ಆ್ಯಪ್ನಗರ

ಹಿಂದೂ ಧರ್ಮದ ರಕ್ಷಣಾ ಗೋಡೆಯೇ ಕುಸಿದಂತಾಗಿದೆ : ಸುಬುಧೇಂದ್ರ ತೀರ್ಥರ ಕಂಬನಿ

ಕೃಷ್ಣೈಕ್ಯರಾಗಿರುವ ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರನ್ನು ನೆನೆದು ಮಂತ್ರಾಲಯ ಮಠದ ಶ್ರೀಗಳಾದ ಸುಬುಧೇಂದ್ರ ತೀರ್ಥರು ಕಂಬನಿ ಮಿಡಿದಿದ್ದಾರೆ. ಅವರೊಂದಿಗಿದ್ದ ಅವಿನಾಭಾವ ಸಂಬಂಧವನ್ನು ಮೆಲುಕುಹಾಕಿದ್ದಾರೆ.

Vijaya Karnataka Web 29 Dec 2019, 12:24 pm
ರಾಯಚೂರು : ಪೇಜಾವರಶ್ರೀಗಳು ಇನ್ನಿಲ್ಲ ಎಂಬುದು ಆಘಾತ ಉಂಟು ಮಾಡಿದೆ. ಶತಮಾನ ಕಂಡ ಮಹಾನ್ ತಪಸ್ವಿಗಳು. ಹಿಂದೂ ಧರ್ಮದ ರಕ್ಷಣಾ ಗೋಡೆಯೊಂದನ್ನು ಕುಸಿದ ಅನುಭವವಾಗಿದೆ ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥರು ಶೋಕ ವ್ಯಕ್ತಪಡಿಸಿದ್ದಾರೆ.
Vijaya Karnataka Web ಪೇಜಾವರ ಶ್ರೀಗಳೊಂದಿಗೆ ಮಂತ್ರಾಲಯ ಶ್ರೀಗಳು


88 ವರ್ಷದ ಶ್ರೀ ವಿಶ್ವೇಶ ತೀರ್ಥರು ಕಳೆದ ಕೆಲ ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಅವರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೆ ಉಡುಪಿಯ ಪೇಜಾವರ ಮಠದಲ್ಲಿಯೇ ಡಿಸೆಂಬರ್ 29ರಂದು ಬೆಳಿಗ್ಗೆ 9.20ಕ್ಕೆ ಅಸ್ತಂಗತರಾದರು.

ಸನಾತನ ಹಿಂದೂ ಧರ್ಮದ ಹಿರಿಯ ಯತಿಗಳು ಶ್ರೀ ವಿಶ್ವೇಶ ತೀರ್ಥರು. 1938ರಿಂದಲೂ ಪೇಜಾವರ ಸ್ವಾಮೀಜಿಗಳೊಂದಿಗೆ ಮಂತ್ರಾಲಯ ಶ್ರೀಮಠಕ್ಕೆ ಉತ್ತಮ ಸಂಬಂಧ ಹೊಂದಿದೆ. ಬಾಲ್ಯದಲ್ಲಿ ತಮಗೆ ಅವರು ಪೂರ್ವಾಶ್ರಮದ ತಾತಂದಿರಂತಿದ್ದರು ಎಂದು ಶ್ರೀ ಸುಬುಧೇಂದ್ರ ತೀರ್ಥರು ಪೇಜಾವರ ಶ್ರೀಗಳನ್ನು ನೆನೆದಿದ್ದಾರೆ.

ಪೇಜಾವರ ಶ್ರೀ ವಿಶ್ವೇಶ ತೀರ್ಥರ ನಿಧನಕ್ಕೆ ನಾದಬ್ರಹ್ಮ ಹಂಸಲೇಖ ಭಾಷ್ಪಾಂಜಲಿ

ದೇಶದಲ್ಲಿ ಹಿಂದೂ ಧರ್ಮದ ಸಂರಕ್ಷಣೆಗೆ ಶ್ರೀ ವಿಶ್ವೇಶ ತೀರ್ಥರ ಕೊಡುಗೆ ಅಪಾರ. ಎಲ್ಲ ಜಾತಿ ಜನಾಂಗದ ಮಠಾಧಿಪತಿಗಳ ಜತೆ ಉತ್ತಮ ಬಾಂಧವ್ಯ ಹೊಂದಿದ ಯತಿಗಳು ಮಹಾನ್ ತಪಸ್ವಿಗಳು ಎಂದು ಮಂತ್ರಾಲಯ ಮಠದ ಶ್ರೀಗಳು ಕಂಬನಿ ಮಿಡಿದಿದ್ದಾರೆ.

ಶ್ರೀಮಠದಿಂದ ನಾಲ್ಕು ಬಾರಿ ಆಯೋಜಿಸಿದ್ದ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದಲ್ಲೂ ಪೇಜಾವರ ಶ್ರೀಗಳು ಭಾಗಿಯಾಗಿದ್ದು ಅವರು ಶಿಕ್ಷಣದ ನೀಡಿಕೆಗೆ ತೋರುತ್ತಿದ್ದ ಉತ್ಸಾಹಕ್ಕೆ ಸಾಕ್ಷಿ. ರಾಯಚೂರಿನಲ್ಲಿ ಡಿಸೆಂಬರ್ 16ರಂದು ಸಮಾರೋಪಗೊಂಡ ಮಂತ್ರಾಲಯ ಮಠದ ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವದ ಕಡೆಯ ದಿನ ಮಂತ್ರಾಲಯ ಮಠಾಧೀಶರಿಂದ ಪೇಜಾವರ ಶ್ರೀಗಳಿಗೆ ಗೌರವ ಸಮರ್ಪಣೆ ಮಾಡಲಾಗಿತ್ತು.

ಅಸ್ಪೃಶ್ಯತೆಗೆ ಬಾಲ್ಯದಲ್ಲೇ ಸವಾಲು ಹಾಕಿದ್ದ ಪೇಜಾವರ ಶ್ರೀಗಳು!

ಹಿಂದೂ ಸಮಾಜ ಸದೃಢಗೊಳಿಸುವಿಕೆ ಹಾಗೂ ಅಯೋಧ್ಯೆ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಅವರ ಆಶಯವಾಗಿತ್ತು. ಅವರ ಅಭಿಮಾನಿಗಳು ಹಾಗೂ ಅವರಿಂದ ಪಾರಮಾರ್ಥಿಕ ಪ್ರಯೋಜನ ಪಡೆದು ಅವರ ಆಶಯ ಈಡೇರಿಸಲು ಬದ್ಧರಾಗಿದ್ದೇವೆ ಎಂದು ಶ್ರೀ ಸುಬುಧೇಂದ್ರ ತೀರ್ಥರು ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ