ಆ್ಯಪ್ನಗರ

ಬಿರುಬಿಸಿಲು: ಮೇವು, ನೀರಿಗಾಗಿ ಅಲೆದಾಟ

ಕಳೆದ ಮೂರು ವರ್ಷಗಳಿಂದ ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ಹಳ್ಳ-ಕೊಳ್ಳಗಳು ಬತ್ತಿಹೋಗಿವೆ. ರಣರಣ ಬಿಸಿಲಿನಲ್ಲಿ ದನಕರುಗಳು, ಮೇವು ಹಾಗೂ ನೀರು ಹುಡುಕುತ್ತ ಅಡವಿಯಲ್ಲಿ ಅಲೆದಾಡುವಂತಾಗಿದೆ.

Vijaya Karnataka 2 Mar 2019, 5:00 am
ಹಟ್ಟಿಚಿನ್ನದಗಣಿ : ಕಳೆದ ಮೂರು ವರ್ಷಗಳಿಂದ ಹಿಂಗಾರು ಹಾಗೂ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಈ ಭಾಗದ ಹಳ್ಳ-ಕೊಳ್ಳಗಳು ಬತ್ತಿಹೋಗಿವೆ. ರಣರಣ ಬಿಸಿಲಿನಲ್ಲಿ ದನಕರುಗಳು, ಮೇವು ಹಾಗೂ ನೀರು ಹುಡುಕುತ್ತ ಅಡವಿಯಲ್ಲಿ ಅಲೆದಾಡುವಂತಾಗಿದೆ.
Vijaya Karnataka Web RAC-RCH28HGM P2


ಕಳೆದೆರಡು ವಾರಗಳಿಂದ ಬಿಸಿಲಿನ ಧಗೆ ಹೆಚ್ಚಾಗುತ್ತಿದೆ. ಬಿಸಿಲಿನ ಪ್ರಖರತೆಯಿಂದ ಹಳ್ಳ-ಕೊಳ್ಳಗಳಲ್ಲಿದ್ದ ಅಲ್ಪಸ್ವಲ್ಪ ನೀರು, ದಿನದಿಂದ ದಿನಕ್ಕೆ ಬತ್ತಿ ಹೋಗುತ್ತಿದೆ. ಅಡವಿಯಲ್ಲಿ ದನಕರುಗಳಿಗೆ ಮೇವು ಹಾಗೂ ನೀರು ಸಿಗದೇ ದನಗಾಹಿಗಳು ತೊಂದರೆ ಅನುಭವಿಸುವಂತಾಗಿದೆ.

ಹಲವು ಗ್ರಾಮಗಳಲ್ಲಿ ಅಂತರ್ಜಲ ಕುಸಿತದಿಂದ ನೀರಿಲ್ಲದೇ ಹನಿ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. 2018ರಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಬಾರದ್ದರಿಂದ ಈ ಬೇಸಿಗೆಯ ಆರಂಭದಲ್ಲೇ ಅಡವಿಯಲ್ಲಿ ಎಲ್ಲೂ ನೀರು ಕಾಣುತ್ತಿಲ್ಲ.

ಉದ್ಯೋಗಕ್ಕೂ ಬರ: ಬೇಸಿಗೆ ವೇಳೆ ಗ್ರಾಮೀಣ ಪ್ರದೇಶದಲ್ಲಿ ಯಾವ ಕೆಲಸವೂ ಸಿಗುವುದಿಲ್ಲ. ಈ ಸಾರಿ ಬರಗಾಲ ಆವರಿಸಿದ್ದರಿಂದ ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ. ಮನೆಯಲ್ಲಿ ಖಾಲಿ ಕುಳಿತರೆ ಹೊಟ್ಟೆಪಾಡಿಗೆ ಏನು ಮಾಡುವುದೆಂದು ಗ್ರಾಮೀಣ ಪ್ರದೇಶದ ಜನ ಬದುಕಿನ ಬಂಡಿದೂಡಲು ನಗರ ಪ್ರದೇಶಗಳÜದತ್ತ ಮುಖ ಮಾಡಿದ್ದಾರೆ. ಕೂಲಿಕಾರರಿಗೆ ಉದ್ಯೋಗ ನೀಡಬೇಕಾದ ನರೇಗಾ ಯೋಜನೆ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಜನತೆ ಊರು ತೊರೆದು ಗುಳೆ ಹೋಗುತ್ತಿರುವುದು ಸಾಮಾನ್ಯವಾಗಿದೆ.

..........

ಸತತ ಬರಗಾಲ ಬಿದ್ದಿದ್ದರಿಂದ ಭೂಮಿಯಲ್ಲಿ ನೀರು ಇಂಗಿಹೋಗಿದೆ. ಹಳ್ಳ-ಕೊಳ್ಳ, ಕೆರೆಗಳಲ್ಲಿ ಜಾನುವಾರುಗಳಿಗೆ ನೀರು ಸಿಗದೇ ರೈತರು ಹೈರಾಣಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಖರತೆ ಇನ್ನಷ್ಟು ಹೆಚ್ಚಾಗುವ ಸಂಭವವಿದೆ. ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತ ಸೂಕ್ತ ಕ್ರಮಕೈಗೋಳ್ಳಬೇಕಿದೆ.

-ವೀರನಗೌಡ ಅನ್ವರಿ, ತಾಲೂಕು ಅಧ್ಯಕ್ಷ , ರಾಜ್ಯ ರೈತ ಸಂಘ, ಹಟ್ಟಿಚಿನ್ನದಗಣಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ