ಆ್ಯಪ್ನಗರ

ಉಪಕಾಲುವೆಯಲ್ಲಿ ಹೂಳು

ನಾರಾಯಣಪುರ ಬಲದಂಡೆ ನಾಲೆ ಹಾಗೂ ಉಪಕಾಲುವೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತ್ರ್ಯವಹಿಸಿದ್ದರಿಂದ ಕಾಲುವೆ ನಾಲೆ ನಂಬಿ ಕೃಷಿ ಮಾಡುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.

Vijaya Karnataka 11 Dec 2019, 5:00 am
ಶರಣಗೌಡ ಸುಂಕೇಶ್ವರಹಾಳ ಗಬ್ಬೂರು
Vijaya Karnataka Web silt in sub canels
ಉಪಕಾಲುವೆಯಲ್ಲಿ ಹೂಳು

ನಾರಾಯಣಪುರ ಬಲದಂಡೆ ನಾಲೆ ಹಾಗೂ ಉಪಕಾಲುವೆಗಳ ಅಭಿವೃದ್ಧಿಗೆ ಜನಪ್ರತಿನಿಧಿಗಳು ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳು ನಿರ್ಲಕ್ಷತ್ರ್ಯವಹಿಸಿದ್ದರಿಂದ ಕಾಲುವೆ ನಾಲೆ ನಂಬಿ ಕೃಷಿ ಮಾಡುತ್ತಿರುವ ರೈತರ ಸಮಸ್ಯೆಗೆ ಮುಕ್ತಿ ಇಲ್ಲದಂತಾಗಿದೆ.

ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿಎನ್‌ಆರ್‌ಬಿಸಿಯ 17ನೇ ಉಪಕಾಲುವೆಯ ಒಂದನೇ ಸೀಳುಗಾಲುವೆ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನಿಗೆ ಇತ್ತೀಚೆಗೆ ನುಗ್ಗಿ, ಬಿತ್ತನೆ ಮಾಡಿದ ಮೆಣಸಿನಕಾಯಿ, ಹತ್ತಿ, ತೊಗರಿ, ಭತ್ತ ಸೇರಿ ಹಿಂಗಾರು ಬೆಳೆಗಳಿಗೂ ಹಾನಿಯಾಗಿದೆ. ಇದರಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ. ಬೆಳೆಗಳು ಕೈಗೆ ಬರುವ ಮುನ್ನ ಇಂಥ ಘಟನೆ ನಡೆದಿರುವುದು ರೈತರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಹೂಳು ತುಂಬಿದ ಕಾಲುವೆ: ನಾರಾಯಣಪುರ ಬಲದಂಡೆ ನಾಲೆಯ ಮುಖ್ಯನಾಲೆ ಅರೆಬರೆಯಾಗಿ ಅಭಿವೃದ್ಧಿಯಾಗಿದ್ದರೆ, ಉಪಕಾಲುವೆಗಳು, ಸೀಳುಗಾಲುವೆಗಳು ಸಂಪೂರ್ಣ ನಿರ್ಲಕ್ಷತ್ರ್ಯಕ್ಕೆ ಒಳಗಾಗಿವೆ. ಇದರಿಂದ ಉಪಕಾಲುವೆ, ಸೀಳುಗಾಲುವೆಯಲ್ಲಿಮುಳ್ಳಕುಂಠಿ ಬೆಳೆದು ಹೂಳು ತುಂಬಿಕೊಂಡಿವೆ. ಹೀಗಾಗಿ ನಾಲೆಯಲ್ಲಿಹೂಳು ತುಂಬಿ ನೀರು ಮುಂದಕ್ಕೆ ಹರಿಯದೆ ಸೀಳುಗಾಲುವೆ ಒಡೆದು ರೈತರ ಜಮೀನಿಗೆ ನೀರು ನುಗ್ಗುತ್ತಿವೆ. ನಾಲೆಯ ಹೂಳು ತೆಗೆಸಿ, ಅಭಿವೃದ್ಧಿ ಮಾಡುವಂತೆ ರೈತರು ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಒತ್ತಾಯಿಸಿದರೂ ಅಧಿಕಾರಿಗಳು ಗಮನಹರಿಸುತ್ತಿಲ್ಲಎಂಬುದು ರೈತರ ಆರೋಪವಾಗಿದೆ.

ಎಚ್ಚೆತ್ತುಕೊಳ್ಳದ ಅಧಿಕಾರಿಗಳು: ಬಲದಂಡೆ ನಾಲೆ ತಾಲೂಕಿನಲ್ಲಿ8ನೇ ಉಪಕಾಲುವೆಯಿಂದ 18ನೇ ನಾಲೆವರೆಗೆ ಹರಿಯುತ್ತಿದ್ದು, ಬಹುತೇಕ ಕಡೆ ಕಾಲುವೆಗಳು ಅಭಿವೃದ್ಧಿ ಕಂಡಿಲ್ಲ. ಈ ಹಿಂದೆ 9, 10 ಮತ್ತು 11ನೇ ಉಪಕಾಲುವೆಯ ಪಂದ್ಯಾನ ಗ್ರಾಮದ ಹತ್ತಿರ ನಾಲೆ ಒಡೆದು ಅಪಾರ ಪ್ರಮಾಣದ ನೀರು ವ್ಯರ್ಥವಾಗಿದ್ದಲ್ಲದೇ, ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿತ್ತು. ಇದಲ್ಲದೇ ಜಾಡಲದಿನ್ನಿ, ಬಾಗೂರು, ನಗರಗುಂಡ ಗ್ರಾಮದಲ್ಲಿಇಂಥ ಘಟನೆಗಳು ಪದೇಪದೆ ನಡೆಯುತ್ತಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದ್ದರಿಂದ ಉಪಕಾಲುವೆಗಳ ಆಧುನೀಕರಣ ಮರೀಚಿಕೆಯಾಗಿದೆ. ರೈತರೇ ನಾಲೆಗೆ ಮಣ್ಣು ಹಾಕಿ ದುರಸ್ತಿ ಮಾಡಿಸಿಕೊಳ್ಳವಂತಹ ಪರಿಸ್ಥಿತಿ ಎದುರಾಗಿದೆ. ಈಗಲಾದರೂ ಸಂಬಂಧಿಸಿದ ನೀರಾವರಿ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಗಮನಹರಿಸಿ ಕಾಲುವೆಗಳಲ್ಲಿತುಂಬಿಕೊಂಡಿರುವ ಹೂಳು ಹಾಗೂ ಜಂಗಲ್‌ ಕಟಿಂಗ್‌ ಕಾಮಗಾರಿಗಳನ್ನು ಕೈಗೊಂಡು ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ.

---
ಬುದ್ದಿನ್ನಿ ಗ್ರಾಮದಲ್ಲಿಸೀಳುಗಾಲುವೆ ಒಡೆದ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ನಾನು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವೆ. ನಾಲೆ ರಿಪೇರಿಗೆ ಮುಖ್ಯ ಎಂಜಿನಿಯರ್‌ ಗಮನಕ್ಕೆ ತರುವೆ. ಇಲಾಖೆ ಜತೆ ರೈತರು ಕೈಜೋಡಿಸಿ, ಉಪಕಾಲುವೆಯ ಹೂಳು ತೆರವಿಗೆ ಮುಂದಾಗಬೇಕು. ಸದ್ಯ ಉಪಕಾಲುವೆ, ಸೀಳುಗಾಲುವೆ ಅಭಿವೃದ್ಧಿಗೆ ಯೋಜನೆ ಇಲ್ಲ. ಬೇಸಿಗೆಯಲ್ಲಿನಾಲೆಗಳ ಅಭಿವೃದ್ಧಿ ಮಾಡಲು ಅನುದಾನಕ್ಕೆ ಮನವಿ ಮಾಡುವೆ.

-ಸೃಜಿತ್‌, ಕಿರಿಯ ಎಂಜಿನಿಯರ್‌, ಎನ್‌ಆರ್‌ಬಿಸಿ 17ನೇ ಉಪಕಾಲುವೆ

ನಾರಾಯಣಪುರ ಬಲದಂಡೆ ನಾಲೆಯ ಉಪಕಾಲುವೆ, ಸೀಳುಗಾಲುವೆಗಳು ಒಡೆದು ರೈತರ ಜಮೀನಿಗೆ ನೀರು ನುಗ್ಗುತ್ತಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಸೂಕ್ತ ರೀತಿಯಲ್ಲಿಸ್ಪಂದಿಸುತ್ತಿಲ್ಲ. ಸೀಳುಗಾಲುವೆ ಒಡೆದು ಸುಮಾರು 50ಕ್ಕೂ ಹೆಚ್ಚು ರೈತರ ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿವೆ. ಕೂಡಲೇ ಬೆಳೆ ಪರಿಹಾರ ನೀಡುವ ಜೊತೆಗೆ ನಾಲೆ ಅಭಿವೃದ್ಧಿ ಮಾಡಬೇಕು. ಅಧಿಕಾರಿಗಳು ನಿರ್ಲಕ್ಷತ್ರ್ಯವಹಿಸಿದರೆ ಹೋರಾಟ ಮಾಡಲಾಗುವುದು.

-ರಾಮಣ್ಣ, ಶಿವರಾಜ, ಭಗೀರಥ, ಮೌನೇಶ, ಭೀಮರಾಯ, ಬುದ್ದಿನ್ನಿ ಗ್ರಾಮದ ರೈತರು, ಸಂಘಟನೆಗಳ ಮುಖಂಡರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ