ಆ್ಯಪ್ನಗರ

1.75 ಕೋಟಿ ರೂ. ಕ್ರಿಯಾಯೋಜನೆಗೆ ಒಪ್ಪಿಗೆ

ಪುರಸಭೆಯ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 1.75 ಕೋಟಿ ರೂ. ಅನುದಾನದ ಕ್ರಿಯಾಯೋಜನೆಗೆ ಗುರುವಾರ ನಡೆದ ತುರ್ತು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.

Vijaya Karnataka 27 Jul 2018, 5:00 am
ಲಿಂಗಸುಗೂರು : ಪುರಸಭೆಯ 14ನೇ ಹಣಕಾಸು ಯೋಜನೆಯಡಿ ಬಿಡುಗಡೆಯಾದ 1.75 ಕೋಟಿ ರೂ. ಅನುದಾನದ ಕ್ರಿಯಾಯೋಜನೆಗೆ ಗುರುವಾರ ನಡೆದ ತುರ್ತು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
Vijaya Karnataka Web RAC-RCH26LNG04


ಸಭೆಯ ಅಧ್ಯಕ್ಷತೆವಹಿಸಿದ್ದ ಖಾದರ್‌ಪಾಷಾ ಮಾತನಾಡಿ, 14ನೇ ಹಣಕಾಸು ಯೋಜನೆಯಡಿ 1.75 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಈ ಅನುದಾನದಲ್ಲಿ ಚರಂಡಿ, ಸಿಸಿ ರಸ್ತೆ ಕಾಮಗಾರಿಗೆ 50.60 ಲಕ್ಷ ರೂ. ಮೀಸಲಿದೆ. ಪ್ರತಿ ವಾರ್ಡಿಗೆ 2.50 ಲಕ್ಷ ರೂ. ಅನುದಾನ ನೀಡಲಾಗುವುದು. ಸಿಸಿ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ ಎಂದರು.

ಬೀದಿ ದೀಪ ಅಳವಡಿಸುವ ವಾಹನ ಖರೀದಿಗೆ 10 ಲಕ್ಷ ರೂ., ವಿದ್ಯುತ್‌ ಸಾಮಗ್ರಿಗಳಿಗೆ 7 ಲಕ್ಷ ರೂ., ಸಾಂಸ್ಕೃತಿಕ ಭವನಕ್ಕೆ ಕಾಂಪೌಂಡ್‌ ನಿರ್ಮಿಸಲು 20 ಲಕ್ಷ ರೂ., ಒಣ ಕಸ ಹಾಗೂ ಹಸಿ ಕಸ ಬೇರ್ಪಡಿಸುವ ಯಂತ್ರ ಖರೀದಿಗೆ 10 ಲಕ್ಷ ರೂ., ಕಸ ವಿಲೇವಾರಿ 5 ವಾಹನಗಳ ಖರೀದಿಗೆ 25 ಲಕ್ಷ ರೂ., ಸಾರ್ವಜನಿಕ ಶೌಚಾಲಯ ನಿರ್ವಹಣೆಗೆ 5 ಲಕ್ಷ ರೂ., ಸ್ಮಶಾನ ಅಭಿವೃದ್ಧಿಗೆ 8 ಲಕ್ಷ ರೂ., ಕುಡಿವ ನೀರು ಸರಬರಾಜು ಸಾಮಗ್ರಿಗಳ ಖರೀದಿಗೆ 26.40 ಲಕ್ಷ ರೂ., ಉದ್ಯಾನ ಅಭಿವೃದ್ಧಿಗೆ 8 ಲಕ್ಷ ರೂ. ಅನುದಾನ ಮೀಸಲಿಟ್ಟು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕುಮಾರಸ್ವಾಮಿ ಸಾಲ್ಮನಿ, ಅನೀಸ್‌ ಪಾಷಾ, ಬಾಬಾ ಖಾಜಿ, ಬಾಬುರೆಡ್ಡಿ, ಗುಂಡುರಾವ್‌, ಮುಖ್ಯಾಧಿಕಾರಿ ಗುಂಡಪ್ಪ ಸಾಲಗುಂದ ಸೇರಿ ಇತರರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ