ಆ್ಯಪ್ನಗರ

ನಡುಗಡ್ಡೆಗಳಲ್ಲಿ ಕಟ್ಟೆಚ್ಚರ

ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿಸಿದ್ದರಿಂದ ನದಿಪಾತ್ರದ ನಡುಗಡ್ಡೆಗಳ ಜನರ ರಕ್ಷ ಣೆಗೆ ಕಟ್ಟೆಚ್ಚರ ವಹಿಸಲಾಗಿದೆ.

Vijaya Karnataka 30 Jul 2019, 3:37 pm
ಲಿಂಗಸುಗೂರು ; ತಾಲೂಕಿನ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಅಪಾರ ನೀರು ಹರಿಸಿದ್ದರಿಂದ ನದಿಪಾತ್ರದ ನಡುಗಡ್ಡೆಗಳ ಜನರ ರಕ್ಷ ಣೆಗೆ ಕಟ್ಟೆಚ್ಚರ ವಹಿಸಲಾಗಿದೆ.
Vijaya Karnataka Web stuffed in shorts
ನಡುಗಡ್ಡೆಗಳಲ್ಲಿ ಕಟ್ಟೆಚ್ಚರ


ನಡುಗಡ್ಡೆ ಗ್ರಾಮಗಳಾದ ಜಲದುರ್ಗ, ಯಳಗುಂದಿ, ಹಂಚಿನಾಳ, ಯರಗೋಡಿ, ಕಡದರಗಡ್ಡಿ, ಕರಕಲಗಡ್ಡಿ ಗ್ರಾಮಗಳ ಜನರು ನದಿಗೆ ಇಳಿಯದಂತೆ ಈಗಾಗಲೇ ಮುನ್ಸೂಚನೆ ನೀಡಲಾಗಿದೆ. ನೆರೆ ಉಂಟಾದರೆ ನದಿ ತೀರದ ಜನರ ನೆರವಿಗೆ ತಾಲೂಕಾಡಳಿತದಿಂದ ಈಗಾಗಲೇ ಮೂರು ಬೋಟ್‌ಗಳನ್ನು ಕಾಯ್ದಿರಿಸಲಾಗಿದೆ. ಒಂದು ಬೋಟ್‌ ಲಿಂಗಸುಗೂರು ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಹಾಗೂ ಇನ್ನೆರಡು ರಾಯಚೂರಿನ ಎಸ್‌.ಪಿ. ಕಚೇರಿಯಲ್ಲಿವೆ. ನದಿಯಲ್ಲಿ ತೆಪ್ಪ, ಹರಿಗೋಲು ಹಾಕಿ ನದಿ ದಾಟುವ ದುಸ್ಸಾಹಸಕ್ಕೆ ಜನರು ಮುಂದಾಗಬಾರದೆಂದು ಎಚ್ಚರಿಕೆನೀಡಲಾಗಿದೆ.

ತಾಲೂಕಿನ ಶೀಲಹಳ್ಳಿ ಸೇತುವೆ ಮುಳಗಡೆಯಾಗುವ ಭೀತಿಯಿದ್ದು, ಸೇತುವೆಯ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ. ಕಡದರಡ್ಡಿ, ಯರಗೋಡಿ ಸೇರಿ ನಡಗಡ್ಡೆ ಗ್ರಾಮಗಳ ಜನರು, ಶೀಲಹಳ್ಳಿ ಸೇತುವೆ ಮೂಲಕ ತಾಲೂಕು ಕೇಂದ್ರ ತಲುಪಬೇಕಿದೆ. ಕಡದರಗಡ್ಡಿ ಗ್ರಾಮಸ್ಥರು ಗೋನವಾಟ್ಲ ಬಳಿಯ ಗೋಪಾಲಸ್ವಾಮಿ ದೇವಸ್ಥಾನದಿಂದ ಹರಿಗೋಲು, ತೆಪ್ಪದ ಮೂಲಕ ನದಿ ದಾಟುವುದನ್ನು ತಾಲೂಕಾಡಳಿತ ನಿಷೇಧಿಸಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ