ಆ್ಯಪ್ನಗರ

ರಾಕಿಂಗ್‌ ಸ್ಟಾರ್‌ ಯಶ್‌ ರೋಡ್‌ಶೋ

ಚಿತ್ರನಟ ರಾಕಿಂಗ್‌ಸ್ಟಾರ್‌ ಯಶ್‌ ಸೋಮವಾರ ಸಂಜೆ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಅವರ ಪರ ರೋಡ್‌ ಶೋ ನಡೆಸಿದರು.

Vijaya Karnataka 8 May 2018, 9:38 am
ಲಿಂಗಸುಗೂರು : ಚಿತ್ರನಟ ರಾಕಿಂಗ್‌ ಸ್ಟಾರ್‌ ಯಶ್‌ ಸೋಮವಾರ ಸಂಜೆ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್‌ ಅವರ ಪರ ರೋಡ್‌ ಶೋ ನಡೆಸಿದರು.
Vijaya Karnataka Web RAC-RCH07LNG03


ಸ್ಥಳೀಯ ಬಿಜೆಪಿ ಕಚೇರಿಯಿಂದ ಹೊರಟ ಪ್ರಚಾರ ರಾರ‍ಯಲಿ ಬಸ್‌ ಸ್ಟ್ಯಾಂಡ್‌ ವೃತ್ತ, ಗಡಿಯಾರ ಚೌಕ್‌, ಹಳೆ ಬಸ್‌ ಸ್ಟ್ಯಾಂಡ್‌, ಬಸವಸಾಗರ ಕ್ರಾಸ್‌ ಸೇರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭ ಮಾತನಾಡಿದ ಯಶ್‌, ಜನಾನುರಾಗಿ ಅಭಿವೃದ್ಧಿಪರ ಚಿಂತಕರಾಗಿರುವ ಮಾನಪ್ಪ ವಜ್ಜಲ್‌ ಅವರು ನಮ್ಮ ಆತ್ನೀಯ ಸ್ನೇಹಿತರು, ನಾನು ಯಾವುದೇ ಪಕ್ಷ ದ ಪರವಾಗಿ ಪ್ರಚಾರ ನಡೆಸುತ್ತಿಲ್ಲ. ಬದಲಾಗಿ ನಮ್ಮ ಸ್ನೇಹಿತರ ಪರವಾಗಿ ಜನರಲ್ಲಿ ಮತಯಾಚಿಸಲು ಬಂದಿದ್ದೇನೆ. ಯುವಕರ ಬಗ್ಗೆ ಕಾಳಜಿ ಇರುವ ಮಾನಪ್ಪ ವಜ್ಜಲ್‌ ಅವರಿಗೆ ಜನರು ಮತ್ತೊಮ್ಮೆ ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಬಿಗಿ ಭದ್ರತೆ: ನಟ ಯಶ್‌ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆಯೇ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದರು. ವಿಶೇಷ ಮಿಲಿಟರಿ ಪಡೆಯಿಂದ ಪ್ರಚಾರ ರ‍್ಯಾಲಿಗೆ ಬಿಗಿ ಭದ್ರತೆ ನೀಡಲಾಗಿತ್ತು. ಸ್ಥಳೀಯ ಪೊಲೀಸರು ಬಸ್‌ ಸ್ಟ್ಯಾಂಡ್‌ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದರು. ಯಶ್‌ ಅಭಿಮಾನಿಗಳ ಕೇಕೆ, ಶಿಳ್ಳೆ, ಚಪ್ಪಾಳೆ ಕರತಾಡನ ಎಲ್ಲವೂ ರ‍್ಯಾಲಿಯಲ್ಲಿ ಮೇಳೈಸಿತ್ತು.

ಮುಖಂಡರಾದ ಡಾ.ಶಿವಬಸಪ್ಪ, ಗಿರಿಮಲ್ಲನಗೌಡ, ಗೋವಿಂದ ನಾಯಕ, ಮುದುಕಪ್ಪ ನಾಯಕ, ರಮೇಶ ಕಟ್ಟಿಮನಿ, ಅಮರೇಶ, ಭೀಮಣ್ಣ ಸೇರಿ ಅನೇಕ ಮುಖಂಡರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ