ಆ್ಯಪ್ನಗರ

ಶಾಲೆ ದಾಖಲಾತಿ : ಪಾಲಕರಿಗೆ ತಲೆನೋವು

ಪ್ರತಿ ಬಾರಿಯೂ ಶೈಕ್ಷ ಣಿಕ ವರ್ಷ ಆರಂಭದಲ್ಲಿ ಪಾಲಕರು ನಾನಾ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಈ ಬಾರಿಯೂ ಶಿಕ್ಷ ಣ ಇಲಾಖೆ ಹೊರಡಿಸಿರುವ ಆದೇಶ, ಸುತ್ತೋಲೆಗಳಿಂದ ಪಾಲಕರಿಗೆ ಕಿರಿ ಕಿರಿ ತಪ್ಪದಂತಾಗಿದೆ.

ವಿಕ ಸುದ್ದಿಲೋಕ 8 Jun 2016, 9:00 am

ಲಿಂಗಸುಗೂರು; ಪ್ರತಿ ಬಾರಿಯೂ ಶೈಕ್ಷ ಣಿಕ ವರ್ಷ ಆರಂಭದಲ್ಲಿ ಪಾಲಕರು ನಾನಾ ಸಮಸ್ಯೆ ಎದುರಿಸುತ್ತಲೇ ಇದ್ದಾರೆ. ಈ ಬಾರಿಯೂ ಶಿಕ್ಷ ಣ ಇಲಾಖೆ ಹೊರಡಿಸಿರುವ ಆದೇಶ, ಸುತ್ತೋಲೆಗಳಿಂದ ಪಾಲಕರಿಗೆ ಕಿರಿ ಕಿರಿ ತಪ್ಪದಂತಾಗಿದೆ.

ಶಿಕ್ಷ ಣ ಇಲಾಖೆ ಆಯುಕ್ತರ ಆದೇಶದ ಪ್ರಕಾರ 1 ರಿಂದ 10ನೇ ತರಗತಿಯ ಎಲ್ಲ ಮಕ್ಕಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ದಾಖಲಿಸಬೇಕಾದ್ದರಿಂದ ಪಾಲಕರು ದಾಖಲೆಗಳನ್ನು ಶಾಲೆಗಳಿಗೆ ನೀಡಬೇಕೆಂದು ಆಯಾ ಸಿಆರ್‌ಪಿಗಳು ಫರ್ಮಾನು ಹೊರಡಿಸಿದ್ದಾರೆ. ಪ್ರತಿ ವರ್ಷ ಮಕ್ಕಳ ದಾಖಲಾತಿಗಳನ್ನು ಸಲ್ಲಿಸಿದರೂ ಈ ಬಾರಿ ಮತ್ತೆ ಹೊಸದಾಗಿ ತಂದು ಕೊಡುವಂತೆ ಶಾಲಾಡಳಿತ ಸೂಚಿಸಿದೆ.

ಮಗುವಿನ ಇತ್ತೀಚಿನ ನಾಲ್ಕು ಭಾವಚಿತ್ರಗಳು, ತಂದೆಯ ಜಾತಿ ಪ್ರಮಾಣ ಪತ್ರ ಮತ್ತು ತಾಯಿಯ ಜಾತಿ ಪ್ರಮಾಣ ಪತ್ರ ಮತ್ತು ಮಗುವಿನ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ತಂದೆಯ ಆಧಾರ್‌ ಕಾರ್ಡ್‌, ತಾಯಿಯ ಆಧಾರ್‌ ಕಾರ್ಡ್‌ ಮತ್ತು ಮಗುವಿನ ಆಧಾರ ಕಾರ್ಡ್‌, ರೇಷನ್‌ ಕಾರ್ಡ್‌, ಭಾಗ್ಯಲಕ್ಷ್ಮಿ ಬಾಂಡ್‌, ಪಾಲಕರ ಚುನಾವಣಾ ಗುರುತಿನ ಚೀಟಿ, ತಂದೆಯ ಮೊಬೈಲ್‌ ಸಂಖ್ಯೆ ಮತ್ತು ತಾಯಿಯ ಮೊಬೈಲ್‌ ಸಂಖ್ಯೆ , ವಿದ್ಯಾರ್ಥಿಯ ಮೊಬೈಲ್‌ ಸಂಖ್ಯೆ, ಪಾಲಕರ ಬ್ಯಾಂಕ್‌ ಖಾತೆ ಪುಸ್ತಕ ಮತ್ತು ವಿದ್ಯಾರ್ಥಿಯ ಬ್ಯಾಂಕ್‌ ಖಾತೆ ಪುಸ್ತಕ, ವಿಶೇಷ ಚೇತನ ಮಗುವಿದ್ದರೆ ವೈದ್ಯಕೀಯ ಪ್ರಮಾಣಪತ್ರ ತರುವಂತೆ ಸೂಚಿಸಲಾಗಿದೆ.

ವಿಚಿತ್ರವೆಂದರೆ ತಂದೆ-ತಾಯಿ ಮತ್ತು ಮಗುವಿನ ಪ್ರತ್ಯೇಕ ಜಾತಿ ಪ್ರಮಾಣ ಪತ್ರ ಕೇಳಿರುವುದು ಸೋಜಿಗವಾಗಿದೆ. ಕೂಡಲೇ ಮೇಲಧಿಕಾರಿಗಳು ನಿಯಮಗಳನ್ನು ಮತ್ತೊಮ್ಮೆ ಪರಿಶೀಲಿಸಿ ಪಾಲಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಬೇಕೆಂಬ ಒತ್ತಾಯಗಳು ಕೇಳಿ ಬಂದಿವೆ.

------

Vijaya Karnataka Web school enrollment parents headache
ಶಾಲೆ ದಾಖಲಾತಿ : ಪಾಲಕರಿಗೆ ತಲೆನೋವು


ನನ್‌ ಜಾತಿನೇ ನನ್ಮಗನಿಗೆ ಬರುತ್ತದೆ. ಮತ್ತೆ ಅವನಿಗೆ ಬೇರೆ ಜಾತಿ ಸರ್ಟಿಫಿಕೇಟ್‌ ತರುವಂತೆ ಶಾಲೆಯಲ್ಲಿ ಹೇಳುತ್ತಾರೆ. ಇದೆಂಥ ನಿಯಮ ಮಾಡ್ತಾರೋ ಅಧಿಕಾರಿಗಳು. ತಂದೆ-ತಾಯಿ ಇಲ್ಲದೇ ಮಕ್ಕಳು ಬರುತ್ತಾರಾ? ಇಬ್ಬರ ಆಧಾರ್‌ ಕಾರ್ಡ್‌ ನೀಡಿದರೂ ಮಗುವಿನದೂ ಬೇಕು ಎನ್ನುತ್ತಾರೆ. ಆಧಾರ್‌ ಕಾರ್ಡ್‌ ತೆಗೆಸಲು ಹೋದರೆ ಸರದಿ ಸಾಲಲ್ಲಿ ನಿಂತು ಸಾಕಾಗುತ್ತದೆ. ದಿನಕ್ಕೊಂದು ನಿಯಮ ಮಾಡುವ ಅಧಿಕಾರಿಗಳು ಬಡವರ ಬಗ್ಗೆ ವಿಚಾರ ಮಾಡಬೇಕು.

-ಬಸವರಾಜ, ಪಾಲಕರು, ಲಿಂಗಸುಗೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ