ಆ್ಯಪ್ನಗರ

ಎಪಿಎಂಸಿಯಲ್ಲಿ ಅಂಗಡಿಗಳು ಬಂದ್‌

ಕಳುವು ಮಾಡಿದ ಭತ್ತ ಖರೀದಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರಿಂದ ಆಕ್ರೋಶಗೊಂಡ ಗಂಜ್‌ ವರ್ತಕರ ಸಂಘಟನೆಯವರು ಬುಧವಾರ ವ್ಯಾಪಾರ ವಹಿವಾಟು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

Vijaya Karnataka 6 Jun 2019, 5:00 am
ಸಿಂಧನೂರು ; ಕಳುವು ಮಾಡಿದ ಭತ್ತ ಖರೀದಿಸಿದ್ದಾರೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ತಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರಿಂದ ಆಕ್ರೋಶಗೊಂಡ ಗಂಜ್‌ ವರ್ತಕರ ಸಂಘಟನೆಯವರು ಬುಧವಾರ ವ್ಯಾಪಾರ ವಹಿವಾಟು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.
Vijaya Karnataka Web shops close at apmc
ಎಪಿಎಂಸಿಯಲ್ಲಿ ಅಂಗಡಿಗಳು ಬಂದ್‌


ಭತ್ತ ಕಳುವು ಮಾಡಿರುವ ವ್ಯಕ್ತಿಯೊಬ್ಬ ಗಂಗಾವತಿ ಪೊಲೀಸರಿಗೆ ಸಿಂಧನೂರಿನ ಎಪಿಎಂಸಿಯಲ್ಲಿ ಭತ್ತ ಮಾರಾಟ ಮಾಡಿದ್ದಾಗಿ ಹೇಳಿದ್ದಾನೆ. ಈ ಹಿನ್ನೆಲೆಯಲ್ಲಿ ಗಂಗಾವತಿ ಪೊಲೀಸರು ಸ್ಥಳೀಯ ಎಪಿಎಂಸಿಯಲ್ಲಿರುವ ವಿಶ್ವ ಟ್ರೇಡರ್ಸ್‌, ಕರಡಿ ಬಸವೇಶ್ವರ, ಏಳುಕೋಟೆ ಮಲ್ಲಿಕಾರ್ಜುನ ಟ್ರೇಡರ್ಸ್‌, ಮಲ್ಲಿಕಾರ್ಜುನ ಟ್ರೇಡರ್ಸ್‌, ಸುಬ್ಬಾಲಕ್ಷ್ಮೀ ಮಿಲ್‌ಗಳಿಗೆ ತೆರಳಿ ಆಯಾ ಅಂಗಡಿ ಮಾಲೀಕರನ್ನು ವಿಚಾರಣೆ ನಡೆಸಿರುವುದನ್ನು ವಿರೋಧಿಸಿ ವ್ಯಾಪಾರ ನಿಲ್ಲಿಸಿ ವರ್ತಕರು ಪ್ರತಿಭಟನೆ ನಡೆಸಿದರು.

ಕೂಡಲೇ ಪ್ರಕರಣದಲ್ಲಿ ಅಂಗಡಿಗಳ ಮಾಲೀಕರ ವಿರುದ್ದ ಯಾವುದೇ ತನಿಖೆ ನಡೆಸಬಾರದು. ಅಮಾಯಕರ ವಿಚಾರಣೆ ನಿಲ್ಲಿಸಬೇಕು ಎಂದು ವರ್ತಕರು ಆಗ್ರಹಿಸಿದರು. ಬಂದ್‌ ಹಿನ್ನೆಲೆಯಲ್ಲಿ ಎಪಿಎಂಸಿ ಪ್ರಾಂಗಣ ಸಂಪೂರ್ಣ ಬಿಕೋ ಎನ್ನುತ್ತಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ