ಆ್ಯಪ್ನಗರ

ಮದ್ಯದಂಗಡಿ ಪರವಾನಗಿ ರದ್ದುಗೊಳಿಸಲು ಆಗ್ರಹ

ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಹತ್ತಿರ ಎಂಎಸ್‌ಐಎಲ್‌ ಮದ್ಯದ ಅಂಗಡಿಗೆ ಪರವಾನಗಿ ನೀಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಕುಳುವ ಮಹಾಸಂಘದ ನೇತೃತ್ವದಲ್ಲಿಡಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.

Vijaya Karnataka 27 Aug 2019, 5:00 am
ರಾಯಚೂರು : ನಗರದ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಹತ್ತಿರ ಎಂಎಸ್‌ಐಎಲ್‌ ಮದ್ಯದ ಅಂಗಡಿಗೆ ಪರವಾನಗಿ ನೀಡಿರುವುದನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಜಿಲ್ಲಾಕುಳುವ ಮಹಾಸಂಘದ ನೇತೃತ್ವದಲ್ಲಿಡಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಯಿತು.
Vijaya Karnataka Web request for cancellation of liquor store license
ಮದ್ಯದಂಗಡಿ ಪರವಾನಗಿ ರದ್ದುಗೊಳಿಸಲು ಆಗ್ರಹ


ಸಹಾಯಕ ಆಯುಕ್ತರ ಮೂಲಕ ಅಬಕಾರಿ ಇಲಾಖೆ ಉಪ ಆಯುಕ್ತರಿಗೆ ಮನವಿ ರವಾನಿಸಿದರು. ಕೊಳಚೆ ಪ್ರದೇಶದ ಹತ್ತಿರ ಮದ್ಯದ ಅಂಗಡಿ ತೆಗೆಯಲು ಪರವಾನಗಿ ನೀಡಿರುವುದು ಅಕ್ಷಮ್ಯ. ಕೊಳಚೆ ಪ್ರದೇಶಗಳಲ್ಲಿಕಡುಬಡವರೇ ಹೆಚ್ಚಿದ್ದಾರೆ.

ಅಂತಹ ಸ್ಥಳಗಳಲ್ಲಿಮದ್ಯದಂಗಡಿ ತೆರೆಯುವುದರಿಂದ ಹೆಚ್ಚಿನ ದುಂದುವೆಚ್ಚಕ್ಕೆ ಕಾರಣವಾಗಲಿದೆ. ಮದ್ಯದ ಅಂಗಡಿಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಪಂದಿಸುತ್ತಿಲ್ಲ. ಮದ್ಯದಂಗಡಿ ತೆರೆಯದಂತೆ ಆಕ್ಷೇಪಣೆ ಸಲ್ಲಿಸಿದಾಗ ಅದರಿಂದಾಗುವ ಅನಾಹುತಗಳ ಬಗ್ಗೆ ಪರಿಶೀಲಿಸಬೇಕಾಗಿತ್ತು. ಆದರೆ ಅಧಿಕಾರ ದುರುಪಯೋಗಪಡಿಸಿಕೊಂಡು ಪರವಾನಗಿ ನೀಡಿರುವುದು ಕರ್ನಾಟಕ ಸರಕಾರದ ಸೇವಾ ಕಾನೂನಿಗೆ ವಿರುದ್ಧವಾಗಿದೆ. ಕೂಡಲೇ ಸಾರ್ವಜನಿಕರ ಹಿತದೃಷ್ಟಿಯಿಂದ ಎಂಎಸ್‌ಐಎಲ್‌ ಔಟ್‌ಲೆಟ್‌ ಪರವಾನಗಿ ರದ್ದುಗೊಳಿಸಬೇಕು. ಇಲ್ಲದಿದ್ದಲ್ಲಿಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸಂಘದ ಪದಾಧಿಕಾರಿಗಳಾದ ಈರಣ್ಣ, ಆಂಜಿನಯ್ಯ, ನರಸಿಂಹಲು, ಈರೇಶ, ಬಜಾರಪ್ಪ, ಯಲ್ಲಪ್ಪ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ