ಆ್ಯಪ್ನಗರ

ಗ್ರಾಮ ಲೆಕ್ಕಾಧಿಕಾರಿ ವಜಾಕ್ಕೆ ಆರ್‌ವೈಎಫ್‌ಐ ಒತ್ತಾಯ

ಬರ ಪರಿಹಾರ ಹೆಸರಲ್ಲಿ ರೈತರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಖರಾಬದಿನ್ನಿ ಗ್ರಾಮ ಲೆಕ್ಕಾಧಿಕಾರಿ ನರಸಪ್ಪ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ, ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ತಾಲೂಕು ಸಮಿತಿ ಪದಾಧಿಕಾರಿಗಳು, ತಹಸೀಲ್ದಾರ್‌ ಅಮರೇಶ ಬಿರಾದಾರ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.

Vijaya Karnataka 18 Oct 2018, 5:00 am
ಮಾನ್ವಿ : ಬರ ಪರಿಹಾರ ಹೆಸರಲ್ಲಿ ರೈತರನ್ನು ವಂಚಿಸಿದ ಆರೋಪ ಎದುರಿಸುತ್ತಿರುವ ಖರಾಬದಿನ್ನಿ ಗ್ರಾಮ ಲೆಕ್ಕಾಧಿಕಾರಿ ನರಸಪ್ಪ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ, ಭಾರತ ಕ್ರಾಂತಿಕಾರಿ ಯುವಜನ ಒಕ್ಕೂಟದ ತಾಲೂಕು ಸಮಿತಿ ಪದಾಧಿಕಾರಿಗಳು, ತಹಸೀಲ್ದಾರ್‌ ಅಮರೇಶ ಬಿರಾದಾರ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
Vijaya Karnataka Web rfif insists on dismissal of village accountant
ಗ್ರಾಮ ಲೆಕ್ಕಾಧಿಕಾರಿ ವಜಾಕ್ಕೆ ಆರ್‌ವೈಎಫ್‌ಐ ಒತ್ತಾಯ


ಅವರ ವಿರುದ್ಧ ಭ್ರಷ್ಟಾಚಾರ ಆರೋಪದಡಿ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಹಾಗೂ ಅವರು ರೈತರಿಂದ ಪಡೆದ ಹಣವನ್ನು ಮರಳಿ ರೈತರಿಗೆ ಕೊಡಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಆರ್‌ವೈಎಫ್‌ಐ ಸಂಘಟನೆಯ ತಾಲೂಕಾಧ್ಯಕ್ಷ ಗಂಗಪ್ಪ ತೋರಣದಿನ್ನಿ, ಉಪಾಧ್ಯಕ್ಷ ಕಿರಣ್‌ ಕುಮಾರ್‌ ತಡಕಲ್‌, ಪ್ರಧಾನ ಕಾರ್ಯದರ್ಶಿ ರಂಜಾನ್‌ ಅಮರಾವತಿ, ಅಮರೇಶ, ಬಸವರಾಜ ಹಿರೇದಿನ್ನಿ, ಮಹಾಂತೇಶ, ಅಯ್ಯಪ್ಪ, ಶರಣ ಕುಮಾರ ಮುದ್ದಂಗುಡ್ಡಿ, ಸಿದ್ರಾಮ ಸುಂಕನೂರು, ಯಲ್ಲಪ್ಪ ಮಲ್ಕಾಪುರ, ಜಯಪ್ಪ ಹಿರೇದಿನ್ನಿ, ಸಣ್ಣ ಮಹಾದೇವಪ್ಪ , ಮೌನೇಶ ಮರ್ಲಟ್ಟಿ, ಬಸವರಾಜ ಪೋತ್ನಾಳ, ದೇವರಾಜ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ