ಹಟ್ಟಿಚಿನ್ನದಗಣಿ: ಅನಕ್ಷ ರಸ್ಥರಿಗೆ ಅಕ್ಷ ರ ಕಲಿಸುವುದೂ ಸಹ ದೇಶ ಸೇವೆ ಇದ್ದಂತೆ ಎಂದು ಲೋಕ ಶಿಕ್ಷ ಣ ಕೇಂದ್ರ ತಾಲೂಕು ಸಂಯೋಜಕ ರುದ್ರಮುನಿ ಹೇಳಿದರು.
ಸಮೀಪದ ಕೋಠಾ ಗ್ರಾ.ಪಂ. ವ್ಯಾಪ್ತಿಯ ಮೇದಿನಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾಕ್ಷ ರ ಭಾರತ ಸಾಕ್ಷ ರ ಕರ್ನಾಟಕ, ಜಿ.ಪಂ. ರಾಯಚೂರ ಹಾಗೂ ಲೋಕ ಶಿಕ್ಷ ಣ ಕೇಂದ್ರ ಲಿಂಗಸುಗೂರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ 3ನೇ ಹಂತದ ಸ್ವಯಂ ಸೇವಕರ 4 ದಿನಗಳ ತರಬೇತಿ ಶಿಬಿರದಲ್ಲಿ ಗುರುವಾರ ಮಾತನಾಡಿದರು.
ಹಟ್ಟಿ ಜಿ.ಪಂ. ವ್ಯಾಪ್ತಿಯಲ್ಲಿ 3,780, ಕೋಠಾ ಗ್ರಾ.ಪಂ. ವ್ಯಾಪ್ತಿಯಲ್ಲಿ 850 ಹಾಗೂ ಮೇದಿನಾಪುರ ಗ್ರಾಮದಲ್ಲಿ 380 ಅನಕ್ಷ ರಸ್ಥರು ಇದ್ದಾರೆ. ಅವರ ಮನವೊಲಿಸಿ ಅಕ್ಷ ರ ಕಲಿಸಬೇಕು ಎಂದರು.
ಎಪಿಎಂಸಿ ಮಾಜಿ ನಿರ್ದೇಶಕ ಎಂ.ಡಿ.ಅಮ್ಜದ್ಹುಸೇನ್, ಶಾಲಾ ಮುಖ್ಯಗುರು ಅಬ್ದುಲ್ ವಾಹಿದ್ ಮಾತನಾಡಿದರು. ಕೋಠಾ ತಾ.ಪಂ. ಸದಸ್ಯೆ ಬಸಮ್ಮ ಶಿವಣ್ಣ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಕೋಠಾ ಗ್ರಾ.ಪಂ.ಅಧ್ಯಕ್ಷೆ ಅಮರಮ್ಮ ನಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಬಸಲಿಂಗಪ್ಪ, ಮರಿಯಮ್ಮ, ಅಶ್ವಿನಿ, ನಾಗರತ್ನ, ಈರಮ್ಮ, ಹಟ್ಟಿ ಗ್ರಾ.ಪಂ. ಸದಸ್ಯ ಸೈಯದ್ ಪಾಷಾ, ಕೋಠಾ ಪ್ರಾ.ಶಾಲಾ ಮುಖ್ಯಗುರು ಬಸಲಿಂಗಮ್ಮ, ಪ್ರೇರಕ ಮಲ್ಲಿಕಾರ್ಜುನ್ ಸ್ವಾಮಿ ಇದ್ದರು.