ಆ್ಯಪ್ನಗರ

ಶಾಲೆ, ಕಾಲೇಜು ಕೊಠಡಿ ಕಾಮಗಾರಿ ನನೆಗುದಿಗೆ

ಸ್ಥಳೀಯ ಪದವೀಪೂರ್ವ ಕಾಲೇಜು ಕಟ್ಟಡ ಸೇರಿ ಗಾಂಧಿನಗರ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆ ಕೊಠಡಿ ನಿರ್ಮಾಣ ಕಾಮಗಾರಿ ಕಳೆದ ಮೂರು ತಿಂಗಳಿಂದ ನನೆಗುದಿಗೆ ಬಿದ್ದಿದೆ.

Vijaya Karnataka 21 Oct 2019, 3:42 pm
ಜಾಲಿಹಾಳ: ಸ್ಥಳೀಯ ಪದವೀಪೂರ್ವ ಕಾಲೇಜು ಕಟ್ಟಡ ಸೇರಿ ಗಾಂಧಿನಗರ ಗ್ರಾಮದ ಸ.ಮಾ.ಹಿ.ಪ್ರಾ.ಶಾಲೆ ಕೊಠಡಿ ನಿರ್ಮಾಣ ಕಾಮಗಾರಿ ಕಳೆದ ಮೂರು ತಿಂಗಳಿಂದ ನನೆಗುದಿಗೆ ಬಿದ್ದಿದೆ.
Vijaya Karnataka Web school college room workshops
ಶಾಲೆ, ಕಾಲೇಜು ಕೊಠಡಿ ಕಾಮಗಾರಿ ನನೆಗುದಿಗೆ


ಪದವಿಪೂರ್ವ ಕಾಲೇಜಿನ ಕೆಲ ಕೊಠಡಿಗಳು ಕುಸಿದು ಸಂಪೂರ್ಣ ಹದಗೆಟ್ಟಿದ್ದರಿಂದ ಎಚ್ಚೆತ್ತ ಸರಕಾರ, 2018-19ನೇ ಸಾಲಿನಲ್ಲಿಎರಡು ಕೊಠಡಿ ನಿರ್ಮಿಸಲು 30ಲಕ್ಷ ರೂ. ಮಂಜೂರು ಮಾಡಿದೆ. ಕಾಮಗಾರಿ ನಿರ್ವಹಣೆ ಹೊಣೆಯನ್ನು ಭೂಸೇನೆ ಇಲಾಖೆ ಅಧಿಕಾರಿಗಳು ಪಡೆದಿದ್ದು, ಕಳೆದ 6ತಿಂಗಳಿಂದ ಕಾಲೇಜು ಮುಂಭಾಗದ ಸ್ಥಳದಲ್ಲಿಕೊಠಡಿಗಳ ಕಾಮಗಾರಿ ಪ್ರಾರಂಭಿಸಿದ್ದಾರೆ. ಪ್ರಾರಂಭದಲ್ಲಿಮೂರು ತಿಂಗಳಕಾಲ ಚುರುಕಿನಿಂದ ಕೈಗೊಂಡ ಕಾಮಗಾರಿ ನಂತರ ಮಂದಗತಿಯಲ್ಲಿಸಾಗಿದೆ.

ಬುನಾದಿಯಿಂದ ಬೇಸ್ಮೆಂಟ್‌ವರೆಗೆ ಗೋಡೆ ನಿರ್ಮಾಣದ ಕೆಲಸ ಮಾತ್ರ ಮಾಡಲಾಗಿದೆ. ಇನ್ನೂ ಶೇ.60ರಷ್ಟು ಕಾಮಗಾರಿ ಬಾಕಿ ಉಳಿದಿದ್ದು ಮೂರು ತಿಂಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿದೆ. ಗಾಂಧಿನಗರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ಮಾಣ ಕಾಮಗಾರಿಯೂ ಇದಕ್ಕೆ ಹೊರತಾಗಿಲ್ಲ.

ಸ್ಥಳಾವಕಾಶದ ಕೊರತೆಯಿಂದ ಹಳೆ ಕೊಠಡಿಗಳ ಮೇಲ್ಭಾಗದಲ್ಲಿಕಾಮಗಾರಿ ಕೈಗೊಳ್ಳಲಾಗಿದ್ದು ಕಳಪೆ ಕಾಮಗಾರಿ ಆರೋಪ ಕೇಳಿಬಂದಿವೆ. ಎಸ್‌ಡಿಎಂಸಿ ಅಧ್ಯಕ್ಷ ಹಾಗೂ ಕೆಲ ಸದಸ್ಯರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನ ಇಲ್ಲದಾಗಿದೆ. ಒಟ್ಟಾರೆ ಸರಕಾರ ಗ್ರಾಮಗಳಲ್ಲಿಸರಕಾರಿ ಶಾಲೆ ವಿದ್ಯಾರ್ಥಿಗಳಿಗೆ ಕೊಠಡಿ ಸಮಸ್ಯೆ ನೀಗಿಸಲು ಸಾಕಷ್ಟು ಹಣ ಮಂಜೂರು ಮಾಡಿದರೂ ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಕಾಮಗಾರಿ ಕಳಪೆಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿ ಕೇಳಿಬರುತ್ತಿವೆ.

--
ನಾನು ಹೊಸದಾಗಿ ಎಸ್‌ಡಿಎಂಸಿ ಅಧ್ಯಕ್ಷನಾಗಿ ಆಯ್ಕೆಯಾಗಿರುವೆ. ನಾನು ಬಂದಾಗಿನಿಂದ ಸಂಬಂಧಪಟ್ಟ ಗುತ್ತಿಗೆದಾರರು ಶಾಲೆ ಕೊಠಡಿ ನಿರ್ಮಾಣ ಕಾಮಗಾರಿ ಮುಂದುವರಿಸಲು ಬಂದಿಲ್ಲ. ನಿರ್ಮಿಸಿದ ಕೊಠಡಿಗೆ ಸರಿಯಾಗಿ ಕ್ಯೂರಿಂಗ್‌ ಮಾಡದೇ ಇರುವುದರಿಂದ ಕಟ್ಟಡ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಈ ಕುರಿತು ತಾಲೂಕಿನ ಬಿಒ ಗಮನಕ್ಕೆ ತರಲಾಗಿದೆ.

-ಕೆ.ರಾಘವೇಂದ್ರ, ಗಾಂಧಿನಗರ ಸ.ಮಾ.ಹಿ.ಪ್ರಾ.ಶಾಲೆ ಎಸ್‌ಡಿಎಂಸಿ ಅಧ್ಯಕ್ಷ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ