ಆ್ಯಪ್ನಗರ

ಬಡವರ ಅನುದಾನದಲ್ಲಿ ಶ್ರೀ ಮಂತರ ಶೃಂಗಾರ

ಎಸ್‌ಟಿಪಿ, ಟಿಎಸ್‌ಪಿ ಯೋಜನೆಯ ಪ್ರತ್ಯೇಕ ಅನುದಾನದಲ್ಲಿ ಎಸ್ಸಿ, ಎಸ್ಟಿ ಕಾಲೊನಿಗಳ ಬದಲಾಗಿ ಶ್ರೀಮಂತರ ಕಾಲೊನಿಗಳು ಕಂಗೊಳಿಸುತ್ತಿವೆ.

Vijaya Karnataka Web 20 Apr 2018, 5:00 am
ದೇವದುರ್ಗ : ಎಸ್‌ಟಿಪಿ, ಟಿಎಸ್‌ಪಿ ಯೋಜನೆಯ ಪ್ರತ್ಯೇಕ ಅನುದಾನದಲ್ಲಿ ಎಸ್ಸಿ, ಎಸ್ಟಿ ಕಾಲೊನಿಗಳ ಬದಲಾಗಿ ಶ್ರೀಮಂತರ ಕಾಲೊನಿಗಳು ಕಂಗೊಳಿಸುತ್ತಿವೆ.
Vijaya Karnataka Web RAC-RCH19DEO01


ಸ್ಥಳೀಯ ಪುರಸಭೆ ವ್ಯಾಪ್ತಿಯ ಸಿಪ್ಪತಗೇರಾ ಕಾಲೊನಿಯಲ್ಲಿ ವಾಸಿಸುತ್ತಿರುವ ಎಸ್ಸಿ, ಎಸ್ಟಿ ನಿವಾಸಿಗಳ ಬಡಾವಣೆ ಅಭಿವೃದ್ಧಿಗಾಗಿ 2015-16ನೇ ಸಾಲಿನಲ್ಲಿ 2.ಕೋಟಿ 10 ಲಕ್ಷ ರೂ, ಅನುದಾನ ಮಂಜೂರಾಗಿದೆ. ಈ ಅನುದಾನದಲ್ಲಿ ಸಿಸಿ ರಸ್ತೆ ಸೇರಿ ಇನ್ನಿತರ ಸೌಲಭ್ಯಗಳನ್ನು ಹಿಂದುಳಿದ ವರ್ಗಗಳಿಗೆ ಕಲ್ಪಿಸಿಕೊಡಬೇಕಾದ ಅಧಿಕಾರಿಗಳು ಅನುದಾನ ದುರ್ಬಳಕೆಗೆ ಸಹಕರಿಸಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಬಡಾವಣೆಗಳ ಅಭಿವೃದ್ಧಿ ಮಂಜೂರಾದ ಅನುದಾನದಲ್ಲಿ ಶ್ರೀಮಂತರ ಮನೆಗಳ ಅಂಗಳಗಳು ಕಂಗೊಳಿಸುತ್ತಿವೆ. ಮೇಲ್ನೋಟಕ್ಕೆ ಯೋಜನೆ ಅನುದಾನ ದುರ್ಬಳಕೆ ಆಗಿರುವುದು ಕಂಡು ಬರುತ್ತಿದೆ.

ಪರದಾಟ: ಎಸ್‌ಟಿಪಿ, ಟಿಎಸ್‌ಪಿ ಯೋಜನೆ ಅನುದಾನದಲ್ಲಿ ಶ್ರೀಮಂತರ ಮನೆಗಳ ಎದುರುಗಡೆ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಎತ್ತರದಲ್ಲಿ ಸಿಸಿ ರಸ್ತೆ ನಿರ್ಮಾಣ ಆಗಿರುವುದರಿಂದ ಮೇಲ್ಮನೆಗಳ ಗಲೀಜು ನೀರು ಸೇರಿ ಮಳೆ ನೀರು ದಲಿತರ ಮನೆಗಳಿಗೆ ನುಗ್ಗುತ್ತಿದೆ. ವಾರಗಟ್ಟಲೇ ಕೊಳಚೆ ನೀರು ಮನೆಗಳ ಮುಂದೆ ನಿಲ್ಲುತ್ತದೆ. ರಸ್ತೆ ದಾಟಲು ಹರಸಹಾಸ ಪಡಬೇಕಾಗಿದೆ. ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ದಿನನಿತ್ಯ ನಾನಾ ತೊಂದರೆಗಳು ಎಸ್ಸಿ, ಎಸ್ಟಿ ನಿವಾಸಿಗಳು ಅನುಭವಿಸುತ್ತಿದ್ದಾರೆ.

ನಿರ್ಲಕ್ಷ ್ಯ: ಎಸ್ಸಿ,ಎಸ್ಟಿ ಕಾಲೊನಿಯಲ್ಲಿ ಕಾಮಗಾರಿ ನಿರ್ಮಾಣ ಮಾಡಿರುವ ಗುತ್ತಿಗೆದಾರರೊಂದಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಶಾಮೀಲಾಗಿ ಅನುದಾನ ದುರುಪಯೋಗಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಾರ್ಡಿನ ನಿವಾಸಿಗಳು ಆಕ್ರೋಶ ಹೊರ ಹಾಕಿದ್ದಾರೆ. ತಕ್ಷ ಣ ಜಿಲ್ಲಾಧಿಕಾರಿಗಳು ಗಮನ ಹರಿಸಿ ಎಸ್ಸಿ, ಎಸ್ಟಿ ನಿವಾಸಿಗಳು ವಾಸಿಸುತ್ತಿರುವ ಸ್ಥಳಗಳಲ್ಲಿ ಬೇಕಾಬಿಟ್ಟಿ ಹಾಗೂ ಅರೆಬರೆ ಕಾಮಗಾರಿ ಮಾಡಿರುವ ಗುತ್ತಿಗೆದಾರರಿಗೆ ಶೋಕಾಸ್‌ ನೋಟಿಸ್‌ ಜಾರಿ ಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ