ಆ್ಯಪ್ನಗರ

ಮಾರೆಮ್ಮ ದೇವಿಯ ಉಚ್ಛಾಯ ಮಹೋತ್ಸವ

ತಾಲೂಕಿನ ಮೀರಾಪುರ ಗ್ರಾಮದಲ್ಲಿ ಮಾರೆಮ್ಮದೇವಿಯ ಉಚ್ಛಾಯಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

Vijaya Karnataka 18 May 2019, 5:00 am
ರಾಯಚೂರು ; ತಾಲೂಕಿನ ಮೀರಾಪುರ ಗ್ರಾಮದಲ್ಲಿ ಮಾರೆಮ್ಮದೇವಿಯ ಉಚ್ಛಾಯಿ ಮಹೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.
Vijaya Karnataka Web RAC-RCH17HD01


ರಥೋತ್ಸವ ಪ್ರಯುಕ್ತ ಬೆಳಗ್ಗೆ ವಿಶೇಷ ಪೂಜೆ ನಡೆಯಿತು. ಬೆಳಗ್ಗೆಯಿಂದಲೇ ಜೇಗರಕಲ್‌, ಜೆ.ಮಲ್ಲಾಪುರ, ಹನುಮಾಪುರ, ಹೆಂಬೆರಾಳ, ಜಿ.ತಿಮ್ಮಾಪುರ, ಮೀರಾಪುರ ಗ್ರಾಮದ ಜನರು ದೇವಸ್ಥಾನಕ್ಕೆ ಬಂದು ನೈವೇದ್ಯ ಕಾಯಿ ಕರ್ಪೂರ ಅರ್ಪಿಸಿದರು.

ಸಂಜೆ 6ಗಂಟೆಗೆ ಮಾರೆಮ್ಮ ದೇವಸ್ತಾನದ ಅರ್ಚಕರು ರಥಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ವೈವಿಧ್ಯಮಯ ಹೂವು ಹಾಗೂ ತಳಿರು ತೋರಣಗಳಿಂದ ರಥವನ್ನು ಅಲಂಕಾರ ಮಾಡಲಾಗಿತ್ತು. ಸಕಲ ಮಂಗಳ ವಾದ್ಯಗಳೊಂದಿಗೆ ನೆರೆದಿದ್ದ ಭಕ್ತರು ದೇವರ ಜಯಘೋಷಗಳ ಸಮೇತ ಉಚ್ಛಾಯಿ ನೆರವೇರಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ