ಆ್ಯಪ್ನಗರ

'ಶೀಘ್ರ ಜನರ ಸಮಸ್ಯೆ ಪರಿಹರಿಸಿ'

ಜನತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗಳಿಗೆ ಬಂದಾಗ ಅವರನ್ನು ಅಲೆಸದೆ, ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಅಯ್ಯನಗೌಡ ಹೇಳಿದರು.

Vijaya Karnataka 8 Sep 2019, 5:00 am
ಸಿಂಧನೂರು: ಜನತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡು ಕಚೇರಿಗಳಿಗೆ ಬಂದಾಗ ಅವರನ್ನು ಅಲೆಸದೆ, ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಲೋಕಾಯುಕ್ತ ಡಿವೈಎಸ್ಪಿ ಅಯ್ಯನಗೌಡ ಹೇಳಿದರು.
Vijaya Karnataka Web solve peoples problems
'ಶೀಘ್ರ ಜನರ ಸಮಸ್ಯೆ ಪರಿಹರಿಸಿ'


ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿಶನಿವಾರ ನಡೆದ ಜಿಲ್ಲಾಲೋಕಾಯುಕ್ತ ಪೊಲೀಸ್‌ ಅಧಿಕಾರಿಗಳಿಂದ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯಲ್ಲಿಅವರು ಮಾತನಾಡಿದರು. ನಗರದ ಆದರ್ಶ ಕಾಲೊನಿಯಲ್ಲಿಉದ್ಯಾನವನ ಜಾಗ ಒತ್ತುವರಿ ಮಾಡಿ ಮನೆ ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸುವಂತೆ ನಗರಸಭೆಯವರಿಗೆ ಸೂಚನೆ ಇದ್ದರೂ, ಇದುವರೆಗೆ ಕ್ರಮಕ್ಕೆ ಮುಂದಾಗಿಲ್ಲಎಂದು ಆನಂದ್‌ ಗೋರ್ಕರ್‌ ಎನ್ನುವವರು ಅಧಿಕಾರಿಗಳ ಗಮನಕ್ಕೆ ತಂದರು. ಈ ವೇಳೆ ನಗರಸಭೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಲೋಕಾಯುಕ್ತರು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದರು. ತಾಲೂಕು ಪಂಚಾಯಿತಿ ಮಳಿಗೆಗಳ ಹಂಚಿಕೆ ಅಕ್ರಮ, ನಗರದಲ್ಲಿಸ್ವಚ್ಛತೆ ಇಲ್ಲದೇ ಇರುವುದು, ನಗರಸಭೆಯಲ್ಲಿಲ್ಯಾಪ್‌ಟಾಪ್‌ ಹಂಚಿಕೆಯಲ್ಲಿಅಕ್ರಮ ನಡೆದಿರುವುದು, ವಿದ್ಯುತ್‌ ಬಿಲ್‌ ನೀಡುವಲ್ಲಿವಿಳಂಬ ಮಾಡಿರುವುದು ಸೇರಿ ಹಲವು ದೂರುಗಳನ್ನು ನೀಡಲಾಯಿತು. 9 ದೂರುಗಳಲ್ಲಿ, ದೂರುಗಳಿಗೆ ಸ್ಥಳದಲ್ಲಿಪರಿಹಾರ ದೊರೆಯಿತು.

ಲೋಕಾಯುಕ್ತ ಪೊಲೀಸ ಟಿ.ಆರ್‌.ರಾಘವೇಂದ್ರ, ಸಿಬ್ಬಂದಿಗಳಾದ ಖಾದರ್‌, ಗುರುಚಂದ್ರ, ವಿಜಯಕುಮಾರ, ಗೋಪಿನಾಥ, ಮಲ್ಲೇಶಯ್ಯ, ಅಮರೇಶ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ