ಆ್ಯಪ್ನಗರ

ವೇತನಕ್ಕೆ ಆಗ್ರಹಿಸಿ ಧರಣಿ

ಹತ್ತು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಪ.ಪಂ.ಕಾರ್ಯಾಲಯದ ಮುಂದೆ ಗುರುವಾರ ಧರಣಿ ನಡೆಸಿದರು.

Vijaya Karnataka 10 Aug 2019, 5:00 am
ಕವಿತಾಳ : ಹತ್ತು ತಿಂಗಳ ವೇತನ ಪಾವತಿಸುವಂತೆ ಆಗ್ರಹಿಸಿ ಪೌರ ಕಾರ್ಮಿಕರು ಪ.ಪಂ.ಕಾರ್ಯಾಲಯದ ಮುಂದೆ ಗುರುವಾರ ಧರಣಿ ನಡೆಸಿದರು.
Vijaya Karnataka Web request for pay
ವೇತನಕ್ಕೆ ಆಗ್ರಹಿಸಿ ಧರಣಿ


ಈ ಹಿಂದೆ ವೇತನ ನೀಡುವಂತೆ ಜು.20 ರಂದು ಧರಣಿ ನಡೆಸಲಾಗಿತ್ತು. ಧರಣಿ ಸ್ಥಳಕ್ಕೆ ಆಗಮಿಸಿದ್ದ ಮುಖ್ಯಾಧಿಕಾರಿ ಒಂದು ವಾರದೊಳಗೆ 4 ತಿಂಗಳ ವೇತನ ನೀಡುವ ಭರವಸೆ ನೀಡಿದ್ದರು. ಆದರೆ ಒಂದು ವಾರದಲ್ಲಿ ವೇತನ ನೀಡದೆ ನಿರ್ಲಕ್ಷ ್ಯವಹಿಸಿದ್ದರಿಂದ ಪುನಃ ಆ.5 ರಂದು ಧರಣಿಗೆ ನಡೆಸಲಾಗಿತ್ತು. ಅಂದು ಕೂಡ 4ತಿಂಗಳ ವೇತನದ ಭರವಸೆ ನೀಡಿದ ಮುಖ್ಯಾಧಿಕಾರಿ, 3 ತಿಂಗಳ ವೇತನ ನೀಡಲಾಗುವುದೆಂದು ಹೇಳಿದ್ದರು. ಆದರೆ 5ನೇ ತಾರೀಖು ಕಳೆದು 3 ದಿನಗಳಾದರೂ ಇದುವರೆಗೆ ವೇತನ ನೀಡದೆ ಪೌರ ಕಾರ್ಮಿಕರನ್ನು ಸತಾಯಿಸುತ್ತಿದ್ದಾರೆಂದು ಧರಣಿ ನಿರತರು ಆರೋಪಿಸಿದರು.

ಸದ್ಯ ಒಂದು ದಿನ ಗಡುವು ನೀಡಲಾಗಿದ್ದು ಶೀಘ್ರ ವೇತನ ನೀಡದಿದ್ದರೆ ನಿರಂತರ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು. ಲೈನ್‌ಮನ್‌ಗಳಾದ ಮಾರುತಿ, ಖಲೀಫ್‌, ನೀರಗಂಟಿಗಳಾದ ರಮೇಶ, ಬಸ್ಸಪ್ಪ, ಯಂಕಪ್ಪ, ಶರೀಫ್‌, ಆಲಂ, ಪರಿಚಾರಕರಾದ ಧರವೇಶ, ದುರುಗಪ್ಪ, ಪೌರ ಕಾರ್ಮಿಕರಾದ ಸಾಧು ಶಿವಪ್ಪ, ರೆಡ್ಡೆಪ್ಪ, ತಿರುಪತಿ, ರಂಗಪ್ಪ, ಗಂಗಮ್ಮ, ಹನುಮಂತಿ ಸೇರಿ ಇತರರಿದ್ದರು.

---
ಮೂರು ತಿಂಗಳ ವೇತನ ನೀಡಲಾಗುವುದು. ಅದಕ್ಕಾಗಿ ಪೌರ ಕಾರ್ಮಿಕರನ್ನು ಮನವೊಲಿಸುತ್ತಿದ್ದೇವೆ. ಉಳಿದ ವೇತನವನ್ನು ಹಂತ-ಹಂತವಾಗಿ ಪಾವತಿಸಲಾಗುವುದು.

-ಈರಣ್ಣ ಜಗ್ಲಿ, ಮುಖ್ಯಾಧಿಕಾರಿ, ಪ.ಪಂ.ಕವಿತಾಳ

ಆ.9ರಂದು ಪ.ಪಂ.ಕಾರ್ಯಾಲಯದಲ್ಲಿ ಧರಣಿ ನಡೆಸಲಾಗುವುದೆಂದು ಪೌರ ಕಾರ್ಮಿಕರು ನಮ್ಮ ಇಲಾಖೆಗೆ ಮನವಿ ನೀಡಿದ್ದು, ಸೂಕ್ತ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗುವುದು.

-ಅಮರೇಶ ಜಿ.ಕೆ., ಪಿಎಸ್‌ಐ.ಕವಿತಾಳ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ