ಆ್ಯಪ್ನಗರ

ಚಿನ್ನದನಾಡಿನ ಅಪರೂಪದ ಚಿತ್ರ ಕಲಾವಿದ ಪ್ರತಿಭೆ ಶರಣಬಸವ

ದಾರವನ್ನೇ ಕುಂಚವಾಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಚಿತ್ರಕಲೆ ಬಿಡಿಸುತ್ತಿರುವ ಸ್ಥಳೀಯ ಪಟ್ಟಣದ ಯುವಕ ಶರಣಬಸವ ಹೆಮ್ಮಡಗಿ ಎಲ್ಲರ ಗಮನಸೆಳೆಯುತ್ತಿದ್ದಾನೆ. ಬಣ್ಣದಲ್ಲಿ ಕುಂಚದ ಬದಲಿಗೆ ದಾರವನ್ನೇ ಅದ್ದಿ ನಾನಾ ರೀತಿಯ ಅದ್ಭುತ ಚಿತ್ರಗಳನ್ನು ಬಿಡಿಸುವುದು ಇವರಿಗೆ ಕರಗತವಾಗಿದೆ.

Vijaya Karnataka 31 Jul 2019, 5:00 am
ಹಟ್ಟಿಚಿನ್ನದಗಣಿ : ದಾರವನ್ನೇ ಕುಂಚವಾಗಿಸಿಕೊಂಡು ವಿಶಿಷ್ಟ ರೀತಿಯಲ್ಲಿ ಚಿತ್ರಕಲೆ ಬಿಡಿಸುತ್ತಿರುವ ಸ್ಥಳೀಯ ಪಟ್ಟಣದ ಯುವಕ ಶರಣಬಸವ ಹೆಮ್ಮಡಗಿ ಎಲ್ಲರ ಗಮನಸೆಳೆಯುತ್ತಿದ್ದಾನೆ. ಬಣ್ಣದಲ್ಲಿ ಕುಂಚದ ಬದಲಿಗೆ ದಾರವನ್ನೇ ಅದ್ದಿ ನಾನಾ ರೀತಿಯ ಅದ್ಭುತ ಚಿತ್ರಗಳನ್ನು ಬಿಡಿಸುವುದು ಇವರಿಗೆ ಕರಗತವಾಗಿದೆ.
Vijaya Karnataka Web sharanabasava is a rare film artist from the golden country
ಚಿನ್ನದನಾಡಿನ ಅಪರೂಪದ ಚಿತ್ರ ಕಲಾವಿದ ಪ್ರತಿಭೆ ಶರಣಬಸವ


ಸಾಬೂನಿನಲ್ಲಿ ನಾನಾ ಬಗೆಯ ಪಕ್ಷಿ, ವ್ಯಕ್ತಿಗಳ ಚಿತ್ರ ಬಿಡಿಸುವುದಲ್ಲದೇ ಪ್ಲಾಸ್ಟರ್‌ ಆಫ್‌ ಪ್ಯಾರಿಸ್‌ನಿಂದ ಗಣೇಶ ಮೂರ್ತಿಗಳನ್ನೂ ತಯಾರಿಸುವುದರಲ್ಲಿಯೂ ಈತ ಸಿದ್ಧಹಸ್ತ. ಕಟ್ಟಿಗೆ ಮೇಲೆ ನಾನಾ ಬಗೆಯ ಚಿತ್ರಗಳನ್ನು ಕೆತ್ತುವುದು, ಕಾವ್ಯ-ಕುಂಚ-ಗಾಯನ ಕಾರ್ಯಕ್ರಮಗಳಲ್ಲಿ ಯಾವುದೇ ಹಾಡಿಗೆ ಚಿತ್ರ ಬಿಡಿಸುವುದು ಹೆಮ್ಮಡಗಿಯ ನೀರು ಕುಡಿದಷ್ಟ ಸಲೀಸು. ಬಹುಮುಖ ಪ್ರತಿಭೆ

ವಿಶೇಷ: ಗಣಿ ಕಂಪನಿ ಕಾರ್ಮಿಕರೊಬ್ಬರ ಮಗನಾದ ಶರಣಬಸವ, ಲಿಂಗಸುಗೂರಿನ ಸರಕಾರಿ ಪಾಲಿಟೆಕ್ನಿಕ್‌ನಲ್ಲಿ ಸಿವಿಲ್‌ ಡಿಪೊ್ಲಮಾ ಮಾಡಿದ ಬಳಿಕ ಬೆಂಗಳೂರಿನ ವೃಂದಾವನ ಕಾಲೇಜಿನಲ್ಲಿ ಬಿಇ ಪದವಿ ಪೂರ್ಣಗೊಳಿಸಿ, ಖಾಸಗಿ ಉದ್ಯೋಗದಲ್ಲಿದ್ದಾನೆ. ಹವ್ಯಾಸಕ್ಕಾಗಿ ಅಲ್ಲಲ್ಲಿ ತನ್ನ ಪ್ರತಿಭೆ ಅನಾವರಣಗೊಳಿಸುತ್ತಾ ಸಾಗಿದ್ದು, ವಿದ್ಯಾರ್ಥಿ ದೆಸೆಯಿಂದಲೇ ಕಲೆ ಮೈಗೂಡಿಸಿಕೊಂಡಿರುವ ಬಗ್ಗೆ ಅವರ ಸ್ನೇಹಿತರು, ಪೋಷಕರು ಹೆಮ್ಮೆ ಯಿಂದ ಹೇಳುತ್ತಾರೆ. ಲಿಂಗಸುಗೂರು, ರಾಯಚೂರು, ಬೆಂಗಳೂರು ಸೇರಿ ನಾನಾ ಕಡೆ ಅನೇಕ ಕಾರ್ಯಕ್ರಮ ನೀಡಿರುವುದು ವಿಶೇಷವಾಗಿದ್ದು, ಎಲೆ ಮರಿಕಾಯಿಯಂತಿರುವ ಇಂತಹ ಪ್ರತಿಭೆಗಳಿಗೆ ಇನ್ನಷ್ಟು ಪ್ರೋತ್ಸಾಹದ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿವೆ.

---
ಕಾರ್ಯಕ್ರಮದಲ್ಲಿ ಯಾವುದೇ ಹಾಡಿಗೆ ಚಿತ್ರ ಬಿಡಿಸುವುದೆಂದರೆ ನನಗೆ ಇಷ್ಟ. ಪಟ್ಟಣದ ವಂದಲಿ ಬಲಭೀಮ ಶಿಕ್ಷ ಣ ಮತ್ತು ವಿವಿದೋದ್ಧೇಶ ಸಂಘವು ನನ್ನನ್ನು ಗುರುತಿಸಿದ್ದರಿಂದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲೆಯನ್ನು ಅನಾವರಣಗೊಳ್ಳುತ್ತಾ ಸಾಗಿದ್ದೇನೆ.

- ಶರಣಬಸವ ಹೆಮ್ಮಡಗಿ, ಚಿತ್ರ ಕಲಾವಿದ, ಹಟ್ಟಿಚಿನ್ನದಗಣಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ