ದೇವದುರ್ಗ: ತಾಲೂಕಿನ ಕ್ಯಾದಿಗೇರಾ, ರಾಮದುರ್ಗ, ಶಾವಂತಗೇರಾ ಹಾಗೂ ಜಾಗಟಗಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಮೇಲ್ದರ್ಜೆಗೇರಿಸಲು ಹೈದರಾಬಾದ್ ಕರ್ನಾಟಕ ವಿನೋಚನಾ ವೇದಿಕೆ, ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಾದೇಶಿಕ ಆಯುಕ್ತ ಟಿ.ನಾರಾಯಣಗೌಡ ಅವರಿಗೆ ಗುರುವಾರ ಮನವಿ ಸಲ್ಲಿಸಿ ಆಗ್ರಹಿಸಿತು.
ಈ ನಾಲ್ಕು ಗ್ರಾಮಗಳಲ್ಲಿ8ನೇ ತರಗತಿವರೆಗೆ ಶಾಲೆಗಳು ನಡೆಯುತ್ತಿದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಈ ಗ್ರಾಮಗಳ ಮಕ್ಕಳಿಗೆ ತುಂಬಾ ಅನನುಕೂಲಗಳಾಗುತ್ತಿವೆ. ಈ ಎಲ್ಲಗ್ರಾಮಗಳ ಸುತ್ತಮುತ್ತ 9 ಹಾಗೂ 10ನೇ ತರಗತಿವರೆಗಿನ ಶಾಲೆಗಳು ಇಲ್ಲ. 15 ರಿಂದ 20 ಕಿ.ಮೀ. ದೂರದ ಊರುಗಳಲ್ಲಿಶಾಲೆ ಪ್ರವೇಶ ಪಡೆಯಬೇಕಾದ ಪರಿಸ್ಥಿತಿ ಇದೆ. ನಾನಾ ಸೌಲಭ್ಯಗಳ ಕೊರತೆಯಿಂದಾಗಿ ಈ ಗ್ರಾಮಗಳ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಡೋಲಾಯಮಾನ: ಸದ್ಯ ರಾಮದುರ್ಗ ಸರಕಾರಿ ಶಾಲೆಯಲ್ಲಿ64 ಮಕ್ಕಳು 8ನೇ ತರಗತಿಯಲ್ಲಿಓದುತ್ತಿದ್ದಾರೆ. ಜಾಗಟಗಲ್ ಗ್ರಾಮದ ಶಾಲೆಯಲ್ಲಿ36, ಶಾವಂತಗೇರಾ ಗ್ರಾಮದ ಶಾಲೆಯಲ್ಲಿ31 ಹಾಗೂ ಕ್ಯಾದಿಗೇರಾ ಗ್ರಾಮದ ಸರಕಾರಿ ಶಾಲೆಯಲ್ಲಿ35 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳ ಭವಿಷ್ಯ ಮುಂದಿನ ವರ್ಷ ಡೋಲಾಯಮಾನವಾಗಲಿದೆ. ಶೈಕ್ಷಣಿಕ ವರ್ಷ ಪೂರ್ವದಲ್ಲೇ 9 ಮತ್ತು ಮುಂದಿನ ವರ್ಷ 10ನೇ ತರಗತಿವರೆಗೆ ಓದಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರಾಮಣ್ಣ ಎನ್.ಗಣೇಕಲ್, ವೀರಮ್ಮ ಅಳಗೇರಾ, ಬೂದಯ್ಯಸ್ವಾಮಿ, ಶಿವಕುಮಾರ ಶಿವಂಗಿ, ನಿಂಗಪ್ಪ ರಾಮದುರ್ಗ, ಭೀಮಣ್ಣ ಕಲ್ಮನೆ ಇದ್ದರು.
ಈ ನಾಲ್ಕು ಗ್ರಾಮಗಳಲ್ಲಿ8ನೇ ತರಗತಿವರೆಗೆ ಶಾಲೆಗಳು ನಡೆಯುತ್ತಿದ್ದು ಮುಂದಿನ ವಿದ್ಯಾಭ್ಯಾಸಕ್ಕೆ ಈ ಗ್ರಾಮಗಳ ಮಕ್ಕಳಿಗೆ ತುಂಬಾ ಅನನುಕೂಲಗಳಾಗುತ್ತಿವೆ. ಈ ಎಲ್ಲಗ್ರಾಮಗಳ ಸುತ್ತಮುತ್ತ 9 ಹಾಗೂ 10ನೇ ತರಗತಿವರೆಗಿನ ಶಾಲೆಗಳು ಇಲ್ಲ. 15 ರಿಂದ 20 ಕಿ.ಮೀ. ದೂರದ ಊರುಗಳಲ್ಲಿಶಾಲೆ ಪ್ರವೇಶ ಪಡೆಯಬೇಕಾದ ಪರಿಸ್ಥಿತಿ ಇದೆ. ನಾನಾ ಸೌಲಭ್ಯಗಳ ಕೊರತೆಯಿಂದಾಗಿ ಈ ಗ್ರಾಮಗಳ ಮಕ್ಕಳು ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸುತ್ತಿದ್ದಾರೆ. ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದರು.
ಡೋಲಾಯಮಾನ: ಸದ್ಯ ರಾಮದುರ್ಗ ಸರಕಾರಿ ಶಾಲೆಯಲ್ಲಿ64 ಮಕ್ಕಳು 8ನೇ ತರಗತಿಯಲ್ಲಿಓದುತ್ತಿದ್ದಾರೆ. ಜಾಗಟಗಲ್ ಗ್ರಾಮದ ಶಾಲೆಯಲ್ಲಿ36, ಶಾವಂತಗೇರಾ ಗ್ರಾಮದ ಶಾಲೆಯಲ್ಲಿ31 ಹಾಗೂ ಕ್ಯಾದಿಗೇರಾ ಗ್ರಾಮದ ಸರಕಾರಿ ಶಾಲೆಯಲ್ಲಿ35 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಕ್ಕಳ ಭವಿಷ್ಯ ಮುಂದಿನ ವರ್ಷ ಡೋಲಾಯಮಾನವಾಗಲಿದೆ. ಶೈಕ್ಷಣಿಕ ವರ್ಷ ಪೂರ್ವದಲ್ಲೇ 9 ಮತ್ತು ಮುಂದಿನ ವರ್ಷ 10ನೇ ತರಗತಿವರೆಗೆ ಓದಲು ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು. ರಾಮಣ್ಣ ಎನ್.ಗಣೇಕಲ್, ವೀರಮ್ಮ ಅಳಗೇರಾ, ಬೂದಯ್ಯಸ್ವಾಮಿ, ಶಿವಕುಮಾರ ಶಿವಂಗಿ, ನಿಂಗಪ್ಪ ರಾಮದುರ್ಗ, ಭೀಮಣ್ಣ ಕಲ್ಮನೆ ಇದ್ದರು.