೆ ಕಾಯಂ ಪಟ್ಟಾ ನೀಡಬೇಕು. ತಾಲೂಕಿನಲ್ಲಿರುವ ಎಲ್ಲ ಕೂಲಿಕಾರರ ಸರ್ವೆ ಕಾರ್ಯ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಿಗೆ ರವಾನಿಸಿದ ಮನವಿಯಲ್ಲಿ ಒತ್ತಾಯಿಸಿದರು.

ಜಿಲ್ಲಾಧ್ಯಕ್ಷ ಕರಿಯಪ್ಪ ಅಚ್ಚೊಳ್ಳಿ ಪದಾಧಿಕಾರಿಗಳಾದ ಕುಮಾರ, ರಂಗಪ್ಪ, ಬಸವರಾಜ, ಹೊನ್ನಪ್ಪ, ಲಚಮಣ್ಣ, ಮಲ್ಲಯ್ಯ, ಜಗನ್ನಾಥ, ನರಸಪ್ಪ, ಸತ್ಯಪ್ಪ, ಮುದ್ದಪ್ಪ, ರವಿ, ರಾಜು, ನಾಗಪ್ಪ, ಉರುಕುಂದಿ ಸೇರಿದಂತೆ ಅನೇಕರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ