ಆ್ಯಪ್ನಗರ

‘ಶಿಕ್ಷಣದಲ್ಲಿನೈತಿಕ ಮೌಲ್ಯ ಕಣ್ಮರೆ’

ಶಿಕ್ಷಣದಲ್ಲಿನೈತಿಕ ಮೌಲ್ಯಗಳು ಮರೆಯಾಗುತ್ತಿವೆ. ಬೆರಳೆಣಿಕೆಯಷ್ಟು ಶಿಕ್ಷಕರ ವರ್ತನೆಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ಉಂಟಾಗುತ್ತಿದ್ದು, ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಶಿಕ್ಷಕರ ಧ್ಯೇಯವಾಗಬೇಕು ಎಂದು ಜಿ.ಪಂ.ಉಪ ಕಾರ್ಯದರ್ಶಿ ಮೊಹ್ಮದ್‌ ಯೂಸುಫ್‌ ಹೇಳಿದರು.

Vijaya Karnataka 6 Sep 2019, 2:55 pm
ರಾಯಚೂರು: ಶಿಕ್ಷಣದಲ್ಲಿನೈತಿಕ ಮೌಲ್ಯಗಳು ಮರೆಯಾಗುತ್ತಿವೆ. ಬೆರಳೆಣಿಕೆಯಷ್ಟು ಶಿಕ್ಷಕರ ವರ್ತನೆಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಕಳಂಕ ಉಂಟಾಗುತ್ತಿದ್ದು, ಮಕ್ಕಳನ್ನು ಸುಸಂಸ್ಕೃತರನ್ನಾಗಿಸುವುದು ಶಿಕ್ಷಕರ ಧ್ಯೇಯವಾಗಬೇಕು ಎಂದು ಜಿ.ಪಂ.ಉಪ ಕಾರ್ಯದರ್ಶಿ ಮೊಹ್ಮದ್‌ ಯೂಸುಫ್‌ ಹೇಳಿದರು.
Vijaya Karnataka Web the disappearance of moral value in education
‘ಶಿಕ್ಷಣದಲ್ಲಿನೈತಿಕ ಮೌಲ್ಯ ಕಣ್ಮರೆ’


ನಗರದ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿಜಿಲ್ಲಾಡಳಿತ, ಜಿ.ಪಂ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿಡಾ.ಸರ್ವಪಲ್ಲಿರಾಧಾಕೃಷ್ಣನ್‌ ಇವರ 132ನೇ ಜನ್ಮದಿನೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಜಿಲ್ಲಾಶಿಕ್ಷಕರ ದಿನಾಚರಣೆ ಹಾಗೂ ಶಿಕ್ಷಕರ ಪ್ರಶಸ್ತಿ ಪ್ರದಾನ ಸಮಾರಂಭ ಉದ್ದೇಶಿಸಿ ಗುರುವಾರ ಮಾತನಾಡಿದರು.

ಹಿಂದಿನ ಕಾಲದಲ್ಲಿನೋಟ್‌ಬುಕ್‌, ಕೊಠಡಿಗಳಿರಲಿಲ್ಲ. ಹಳ್ಳ, ತೊರೆಗಳಲ್ಲಿಕುಳ್ಳಿರಿಸಿ ಮೌಲ್ಯಾಧಾರಿತ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಇಂದು ಎಲ್ಲಸೌಕರ್ಯಗಳಿದ್ದರೂ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಯಾಗುತ್ತಿಲ್ಲ. ಕೆಲವು ಶಿಕ್ಷಕರ ವರ್ತನೆಗಳು ಶಿಕ್ಷಣ ಕ್ಷೇತ್ರಕ್ಕೆ ಕಳಂಕವಾಗಿ ಪರಿಣಮಿಸಿವೆ. ಅಂತಹ ವರ್ತನೆಗಳನ್ನು ತೊರೆದು, ಶಿಕ್ಷಕರು ಮೌಲ್ಯಾಧಾರಿತ ಶಿಕ್ಷಣ ನೀಡಲು ಮುಂದಾಗಬೇಕು ಎಂದು ಹೇಳಿದರು.

ಜಿ.ಪಂ ಅಧ್ಯಕ್ಷೆ ಆದಿಮನೆ ವೀರಲಕ್ಷಿತ್ರ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲವೃತ್ತಿಗಳಿಗೆ ಪ್ರೇರೇಪಣೆ ಶಿಕ್ಷಕ ವೃತ್ತಿ. ಹೀಗಾಗಿ ಇದೊಂದು ಶ್ರೇಷ್ಠ ವೃತ್ತಿ ಎನಿಸಿದೆ ಎಂದರು.

ರಾಯಚೂರು ವಿವಿಯ ವಿಶೇಷ ಅಧಿಕಾರಿ ಮುಜಾಫರ್‌ ಅಸಾದಿ ಉಪನ್ಯಾಸ ನೀಡಿದರು. ಜಿಲ್ಲೆಯಲ್ಲಿಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜಿ.ಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಸಿಂ ನಾಯಕ, ತಾ.ಪಂ ಅಧ್ಯಕ್ಷೆ ಜಯಮ್ಮ ಕೆ.ನರಸಣ್ಣಾಚಾರಿ, ಡಿಡಿಪಿಐ ಬಿ.ಕೆ.ನಂದನೂರು ಸೇರಿ ಶಿಕ್ಷಕರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ