ಆ್ಯಪ್ನಗರ

ಮಾತು ತಪ್ಪಿದ ಬಿಇಒ ಹಳೆ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಬೋಧನೆ!

ನಗರಗುಂಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಇಬ್ಬರು ಶಿಕ್ಷ ಕರನ್ನು ನಿಯೋಜಿಸುವುದಾಗಿ ಬಿಇಒ ಎಸ್‌.ಎಮ್‌. ಹತ್ತಿ ನೀಡಿದ ಭರವಸೆ ಹುಸಿಯಾಗಿದ್ದು, ಗ್ರಾಮದ ಹಳೆ ವಿದ್ಯಾರ್ಥಿಗಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.

Vijaya Karnataka 12 Jul 2019, 3:19 pm
ದೇವದುರ್ಗ : ನಗರಗುಂಡ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಗೆ ಇಬ್ಬರು ಶಿಕ್ಷ ಕರನ್ನು ನಿಯೋಜಿಸುವುದಾಗಿ ಬಿಇಒ ಎಸ್‌.ಎಮ್‌. ಹತ್ತಿ ನೀಡಿದ ಭರವಸೆ ಹುಸಿಯಾಗಿದ್ದು, ಗ್ರಾಮದ ಹಳೆ ವಿದ್ಯಾರ್ಥಿಗಳು ಮಕ್ಕಳಿಗೆ ಪಾಠ ಮಾಡುತ್ತಿದ್ದಾರೆ.
Vijaya Karnataka Web teaching children from old students
ಮಾತು ತಪ್ಪಿದ ಬಿಇಒ ಹಳೆ ವಿದ್ಯಾರ್ಥಿಗಳಿಂದ ಮಕ್ಕಳಿಗೆ ಬೋಧನೆ!


ನಗರಗುಂಡ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1 ರಿಂದ 7ನೇ ತರಗತಿವರೆಗೆ 185 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯ ಐವರು ಶಿಕ್ಷ ಕರಲ್ಲಿ ಮೂವರು ಕಳೆದ ನಾಲ್ಕು ವರ್ಷದಿಂದ ಸತತ ಗೈರಿದ್ದಾರೆ. ಇದರಲ್ಲಿ ಕೆಲವರು ನ್ಯಾಯಾಲಯ ಹಾಗೂ ಶಿಕ್ಷ ಣ ಇಲಾಖೆ ನಿಯಮಗಳನ್ನು ಉಲ್ಲಂಘಿಸಿ ಅನ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ.

ಸಂಧಾನ: ಸತತ 4ವರ್ಷದಿಂದ ಶಾಲೆಗೆ ಬಾರದಿರುವ ಶಿಕ್ಷ ಕರನ್ನು ಮರಳಿ ಶಾಲೆಗೆ ನಿಯೋಜನೆಗೊಳಿಸುವಂತೆ ಆಗ್ರಹಿಸಿ ಶಾಲೆ ವಿದ್ಯಾರ್ಥಿಗಳೇ ಶಾಲೆಗೆ ಬೀಗ ಹಾಕಿ ಇತ್ತೀಚೆಗೆ ಪ್ರತಿಭಟಿಸಿದ್ದರು. ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಬಿಇಒ ಎಸ್‌.ಎಮ್‌.ಹತ್ತಿ, ಪಿಎಸೈ ಲಕ್ಕಪ್ಪ ಬಿ.ಅಗ್ನಿ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆ ನಡೆಸಲಾಗಿತ್ತು. ಸೋಮವಾರವೇ ಇಬ್ಬರು ಶಿಕ್ಷ ಕರನ್ನು ನೇಮಿಸುವುದಾಗಿ ಭರವಸೆ ನೀಡಲಾಗಿತ್ತು. ಬಿಇಒ ಭರವಸೆ ನೀಡಿದ್ದರಿಂದ ಮಕ್ಕಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದರು. ಆದರೆ ಇದುವರೆಗೆ ಯಾವೊಬ್ಬ ಶಿಕ್ಷಕರನ್ನೂ ಶಾಲೆಗೆ ನಿಯೋಜನೆ ಮಾಡಿಲ್ಲ. ಪರಿಣಾಮ, ಶಾಲೆಯ ಹಳೆ ವಿದ್ಯಾರ್ಥಿಗಳೇ ಮಕ್ಕಳಿಗೆ ಬೋಧನೆ ಮಾಡುತ್ತಿದ್ದಾರೆ.

---
ಬಿಇಒ ಎಸ್‌.ಎಮ್‌.ಹತ್ತಿ ನೀಡಿದ ಭರವಸೆ ಸುಳ್ಳಾಗಿದೆ. ತಕ್ಷ ಣ ಶಿಕ್ಷ ಕರನ್ನು ನೇಮಿಸದಿದ್ದರೆ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ.

-ಆಂಜಿನೇಯ, ಬಸವರಾಜ ಪಾಟೀಲ್‌, ಗ್ರಾಮಸ್ಥರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ