ಆ್ಯಪ್ನಗರ

ಗ್ರಾಮಸ್ಥರಿಂದ ಶಾಲಾ ಮೈದಾನ ಸಮತಟ್ಟು

ತಾಲೂಕಿನ ಕಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಆಟಕ್ಕೆ ಅನುಕೂಲವಾಗಲೆಂದು ಗ್ರಾಮಸ್ಥರೇ ಮುಂದೆ ನಿಂತು ಸೋಮವಾರ ಮೈದಾನ ಸಮತಟ್ಟಗೊಳಿಸಿದರು.

Vijaya Karnataka 23 Jul 2019, 5:00 am
ಸಿಂಧನೂರು : ತಾಲೂಕಿನ ಕಲ್ಲೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಆಟಕ್ಕೆ ಅನುಕೂಲವಾಗಲೆಂದು ಗ್ರಾಮಸ್ಥರೇ ಮುಂದೆ ನಿಂತು ಸೋಮವಾರ ಮೈದಾನ ಸಮತಟ್ಟಗೊಳಿಸಿದರು.
Vijaya Karnataka Web school grounds flat by the villagers
ಗ್ರಾಮಸ್ಥರಿಂದ ಶಾಲಾ ಮೈದಾನ ಸಮತಟ್ಟು


ಗ್ರಾಮದ ಪ್ರಮುಖರು ಒಗ್ಗೂಡಿ ಈ ಹಿಂದೆ ಶಾಲಾ ಮೈದಾನದಲ್ಲಿ ಇದ್ದ ಹಳೆ ಕಟ್ಟಡದ ಬುನಾದಿಯ ಕಲ್ಲುಗಳನ್ನು ಜೆಸಿಬಿ, ಟ್ರ್ಯಾಕ್ಟರ್‌ ಬಳಸಿ ತೆರವುಗೊಳಿಸಿದರು. ಮಕ್ಕಳ ಅನುಕೂಲಕ್ಕಾಗಿ ಸ್ವಂತ ಖರ್ಚಿನಲ್ಲಿ ಕೈಗೊಂಡ ಕಾರ್ಯ ಎಲ್ಲರ ಗಮನಸೆಳೆಯಿತು. ಹಿರಿಯರಾದ ಬಸವಂತರಾಯ ಗೌಡ, ವೆಂಕೋಬ ಜಿನ್ನದ, ಪ್ರಕಾಶಗೌಡ ಪಾಟೀಲ್‌, ರಾಮನಗೌಡ ಬಾವಿಕಟ್ಟಿ, ಶಾಲೆಯ ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಆಡಳಿತ ಮಂಡಳಿ ಹಾಗೂ ಶಿಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ