ಆ್ಯಪ್ನಗರ

'ಐದು ಕೋಟಿ ವೆಚ್ಚದಡಿ ದೇಗುಲ ನಿರ್ಮಾಣ'

ನಗರದಲ್ಲಿಪ್ರಥಮ ಬಾರಿಗೆ ಮಣ್ಣು ಮಿಶ್ರಿತ ಒತ್ತಿಟ್ಟಿಗೆಗಳನ್ನು ಬಳಸಿ 5ಕೋಟಿ ವೆಚ್ಚದಡಿ 100ವರ್ಷ ಬಾಳಿಕೆ ಬರುವ ಪರಿಸರ ಸ್ನೇಹಿ ಇಸ್ಕಾನ್‌ ಟೆಂಪಲ್‌ ನಿರ್ಮಿಸಲು ಯೋಜಿಸಲಾಗಿದೆ. 2020ರ ಜನವರಿಯಲ್ಲಿದೇವಸ್ಥಾನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಖ್ಯಾತ ವಾಸ್ತು ವಿನ್ಯಾಸಕಿ ಚಿತ್ರಾ ವಿಶ್ವನಾಥ ಹೇಳಿದರು.

Vijaya Karnataka 13 Nov 2019, 5:00 am
ರಾಯಚೂರು: ನಗರದಲ್ಲಿಪ್ರಥಮ ಬಾರಿಗೆ ಮಣ್ಣು ಮಿಶ್ರಿತ ಒತ್ತಿಟ್ಟಿಗೆಗಳನ್ನು ಬಳಸಿ 5ಕೋಟಿ ವೆಚ್ಚದಡಿ 100ವರ್ಷ ಬಾಳಿಕೆ ಬರುವ ಪರಿಸರ ಸ್ನೇಹಿ ಇಸ್ಕಾನ್‌ ಟೆಂಪಲ್‌ ನಿರ್ಮಿಸಲು ಯೋಜಿಸಲಾಗಿದೆ. 2020ರ ಜನವರಿಯಲ್ಲಿದೇವಸ್ಥಾನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದು ಖ್ಯಾತ ವಾಸ್ತು ವಿನ್ಯಾಸಕಿ ಚಿತ್ರಾ ವಿಶ್ವನಾಥ ಹೇಳಿದರು.
Vijaya Karnataka Web temple building to be built at a cost of rs 5 crore
'ಐದು ಕೋಟಿ ವೆಚ್ಚದಡಿ ದೇಗುಲ ನಿರ್ಮಾಣ'


ನಗರದ ಆಶಾಪುರ ರಸ್ತೆಯಲ್ಲಿರುವ ಇಸ್ಕಾನ್‌ ಟೆಂಪಲ್‌ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದಲ್ಲಿಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಉದ್ದೇಶ:ಪರಿಸರ ಸ್ನೇಹಿ, ಜನಸ್ನೇಹಿ ಕಟ್ಟಡಗಳ ಕೊರತೆ ಇಂದು ಹೆಚ್ಚಿದೆ. ಕಾಂಕ್ರೀಟ್‌ ಕಟ್ಟಡಗಳಿಂದ ಪರಿಸರಕ್ಕೆ ಧಕ್ಕೆಯುಂಟಾಗುತ್ತಿದ್ದು, ವಾತಾವರಣವೂ ಹದಗೆಡುತ್ತಿದೆ. ಈ ನಿಟ್ಟಿನಲ್ಲಿಉತ್ತರ ಕರ್ನಾಟಕ ಭಾಗದಲ್ಲಿಸ್ಫೂರ್ತಿದಾಯಕ ಮತ್ತು ಮಾದರಿ ರೀತಿಯಲ್ಲಿಇಸ್ಕಾನ್‌ ದೇಗುಲ ನಿರ್ಮಿಸಲು ಉದ್ದೇಶಿಸಿದೆ. ಯಾವುದೇ ಕಾಂಕ್ರೀಟ್‌ ಬಳಸದೇ ಪರಿಸರಸ್ನೇಹಿ ಮಣ್ಣು ಮಿಶ್ರಿತ ಒತ್ತಿಟ್ಟಿಗೆಗಳನ್ನು ಸಂಪೂರ್ಣ ಬಳಸಿ ದೇವಸ್ಥಾನ ನಿರ್ಮಿಸಲಾಗುತ್ತದೆ.

ಯೋಜನೆ: ಇಸ್ಕಾನ್‌ ಟೆಂಪಲ್‌ನ ಒಟ್ಟು 5 ಎಕರೆ ಪ್ರದೇಶದ ಪೈಕಿ 20 ಸಾವಿರ ಚದರ ಅಡಿಯಲ್ಲಿದೇವಸ್ಥಾನ ನಿರ್ಮಿಸಲು ಯೋಜಿಸಿದ್ದು, ಅದಕ್ಕೆ ಬೇಕಾದ ಅಗತ್ಯ ಸಿದ್ಧ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಈಗಾಗಲೇ ಪರಿಸರ ಸ್ನೇಹಿ ಮಾದರಿಯಲ್ಲಿ

ಬೆಂಗಳೂರಿನಲ್ಲಿಇಸ್ಕಾನ್‌ ಟೆಂಪಲ್‌ ನಿರ್ಮಿಸಲಾಗಿದ್ದು, ಆಕರ್ಷಣೆಯ ಧಾರ್ಮಿಕ ಕೇಂದ್ರಬಿಂದುವಾಗಿ ಹೊರಹೊಮ್ಮಿದೆ. 100ವರ್ಷಗಳ ಕಾಲ ಬಾಳಿಕೆ ಬರುವ ಮಣ್ಣಿನ ಕಟ್ಟಡವನ್ನು ವೈಜ್ಞಾನಿಕವಾಗಿ ನಿರ್ಮಿಸಲಾಗುತ್ತಿದೆ. ತಾಂತ್ರಿಕ ಸದೃಢತೆ ಹೊಂದಿದ ಸಮೃದ್ಧ ಕಟ್ಟಡ ಕಟ್ಟಲು ಮಹತ್ವದ ಯೋಜನೆ ರೂಪಿಸಿದ್ದು, ಜನವರಿ ತಿಂಗಳಿಂದಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಇಸ್ಕಾನ್‌ ಅಧ್ಯಕ್ಷ ವರದಕೃಷ್ಣ ದಾಸ್‌ ಮಾತನಾಡಿ, ಪರಿಸರಸ್ನೇಹಿ ಇಸ್ಕಾನ್‌ ಟೆಂಪಲ್‌ ನಿರ್ಮಾಣಕ್ಕೆ ಸ್ಥಳೀಯ ಜನಪ್ರತಿನಿಧಿಗಳು, ಭಕ್ತಾಧಿಗಳು, ದಾನಿಗಳು ಸ್ವಯಂ ಪ್ರೇರಿತರಾಗಿ ತನು, ಮನ, ಧನದಿಂದ ಸ್ಪಂದಿಸುವ ವಿಶ್ವಾಸವಿದೆ. ನಿರ್ಮಾಣ ವೆಚ್ಚ 5ಕೋಟಿ ತಲುಪುವ ಅಂದಾಜಿದೆ. ಇಸ್ಕಾನ್‌ ಟೆಂಪಲ್‌ಗೆ ಸಂಪೂರ್ಣ ವಿದ್ಯುತ್‌ ಸರಬರಾಜು ನೀಡದೇ ಸೋಲಾರ್‌ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಭವ್ಯವಾದ ಇಸ್ಕಾನ್‌ ಟೆಂಪಲ್‌ ಹತ್ತಿರದಲ್ಲೇ ಗೋಶಾಲೆ, ಕೊಳ, ಮೈಕ್ರೋ ಫಾರೆಸ್ಟ್‌ ನಿರ್ಮಿಸಲು ಜಾಗ ಗುರುತಿಸಿ ಯೋಜಿಸಿದೆ.

ದೇವಸ್ಥಾನ ನಿರ್ಮಿಸಲು ಉದ್ದೇಶಿಸಿರುವ ಪ್ರದೇಶದ ಸುತ್ತಲೂ ಈಗಾಗಲೇ 2ಸಾವಿರ ಗಿಡಗಳನ್ನು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿಸಹಸ್ರಾರು ಸಂಖ್ಯೆಯ ಭಕ್ತರಿಗೆ ಮಾದರಿ ಧಾರ್ಮಿಕ ಕ್ಷೇತ್ರ ನಿರ್ಮಿಸುವ ಸದುದ್ದೇಶ ಇದೆ ಎಂದರು.

ವಾಸ್ತು ವಿನ್ಯಾಸ ಎಂಜಿನಿಯರ್‌ ರಾಧಾಕೃಷ್ಣ, ತಾಂತ್ರಿಕ ತಜ್ಞ ಡಾ.ವೆಂಕಟೇಶ, ವಾಸ್ತು ತಜ್ಞ ಶರತ್‌ ನಾಯಕ, ರಮ್ಯ, ಐಶ್ವರ್ಯ, ಶರತ್‌ ಶ್ಯಾಮ್‌ ದಾಸ್‌, ಗೋವಿಂದರಾಜು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ