ಆ್ಯಪ್ನಗರ

ಎಟಿಎಂನಿಂದ 22.70ಲಕ್ಷ ರೂ. ಕಳವು

ಇಲ್ಲಿನ ಎಸ್‌ಬಿಐ ಎಟಿಎಂ ಷಟರ್ ಮುರಿದ ಕಳ್ಳರು, ಭಾನುವಾರ 22 ಲಕ್ಷ 70 ಸಾವಿರದ 100 ರೂ. ಕದ್ದೊಯ್ದಿದ್ದಾರೆ.

Vijaya Karnataka 10 Oct 2017, 7:41 am
ಹಟ್ಟಿಚಿನ್ನದಗಣಿ (ರಾಯಚೂರು) : ಇಲ್ಲಿನ ಎಸ್‌ಬಿಐ ಎಟಿಎಂ ಷಟರ್ ಮುರಿದ ಕಳ್ಳರು, ಭಾನುವಾರ 22 ಲಕ್ಷ 70 ಸಾವಿರದ 100 ರೂ. ಕದ್ದೊಯ್ದಿದ್ದಾರೆ.
Vijaya Karnataka Web rs 22 70 lakh from atm stolen
ಎಟಿಎಂನಿಂದ 22.70ಲಕ್ಷ ರೂ. ಕಳವು


ಎಟಿಎಂ ಕೊಠಡಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾ ವೈರ್‌ಗಳನ್ನು ಕತ್ತರಿಸಿದ ಕಳ್ಳರು, ಪಾಸ್‌ವರ್ಡ್ ಬಳಸಿ, ಎಲ್ಲ ಹಣದೊಂದಿಗೆ ಪರಾರಿಯಾಗಿದ್ದಾರೆ. ಡಿವೈಎಸ್‌ಪಿ ಎಸ್.ಎಚ್.ಸುಬೇದಾರ್, ಸಿಪಿಐ ವಿ.ಎಸ್.ಹಿರೇಮಠ, ಪಿಎಸ್‌ಐ ಶೈಲಾ ಪ್ಯಾಟಿಶೆಟ್ಟರ್ ಅವರು ಸ್ಥಳಕ್ಕೆ ಭೇಟಿನೀಡಿದ್ದರು. ಪೊಲೀಸ್ ಶ್ವಾನ, ಬೆರಳಚ್ಚುಗಾರರ ತಂಡ ಪರಿಶೀಲಿಸಿದವು. ಬ್ಯಾಂಕ್ ವ್ಯವಸ್ಥಾಪಕ ಅಶೋಕಕುಮಾರ ದರಬಾರಿ ನೀಡಿದ ದೂರು ಆಧರಿಸಿ, ಸ್ಥಳೀಯ ಠಾಣೆಯಲ್ಲಿ ಸೋಮವಾರ ಬೆಳಗಿನ ಜಾವ ಪ್ರಕರಣ ದಾಖಲಾಗಿದೆ. ಎಟಿಎಂಗೆ ಯಾವುದೇ ಧಕ್ಕೆ ಮಾಡದೆ ಪಾಸ್‌ವರ್ಡ್ ಬಳಸಿ ಹಣ ಕದ್ದೊಯ್ದಿರುವುದು ಅಚ್ಚರಿಮೂಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ