ಆ್ಯಪ್ನಗರ

ಸೌಕರ್ಯಕ್ಕೆ ಒತ್ತಾಯಿಸಿ ಸಾಮಾನ್ಯ ಸಭೆಗೆ ಮುತ್ತಿಗೆ

ತಾಲೂಕಿನಾದ್ಯಂತ ದಲಿತರಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಶುಕ್ರವಾರ ತಾ.ಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

Vijaya Karnataka 24 Jun 2019, 4:09 pm
ಲಿಂಗಸುಗೂರು : ತಾಲೂಕಿನಾದ್ಯಂತ ದಲಿತರಿಗೆ ಮೂಲ ಸೌಕರ್ಯ ಒದಗಿಸುವಂತೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಶುಕ್ರವಾರ ತಾ.ಪಂ ಸಭಾಂಗಣದಲ್ಲಿ ನಡೆಯುತ್ತಿದ್ದ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
Vijaya Karnataka Web siege to the general assembly demanding facilities
ಸೌಕರ್ಯಕ್ಕೆ ಒತ್ತಾಯಿಸಿ ಸಾಮಾನ್ಯ ಸಭೆಗೆ ಮುತ್ತಿಗೆ


ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಲಿಂಗಸುಗೂರು ತಾಲೂಕಿಗೆ ಅಧಿಕಾರಿ ನೇಮಕಮಾಡಬೇಕು, ಕೆಸರಟ್ಟಿ ಗ್ರಾಮ ಸ,ನಂ 1/2ರಲ್ಲಿ ನೀಡಿದ ಹಕ್ಕುಪತ್ರದಂತೆ ನಿವೇಶನಗಳನ್ನು ಹಸ್ತಾಂತರ ಮಾಡಬೇಕು, 2018-19ನೇ ಸಾಲಿನ ತಾ.ಪಂ ಅಭಿವೃದ್ಧಿ ಅನುದಾನದಲ್ಲಿ ಸಾಮಾಗ್ರಿಗಳ ಪೂರೈಕೆಯಲ್ಲಿ ನಡೆದಿರುವ ಭ್ರಷ್ಟಚಾರವನ್ನು ತನಿಖೆ ಮಾಡಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಶಾಶ್ವತ ಕುಡಿವ ನೀರಿನ ವ್ಯವಸ್ಥೆ ಮಾಡಬೇಕು. 2018-19 ಹಾಗೂ 2019-20ನೇ ಸಾಲಿನ ಇಂದಿರಾ ಅವಾಸ್‌, ಅಂಬೇಡ್ಕರ್‌ ಬಸವ ವಸತಿ ಯೋಜನೆಯು ಫಲಾನುಭವಿಗಳಿಗೆ ಹಣ ಪಾವತಿಸಬೇಕು. ವೆಂಕಟಾಪುರ ಗ್ರಾಮದಲ್ಲಿ ನರೇಗಾದಡಿಯಲ್ಲಿ ಕೆಲಸ ಮಾಡಿದ ಕಾರ್ಮಿಕರಿಗೆ ಕೂಲಿ ಮತ್ತು ಬಿಓಸಿ ಹಣ ತಕ್ಷ ಣ ಪಾವತಿಸಬೇಕು. ಭೂಮಾಪನಾ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ತಾಲೂಕಿನಾದ್ಯಂತ ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡದೇ ಸರ್ಕಾರಿದಂದ ಬಂದಂತಹ ಔಷಧಿಗಳನ್ನು ನೀಡದೇ ಆಸ್ಪತ್ರೆಯಲ್ಲಿ ವೈದ್ಯರು ಇರದೇ ಲಿಂಗಸುಗೂರಿನಲ್ಲಿ ಕಾಲ ಕಳೆಯುವ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಬೇಕು. ದಲಿತ ಕಾಲೋನಿಗಳಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸಬೇಕು. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾಮಾನ್ಯ ಸಭೆಗೆ ಮುತ್ತಿಗೆ ಹಾಕಿ ಹಲವು ಸಮಸ್ಯೆಗಳ ಬಗ್ಗೆ ಈಗಾಗಲೇ ಹಲವು ಭಾರಿ ತಮ್ಮ ಗಮನಕ್ಕೆ ತಂದರೂ ಈವರಿಗೂ ಪರಿಹಾರವಾಗಿಲ್ಲ, ಸಮಸ್ಯೆ ಪರಿಹಾರವಾಗೋವರಿಗೂ ಇಲ್ಲಿಂದ ಹೋಗೋಲ್ಲವೆಂದು ಪಟ್ಟುಹಿಡಿದರು.

ದಸಂಸ ಜಿಲ್ಲಾ ಸಂಚಾಲಕ ಹನುಮಂತಪ್ಪ ವೆಂಕಟಾಪುರ, ಮಹಾದೇವಪ್ಪ ಪರಾಂಪೂರು, ಶರಣಪ್ಪ ಕಟ್ಟಿಮನಿ, ರಮೇಶ ಗೋಸ್ಲೆ, ಆಜಪ್ಪ ಕರಡಕಲ್‌, ಲಕ್ಕಪ್ಪ ನಾಗರಾಳ, ಬಸವರಾಜ ಬಂಕದಮನಿ, ಅಮರೇಶ ನಾಯಕ, ದುರಗಪ್ಪ ಆಗ್ರಹಾರ, ಮೋಹನ ಗೋಸ್ಲೆ, ದೇವೆಂದ್ರ ಕರಡಕಲ್‌, ನಾಗರಾಜ ಮಾಳೆ, ಹನುಮಂತ ಆಶಿಹಾಳ ಹಾಗೂ ಇನ್ನಿತರಿದ್ದರು.

---

ಕಾಲವಕಾಶ ಪಡೆದ ತಾ.ಪಂ. ಅಧ್ಯಕ್ಷೆ

ತಾ.ಪಂ ಅಧ್ಯಕ್ಷೆ ಶ್ವೇತಾ ಪಾಟೀಲ್‌, ಸಾಮಾನ್ಯ ಸಭೆ ನಡೆಯುತ್ತಿದ್ದು ಸಭೆಗೆ ಅಡ್ಡಿಪಡಿಸುವುದು ಬೇಡ, ಈಗಾಗಿ ನನ್ನ ಛೇಂಬರ್‌ನಲ್ಲಿ ತಾಲೂಕ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಿಮ್ಮ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸಲು ಕಾಲಾವಕಾಶ ಪಡೆದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ