ಆ್ಯಪ್ನಗರ

ನಾಡ ಕಚೇರಿಗಳಿಗೆ ಅರೆಬರೆ ಕರೆಂಟ್‌

ಗ್ರಾಮದ ನಾಡ ಕಚೇರಿ ಸೇರಿ ಸಮೀಪದ ಗೊರೇಬಾಳ ಗ್ರಾಮದ ನಾಡ ಕಚೇರಿಯಲ್ಲಿ ಕಳೆದ 3 ತಿಂಗಳಿಂದ ಸಮರ್ಪಕ ವಿದ್ಯುತ್‌ ಸೌಲಭ್ಯ ಇಲ್ಲದೇ ನಾನಾ ಅರ್ಜಿ ಸಲ್ಲಿಸಲು ಬರುವ ಗ್ರಾಮಸ್ಥರು ಪರದಾಡುವಂತಾಗಿದೆ.

Vijaya Karnataka 18 Jul 2018, 5:00 am
ಜಾಲಿಹಾಳ : ಗ್ರಾಮದ ನಾಡ ಕಚೇರಿ ಸೇರಿ ಸಮೀಪದ ಗೊರೇಬಾಳ ಗ್ರಾಮದ ನಾಡ ಕಚೇರಿಯಲ್ಲಿ ಕಳೆದ 3 ತಿಂಗಳಿಂದ ಸಮರ್ಪಕ ವಿದ್ಯುತ್‌ ಸೌಲಭ್ಯ ಇಲ್ಲದೇ ನಾನಾ ಅರ್ಜಿ ಸಲ್ಲಿಸಲು ಬರುವ ಗ್ರಾಮಸ್ಥರು ಪರದಾಡುವಂತಾಗಿದೆ.
Vijaya Karnataka Web RAC-RCH17JALIHAL02


ಕಳೆದ 5 ವರ್ಷಗಳ ಹಿಂದೆ ಸರಕಾರ ಅಳವಡಿಸಿದ ಸೋಲಾರ್‌ ವಿದ್ಯುತ್‌ ಸಂಪರ್ಕ ದುರಸ್ತಿಯಾಗಿದೆ. ದುರಸ್ತಿಯ ಅವದಿ ಮುಗಿದಿದೆ ಎಂಬುದು ಸೋಲಾರ್‌ ಅಳವಡಿಸಿದ ಕಂಪನಿಯ ತಗಾದೆಯಾಗಿದೆ. ಸೋಲಾರ್‌ ವಿದ್ಯುತ್‌ ಸ್ಥಗಿತದಿಂದ ಉಭಯ ನಾಡಕಚೇರಿಗಳಿಗೆ ಜೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ಆದರೆ, ಕಳೆದೆರಡು ತಿಂಗಳಿಂದ ಗಾಳಿ, ಮಳೆ ಶುರುವಾಗಿದ್ದು, ವಿದ್ಯುತ್‌ ಕಣ್ಣಾಮುಚ್ಚಾಲೆ ಆಡುತ್ತಿದೆ.

ಜಾಲಿಹಾಳ ಹಾಗೂ ಗೊರೇಬಾಳ ಗ್ರಾಮದಲ್ಲಿ ಕಂದಾಯ ನಿರೀಕ್ಷ ಕರು ಇಲ್ಲದ್ದರಿಂದೇ ಗ್ರಾಮಲೆಕ್ಕಾಧಿಕಾರಿಗಳಿಗೆ ಪ್ರಭಾರ ವಹಿಸಲಾಗಿದೆ. ನಾಡ ಕಚೇರಿಗಳಿಗೆ ಶಾಶ್ವತ ನಾಡ ತಹಸೀಲ್ದಾರರು ಹಾಗೂ ಕಂದಾಯ ನೀರಿಕ್ಷ ಕರನ್ನು ನೇಮಿಸಲು ಜಿಲ್ಲಾಧಿಕಾರಿಯವರು ತಕ್ಷಣ ಮುಂದಾಗಬೇಕು ಎಂದು ಜಾಲಿಹಾಳ, ಗಾಂಧಿನಗರ, ಜಂಭುನಾಥಹಳ್ಳಿ, ಕೆ.ಬಸಾಪುರ, ಕೆ.ಹಂಚಿನಾಳ, ಗೊರೇಬಾಳ, ಶಾಂತಿನಗರ, ಭೀಮರಾಜಕ್ಯಾಂಪ್‌, ಸಾಸಲಮರಿ, ಹಟ್ಟಿ, ಚನ್ನಳ್ಳಿ, ಸಿದ್ರಾಂಪುರ ಗ್ರಾಮಸ್ಥರು ಒತ್ತಾಯಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ