ಆ್ಯಪ್ನಗರ

ಕೊಲೆ ಪ್ರಕರಣದಲ್ಲಿನ ಆರೋಪಿಗಳ ಖುಲಾಸೆ

ಮಸ್ಕಿ ಠಾಣೆ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಕೊಲೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಸಾಬೀತಾಗದ ಕಾರಣ ತಿಮ್ಮಪ್ಪ, ನಿಂಗಮ್ಮ ಮತ್ತು ಷರೀಪ ಎಂಬುವವರನ್ನು ಬಿಡುಗಡೆಗೊಳಿಸಲಾಗಿದೆ.

Vijaya Karnataka 28 Apr 2018, 5:00 am
ರಾಯಚೂರು : ಮಸ್ಕಿ ಠಾಣೆ ವ್ಯಾಪ್ತಿಯ ಹಡಗಲಿ ಗ್ರಾಮದಲ್ಲಿ ಕೊಲೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂಬ ಆರೋಪ ಸಾಬೀತಾಗದ ಕಾರಣ ತಿಮ್ಮಪ್ಪ, ನಿಂಗಮ್ಮ ಮತ್ತು ಷರೀಪ ಎಂಬುವವರನ್ನು ಬಿಡುಗಡೆಗೊಳಿಸಲಾಗಿದೆ.
Vijaya Karnataka Web the accused was acquitted of the murder case
ಕೊಲೆ ಪ್ರಕರಣದಲ್ಲಿನ ಆರೋಪಿಗಳ ಖುಲಾಸೆ


ಹಡಗಲಿ ಗ್ರಾಮದಲ್ಲಿ 2016ರ ಏ.22ರಂದು ರಮೇಶ ಎಂಬಾತ ತನ್ನ ಪತ್ನಿಯ ಮೇಲೆ ಸಂಶಯಪಟ್ಟು ಆಕೆಯ ಜತೆ ಇಬ್ಬರು ಮಕ್ಕಳನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಮೂವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆ ಕೊಲೆಗೆ ರಮೇಶನ ತಂದೆ ತಿಮ್ಮಪ್ಪ, ತಾಯಿ ನಿಂಗಮ್ಮ ಮತ್ತು ಸಹೋದರ ಷರೀಪ ಪ್ರಚೋದನೆ ನೀಡಿದ್ದಾರೆಂದು ದೂರು ದಾಖಲಾದ ಕಾರಣ ಮಸ್ಕಿ ಪೊಲೀಸರು ತನಿಖೆ ನಡೆಸಿ ಆರೋಪಿತರ ವಿರುದ್ಧ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ತೀರ್ಪು: ದೋಷಾರೋಪಣೆ ವಿಚಾರಣೆ ನಡೆಸಿ ಸಾಕ್ಷ್ಯಾಧಾರ ಪರಿಶೀಲಿಸಿದ್ದು, ಆರೋಪ ಸಾಬೀತಾಗಿಲ್ಲವೆಂದು ಇವರನ್ನು ಗುರುವಾರ ಬಿಡುಗಡೆಗೊಳಿಸಿ 2ನೇ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ತೀರ್ಪು ನೀಡಿದ್ದಾರೆ. ಆರೋಪಿತರ ಪರವಾಗಿ ಹಿರಿಯ ನ್ಯಾಯವಾದಿ ಎಂ.ಮರಿಬಸನಗೌಡ ಮತ್ತು ಸಹೋದ್ಯೋಗಿ ಜೆ.ಚಂದ್ರಶೇಖರ ಪಾಟೀಲ್‌ ವಕೀಲರು ವಾದ ಮಂಡಿಸಿದ್ದರು ಎಂದು ಹಿರಿಯ ನ್ಯಾಯವಾದಿ ಎಂ.ಮರಿಬಸನಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ