ಆ್ಯಪ್ನಗರ

ಬೇಸಿಗೆ ಬಿಸಿಲು; ಜನ ಎಳೆನೀರಿಗೆ ಮೊರೆ

ಸುತ್ತಲಿನ ನಾನಾ ಗ್ರಾಮಗಳಲ್ಲಿ ಕಳೆದ 15ದಿನದಿಂದ ಬಿಸಿಲಿನ ತಾಪ ಏರುತ್ತಿದ್ದು ನಾನಾ ಹಳ್ಳಿಗರು ಬಿಸಿ ಬೇಗೆಗೆ ನಲುಗಿ ಹೋಗಿದ್ದಾರೆ. ಬಿಸಿಲಿನ ತಾಪ ತಣಿಸುವ ಎಳೆನೀರು, ಇನ್ನಿತರ ತಂಪು ನೀಡುವ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಮಾರಾಟಗಾರರು ಬಂಡಿಗಳಿಂದ ಹಳ್ಳಿಗಳ ನಾನಾ ಸ್ಥಳಗಳಲ್ಲಿ ತಂದು ಮಾರಾಟದಲ್ಲಿ ತೊಡಗಿದ್ದಾರೆ.

ವಿಕ ಸುದ್ದಿಲೋಕ 14 Mar 2016, 6:34 am
ಜಾಲಿಹಾಳ; ಸುತ್ತಲಿನ ನಾನಾ ಗ್ರಾಮಗಳಲ್ಲಿ ಕಳೆದ 15ದಿನದಿಂದ ಬಿಸಿಲಿನ ತಾಪ ಏರುತ್ತಿದ್ದು ನಾನಾ ಹಳ್ಳಿಗರು ಬಿಸಿ ಬೇಗೆಗೆ ನಲುಗಿ ಹೋಗಿದ್ದಾರೆ. ಬಿಸಿಲಿನ ತಾಪ ತಣಿಸುವ ಎಳೆನೀರು, ಇನ್ನಿತರ ತಂಪು ನೀಡುವ ಹಣ್ಣುಗಳಿಗೆ ಹೆಚ್ಚಿನ ಬೇಡಿಕೆ ಬಂದಿದ್ದು ಮಾರಾಟಗಾರರು ಬಂಡಿಗಳಿಂದ ಹಳ್ಳಿಗಳ ನಾನಾ ಸ್ಥಳಗಳಲ್ಲಿ ತಂದು ಮಾರಾಟದಲ್ಲಿ ತೊಡಗಿದ್ದಾರೆ.
Vijaya Karnataka Web summer sunshine coconut water is a way of
ಬೇಸಿಗೆ ಬಿಸಿಲು; ಜನ ಎಳೆನೀರಿಗೆ ಮೊರೆ


ಬೆಂಗಳೂರ, ತುಮಕೂರ, ಹಾಸನ, ಇನ್ನಿತರ ಪ್ರದೇಶಗಳಲ್ಲಿ ಬೆಳೆದ ಎಳೆನೀರು ಈ ಭಾಗದ ಪಟ್ಟಣ ಪ್ರದೇಶಗಳು ಸೇರಿದಂತೆ ನಾನಾ ಹಳ್ಳಿಗಳಲ್ಲಿ ಲಾರಿಗಟ್ಟಲೇ ಹೋಲ್ ಸೇಲ್ ದರದಲ್ಲಿ ತಂದು ಹಾಕಲಾಗುತ್ತಿದೆ. ಬಿಸಿಲಿನ ಬೇಗೆ ಹೆಚ್ಚುತ್ತಿದ್ದರಿಂದ ಒಂದೊಂದು ಹಳ್ಳಿಗಳಲ್ಲಿ ನಿತ್ಯ 500ಕ್ಕೂ ಹೆಚ್ಚು ಎಳೆನೀರು ಕಾಯಿಗಳು ಮಾರಾಟವಾಗುತ್ತಿವೆ. 1ಎಳೆ ನೀರಿನ ಬೆಲೆ 25ರೂ. ಗಳಂತೆ ಮಾರಾಟ ಮಾಡಲಾಗುತ್ತಿದೆ. ರಾಯಚೂರ-ಗಂಗಾವತಿ ಮಾರ್ಗದ ಶಾಂತಿನಗರ ಗ್ರಾಮದಿಂದ ಹಿಡಿದು 10ಕಿ. ಮೀ.ದೂರದ ಹೊಸಳ್ಳಿ ಕ್ರಾಸ್‌ವರೆಗೆ ಹತ್ತಾರು ಎಳೆ ನೀರಿನ ಅಂಗಡಿಗಳಿವೆ.

ಈ ಭಾಗದಿಂದ ನಿತ್ಯ ಬಸ್, ಲಾರಿ, ಕಾರ್, ಟಾಟಾ ಏಸ್, ದ್ವಿಚಕ್ರವಾಹನ ಸೇರಿ ಇನ್ನಿತರ ಸಾವಿರಾರು ನಾನಾ ವಾಹನಗಳು ಸಂಚರಿಸುತ್ತವೆ. ಬಿಸಿಲಿನ ಬೇಗೆ ತಾಳದೆ ಗಿಡಗಳ ಕೆಳಗಡೆ ನಿಂತ ಎಳೆನೀರು ಕುಡಿದು ತಂಪಾಗಿಸಿಕೊಂಡು ಸಾಗುತ್ತಿದ್ದಾರೆ. ಗಾಂಧಿನಗರ, ಸೋಮಲಾಪುರ, ಸಾಲಗುಂದ, ಅಂಭಾಮಠ, ಮುಕ್ಕುಂದ, ಸಾಸಲಮರಿ, ಮಲ್ಕಾಪುರ ಇನ್ನಿತರ ಒಳ ಭಾಗದ ಗ್ರಾಮಸ್ಥರು ಬಿಸಿಲಿನ ಬೇಗೆಗೆ ತಂಪಾಗಿಸಿಕೊಳ್ಳಲು ಎಳೆನೀರು ಸೇರಿ, ಕಲ್ಲಂಗಡಿ, ಖರಬುಜಾ, ದ್ರಾಕ್ಷಿ, ಸಪೋಟಾ ಹಣ್ಣುಗಳಿಗೆ ಮೊರೆ ಹೋಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ