ಆ್ಯಪ್ನಗರ

2ನೇ ಬಾರಿ ಕೊಚ್ಚಿಹೋದ ಗಡ್ಡಿಹಳ್ಳ ರಸ್ತೆ

ತಾಲೂಕಿನ ಸಂತೆಕೆಲ್ಲೂರು ಹೊರವಲಯದ ಗಡ್ಡಿಹಳ್ಳಕ್ಕೆ ನಿರ್ಮಿಸಿರುವ ತಾತ್ಕಾಲಿಕ ಸೇತುವೆ, ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಮತ್ತೊಮ್ಮೆ ಕೊಚ್ಚಿಹೋಗಿದ್ದು, ರಾಷ್ಟ್ರೀಯ ಹೆದ್ದಾರಿ 150 ಎ-ದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.

Vijaya Karnataka 23 Jul 2019, 5:00 am
ಮಸ್ಕಿ : ತಾಲೂಕಿನ ಸಂತೆಕೆಲ್ಲೂರು ಹೊರವಲಯದ ಗಡ್ಡಿಹಳ್ಳಕ್ಕೆ ನಿರ್ಮಿಸಿರುವ ತಾತ್ಕಾಲಿಕ ಸೇತುವೆ, ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಮತ್ತೊಮ್ಮೆ ಕೊಚ್ಚಿಹೋಗಿದ್ದು, ರಾಷ್ಟ್ರೀಯ ಹೆದ್ದಾರಿ 150 ಎ-ದಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತವಾಗಿದೆ.
Vijaya Karnataka Web RAC-RCH22MSK03


ಕಳೆದ ವಾರ ಭಾರಿ ಮಳೆಗೆ ಗಡ್ಡಿಹಳ್ಳದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ, ಹಗಲಿರುಳು ಶ್ರಮಿಸಿ ಎರಡ್ಮೂರು ದಿನಗಳಲ್ಲಿ ತಾತ್ಕಾಲಿಕ ರಸ್ತೆ ನಿರ್ಮಿಸಿತ್ತು. ಸೋಮವಾರ ಮಧ್ಯಾಹ್ನ ಸುರಿದ ಭಾರಿ ಮಳೆಗೆ ಈ ತಾತ್ಕಾಲಿಕ ಸೇತುವೆ ಮತ್ತೊಮ್ಮೆ ಕೊಚ್ಚಿಹೋಗಿದೆ. ವಾಹನ ಸವಾರರು, ಸಂತೆಕೆಲ್ಲೂರು ಮೂಲಕ ಸುತ್ತು ಬಳಸಿ, ಲಿಂಗಸುಗೂರು ತಲುಪಬೇಕಿದೆ. ಸೇತುವೆ ಶಿಥಿಲಗೊಂಡಿದ್ದರಿಂದ ಸಂಚಾರ ಸ್ಥಗಿತಗೊಳಿಸಲಾಗಿದ್ದರೂ ದ್ವಿಚಕ್ರ ವಾಹನ ಸವಾರರು, ಅಪಾಯ ಲೆಕ್ಕಿಸದೇ ಸಂಚರಿಸುವುದು ಕಂಡುಬಂದಿದೆ. ತಾತ್ಕಾಲಿಕ ಸೇತುವೆ ಸಂಪೂರ್ಣ ಕುಸಿಯುವ ಸ್ಥಿತಿಯಲ್ಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ