ಆ್ಯಪ್ನಗರ

ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಧರ್ಮದ ಹೇಳಿಕೆ: ರಂಭಾಪುರಿ ಶ್ರೀ

ವೀರಶೈವ-ಲಿಂಗಾಯತ ಎರಡು ಒಂದೇ. ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಧರ್ಮವೆಂದು ಹೇಳಿಕೆ ನೀಡುವುದೆಷ್ಟು ಸರಿ ಎಂದು ರಂಭಾಪುರಿ ಜಗದ್ಗುರು ಶ್ರೀವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಶ್ನಿಸಿದರು.

Vijaya Karnataka Web 26 Dec 2017, 11:37 am
ರಾಯಚೂರು: ವೀರಶೈವ-ಲಿಂಗಾಯತ ಎರಡು ಒಂದೇ. ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಧರ್ಮವೆಂದು ಹೇಳಿಕೆ ನೀಡುವುದೆಷ್ಟು ಸರಿ ಎಂದು ರಂಭಾಪುರಿ ಜಗದ್ಗುರು ಶ್ರೀವೀರಸೋಮೇಶ್ವರ ಶಿವಾಚಾರ್ಯ ಸ್ವಾಮಿಗಳು ಪ್ರಶ್ನಿಸಿದರು.
Vijaya Karnataka Web separate religion statement for political gain rambhapuri swamiji
ರಾಜಕೀಯ ಲಾಭಕ್ಕಾಗಿ ಪ್ರತ್ಯೇಕ ಧರ್ಮದ ಹೇಳಿಕೆ: ರಂಭಾಪುರಿ ಶ್ರೀ


ನಗರದಲ್ಲಿ ಮಾತನಾಡಿದ ಅವರು, ಪಂಚಪೀಠಗಳ ಬಗ್ಗೆ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರ ಹೇಳಿಕೆ ದಾರಿ ತಪ್ಪಿಸುವ ಕಾರ್ಯ
ಎಂದು ಆರೋಪಿಸಿದರು.

ಬಹುಸಂಖ್ಯಾತರಾಗಿರುವ ವೀರಶೈವ-ಲಿಂಗಾಯತರನ್ನು ಅಲ್ಪಸಂಖ್ಯಾತರೆಂದು ಘೋಷಿಸಿದರೇ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡದಂತಾಗುತ್ತದೆ ಎಂದು ಶ್ರೀಗಳು ಅಭಿಪ್ರಾಪಟ್ಟರು.

ಈ ಹಿಂದೆ ಒಂದು ಕೋಟಿಗೂ ಅಧಿಕವಿದ್ದ ವೀರಶೈವ-ಲಿಂಗಾಯತರ ಜನಸಂಖ್ಯೆ 60 ಲಕ್ಷಕ್ಕಿಳಿದಿದೆ ಎಂದು ಇತ್ತೀಚಿಗೆ ನಡೆದ ಜನಗಣತಿ ತಿಳಿಸುತ್ತಿರುವುದಾಗಿ ಹೇಳಿದರು. ಇದೇ 27ರಂದು ಶಿವಯೋಗ ಮಂದಿರದಲ್ಲಿ ಪಂಚಪೀಠ ಹಾಗು ವಿರಕ್ತಮಠಗಳ‌ ಸ್ವಾಮಿಗಳ ಸಭೆ ನಡೆಯಲಿದ್ದು, ಬಿಕ್ಕಟ್ಟಿನ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ರಂಭಾಪುರಿಶ್ರೀ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ