ಆ್ಯಪ್ನಗರ

ಸಂಗೀತ ಶಿಕ್ಷಕರ ನೇಮಕಕ್ಕೆ ಆಗ್ರಹ

ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಹಂತಗಳಲ್ಲಿಸಂಗೀತ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ತಾಲೂಕು ಘಟಕದ ಪದಾಧಿಕಾರಿಗಳು, ಸಹಾಯಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.

Vijaya Karnataka 29 Jan 2020, 2:26 pm
ಲಿಂಗಸುಗೂರು : ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲಹಂತಗಳಲ್ಲಿಸಂಗೀತ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್‌ ತಾಲೂಕು ಘಟಕದ ಪದಾಧಿಕಾರಿಗಳು, ಸಹಾಯಕ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
Vijaya Karnataka Web requests for appointment of music teachers
ಸಂಗೀತ ಶಿಕ್ಷಕರ ನೇಮಕಕ್ಕೆ ಆಗ್ರಹ


ಪ್ರತಿ ವರ್ಷ ಸಂಗೀತ ಪದವೀಧರರಾಗಿ ಹೊರಬರುತ್ತಿರುವ ನೂರಾರು ಯುವಕರ ಬಾಳು ಅಂಧಕಾರದಲ್ಲಿಮುಳುಗಿದೆ. ಸಭೆ ಸಮಾರಂಭಗಳಲ್ಲಿಕಲೆ ಪ್ರದರ್ಶನ ಮಾಡಿ ಜೀವನ ನಿರ್ವಹಿಸುವ ಪರಿಸ್ಥಿತಿ ಎದುರಾಗಿದೆ. ರಾಜ್ಯದಲ್ಲಿಅಧಿಕೃತ ಮಾನ್ಯತೆ ಪಡೆದ ಕೆಲವೇ ಸಂಗೀತ ನೃತ್ಯ ಶಾಲೆಗಳಿದ್ದರೂ ಪ್ರೌಢ ಶಿಕ್ಷಣ ಮಂಡಳಿಯಲ್ಲಿಸಾವಿರಾರು ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಅನಧಿಕೃತ ಸಂಗೀತ ನೃತ್ಯ ಶಾಲೆಗಳಿಗೆ ಕಡಿವಾಣ ಹಾಕಬೇಕು. ಸಂಗೀತ ಕ್ಷೇತ್ರಕ್ಕೆ ನೀತಿ ರೂಪಿಸಲು ತಜ್ಞರ ಸಮಿತಿ ರಚಿಸಿ ಮಾರ್ಗಸೂಚಿ ತಯಾರಿಸಬೇಕು. ಅಕಾಡೆಮಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಸಂಘಟನೆಗಳಾಗುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ. ವಿಷಯ ಜ್ಞಾನವಿಲ್ಲದ ರಾಜಕೀಯ ಹಿಂಬಾಲಕರೇ ಸದಸ್ಯರಾಗಿ ಬರುತ್ತಿದ್ದು, ಅನುಭವಿ ಕಲಾವಿದರಿದ್ದರೂ ಅಸಹಾಯಕರಾಗಿದ್ದಾರೆ. ಕಾರಣ ಶಿಕ್ಷಣ ಕ್ಷೇತ್ರದ ಎಲ್ಲಹಂತಗಳಲ್ಲಿಸಂಗೀತ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಪದಾಧಿಕಾರಿಗಳು, ಕೋರಿದರು.

ಪರಿಷತ್‌ ತಾಲೂಕು ಸಂಚಾಲಕ ಮಹಾಂತೇಶ ಹೂಗಾರ, ಸಂಗಮೇಶ ವಸ್ತ್ರದ, ಮಾರುತಿ ಬಡಿಗೇರ, ಹನುಮೇಶ ಕುಲಕರ್ಣಿ, ಹರೀಶ ಕುಲಕರ್ಣಿ, ಸಿದ್ಧಲಿಂಗ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ