ಆ್ಯಪ್ನಗರ

ಎಚ್ಚೆತ್ತ ಅಧಿಕಾರಿಗಳು, ಆರಂಭವಾದ ನೀರು ಶುದ್ಧಿಕರಣ ಘಟಕ

ಸಮೀಪದ ಆಶಿಹಾಳ ತಾಂಡಾ ಸೇರಿ ಇತರೆ ಗ್ರಾಮಗಳಿಗೆ ಜಿ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ನಿರುಪಯುಕ್ತವಾದ ನೀರು ಶುದ್ಧಿಕರಣ ಘಟಕ ಪುನರಾರಂಭಿಸಲು ಮುಂದಾಗಿರುವುದು ಗುರುವಾರ ಕಂಡುಬಂದಿದೆ.

Vijaya Karnataka 25 May 2019, 5:00 am
ನಾಗರಹಾಳ ; ಸಮೀಪದ ಆಶಿಹಾಳ ತಾಂಡಾ ಸೇರಿ ಇತರೆ ಗ್ರಾಮಗಳಿಗೆ ಜಿ.ಪಂ. ಹಾಗೂ ಗ್ರಾ.ಪಂ. ಅಧಿಕಾರಿಗಳು ಭೇಟಿ ನೀಡಿ ನಿರುಪಯುಕ್ತವಾದ ನೀರು ಶುದ್ಧಿಕರಣ ಘಟಕ ಪುನರಾರಂಭಿಸಲು ಮುಂದಾಗಿರುವುದು ಗುರುವಾರ ಕಂಡುಬಂದಿದೆ.
Vijaya Karnataka Web RAC-RCH24NAGARAHAL02


ಈ ಕುರಿತು ವಿಕ ಪತ್ರಿಕೆ 'ನಿರುಪಯುಕ್ತವಾದ ನೀರು ಶುದ್ಧಿಕರಣ ಘಟಕಗಳು' ಎಂಬ ಶಿರ್ಷಿಕೆಯಡಿ ಮೇ 22ರಂದು ವರದಿ ಪ್ರಕಟಿಸಲಾಗಿತ್ತು. ಎಚ್ಚೆತ್ತ ಲಿಂಗಸುಗೂರು ಜಿ.ಪಂ.ಅಧಿಕಾರಿಗಳು ಆಶಿಹಾಳ ತಾಂಡಾಗೆ ಆಗಮಿಸಿ ನೀರು ಶುದ್ಧಿಕರಣ ಘಟಕ ದುರಸ್ತಿ ಮಾಡಿಸಿದ್ದಾರೆ. ಅಧಿಕಾರಿಗಳ ಕಾರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಜಿ.ಪಂ. ಎಇಇ ಶ್ರೀಮಂತ ಮಿಣಜಗಿ, ಅಭಿಯಂತರ ವೆಂಕಟೇಶ, ಪಿಡಿಒ ರಾಮಣ್ಣ, ಗ್ರಾ.ಪಂ. ಸದಸ್ಯ ಬೋದು ನಾಯಕ್‌ ಸೇರಿ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ