ಆ್ಯಪ್ನಗರ

ಸ್ವಾಮಿ ವಿವೇಕಾನಂದ ಸಹಕಾರಿಗೆ 36 ಲಕ್ಷ ರೂ. ಲಾಭ

ಪಟ್ಟಣದ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸಂಘದ 17ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ನಡೆಯಿತು.

Vijaya Karnataka 22 Sep 2018, 5:00 am
ಕವಿತಾಳ : ಪಟ್ಟಣದ ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಶುಕ್ರವಾರ ಸಂಘದ 17ನೇ ವರ್ಷದ ಸರ್ವ ಸದಸ್ಯರ ಮಹಾಸಭೆ ನಡೆಯಿತು.
Vijaya Karnataka Web RAC-RCH-21KAVITAL1


ಸಂಘದ ವ್ಯವಸ್ಥಾಪಕ ಲಕ್ಷ್ಮಿಪತಿ ಬಾಗೋಡಿ, ವಾರ್ಷಿಕ ವರದಿ ಮಂಡಿಸಿ ಮಾತನಾಡಿ, 2017-18ನೇ ಸಾಲಿನಲ್ಲಿ ಒಟ್ಟು 36.1ಲಕ್ಷ ರೂ. ನಿವ್ವಳ ಲಾಭ ಹೊಂದಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದ ಸಂಘದ ಅಧ್ಯಕ್ಷ ಅಮರಗುಂಡಪ್ಪ ಕಂದಗಲ್‌ ಮಾತನಾಡಿ, ಪ್ರಸಕ್ತ ವರ್ಷದಿಂದ ಷೇರುದಾರರಿಗೆ ಶೇ.15ರಷ್ಟು ಲಾಭಾಂಶ ನೀಡಲಾಗುವುದು ಎಂದರು.

ಸಂಗಮೇಶ, ಅರಳಯ್ಯ ಶೆಟ್ಟಿ, ಸಿಬ್ಬಂದಿ ರಾಘವೇಂದ್ರ ಕುಲಕರ್ಣಿ ಮಾತನಾಡಿದರು. ಸಭೆಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಶರಣಗೌಡ ಗೂಗೇಬಾಳ, ರಾಜೇಶ ಬನ್ನಿಗಿಡ, ಗುರುರಾಜ ಬಾಗೋಡಿ, ಜಯರಾಂ ಉಡುಪಿ, ಈಶಪ್ಪ ಕಾಮರೆಡ್ಡಿ, ಶರಣಬಸವ ಕಾರಟಗಿ, ಮಲ್ಲಪ್ಪ ಸಿಂಧನೂರು, ಕನಕ ಬ್ಯಾಂಕಿನ ಅಧ್ಯಕ್ಷ ಶರಣಪ್ಪ ರೂಢಗಿ, ಗಂಗಪ್ಪ ಲಿಂಗಸುಗೂರು, ಸಿಬ್ಬಂದಿ ಅಮರೇಶ, ಪ್ರತಿಭಾ, ಕವಿತಾ, ರಾಜೇಶ್ವರಿ ಸೇರಿ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ