ಆ್ಯಪ್ನಗರ

ಆರ್‌ಟಿಪಿಎಸ್: ಕಲ್ಲಿದ್ದಲು ಸಂಗ್ರಹಣೆಯಲ್ಲಿ ಹೊಗೆ

ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ದ ಕಲ್ಲಿದ್ದಲು ಸಂಗ್ರಹಣೆ ಪ್ರದೇಶದ ಕಲ್ಲಿದ್ದಲಿನಲ್ಲಿ ಮಂಗಳವಾರ ಹೊಗೆ ಕಾಣಿಸಿಕೊಂಡಿತ್ತು.

Vijaya Karnataka 1 Aug 2018, 12:00 am
ರಾಯಚೂರು: ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಕೇಂದ್ರ(ಆರ್‌ಟಿಪಿಎಸ್)ದ ಕಲ್ಲಿದ್ದಲು ಸಂಗ್ರಹಣೆ ಪ್ರದೇಶದ ಕಲ್ಲಿದ್ದಲಿನಲ್ಲಿ ಮಂಗಳವಾರ ಹೊಗೆ ಕಾಣಿಸಿಕೊಂಡಿತ್ತು.
Vijaya Karnataka Web rtps smoke in coal collection
ಆರ್‌ಟಿಪಿಎಸ್: ಕಲ್ಲಿದ್ದಲು ಸಂಗ್ರಹಣೆಯಲ್ಲಿ ಹೊಗೆ


ಈ ಪ್ರದೇಶದಲ್ಲಿ ಸದ್ಯ 4.20ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲಿದೆ. ಕಲ್ಲಿದ್ದಲಿಗೆ ಬೆಂಕಿ ಹೊತ್ತುವುದನ್ನು ತಡೆಯಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿ)ದ ಅಧಿಕಾರಿಗಳು, ವಿದ್ಯುತ್ ಕೇಂದ್ರದ ಅಗ್ನಿಶಾಮಕ ಸಿಬ್ಬಂದಿ ನೆರವು ಪಡೆದರು.

ಬೆಳಗ್ಗೆ ಕಲ್ಲಿದ್ದಲು ಸಂಗ್ರಹಣೆ ಪ್ರದೇಶದಲ್ಲಿ ಇರಿಸಿದ್ದ ದಾಸ್ತಾನಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಕಲ್ಲಿದ್ದಲಿಗೆ ಬೆಂಕಿ ಹೊತ್ತಿಕೊಳ್ಳುವುದನ್ನು ತಡೆಯಲು ಕಾರ್ಯಾಚರಣೆ ನಡೆಸಿದರು. ಕಲ್ಲಿದ್ದಲಿಗೆ ನೀರು ಸಿಂಪರಣೆಮಾಡಿ ಅನಾಹುತ ತಪ್ಪಿಸಿದರು.

ಈ ಬಗ್ಗೆ ಆರ್‌ಟಿಪಿಎಸ್ ಇ.ಡಿ. ಚಂದ್ರಶೇಖರ್ ಪ್ರತಿಕ್ರಿಯಿಸಿ, ‘‘ಕಲ್ಲಿದ್ದಲು ಸಂಗ್ರಹಣೆ ಪ್ರದೇಶದಲ್ಲಿ ಹೊಗೆ ಕಾಣಿಸಿದ್ದು ನಿಜ. ಆದರೆ, ಇದೊಂದು ಸಾಮಾನ್ಯ ಘಟನೆ. ಜೋರಾಗಿ ಗಾಳಿ ಬೀಸಿದಾಗ ಕಲ್ಲಿದ್ದಲಿನಲ್ಲಿ ಬೆಂಕಿ ಹೊತ್ತುವುದು ಸಹಜ’’ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ