ಆ್ಯಪ್ನಗರ

ಕುಡಿವ ನೀರಿನ ಸಮಸ್ಯೆ ಪರಿಹರಿಸಲು ಆಗ್ರಹ

ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯ ನಿವಾಸಿಗಳು, ಶಾಸಕ ಡಿ.ಎಸ್‌.ಹೂಲಗೇರಿ ಅವರಿಗೆ ಇತ್ತೀಚೆಗೆ ಆಗ್ರಹಿಸಿದರು.

Vijaya Karnataka 15 Sep 2018, 5:00 am
ಹಟ್ಟಿಚಿನ್ನದಗಣಿ : ಪಟ್ಟಣದ ನಾನಾ ವಾರ್ಡ್‌ಗಳಲ್ಲಿ ಕುಡಿವ ನೀರಿನ ಸಮಸ್ಯೆ ಪರಿಹರಿಸಬೇಕೆಂದು ಸ್ಥಳೀಯ ನಿವಾಸಿಗಳು, ಶಾಸಕ ಡಿ.ಎಸ್‌.ಹೂಲಗೇರಿ ಅವರಿಗೆ ಇತ್ತೀಚೆಗೆ ಆಗ್ರಹಿಸಿದರು.
Vijaya Karnataka Web RAC-RCH14HGM P3


ಚಿನ್ನದಗಣಿ ಕಂಪನಿ ಅಥಿತಿ ಗೃಹಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಭೇಟಿಯಾದ ಸ್ಥಳೀಯರು, ಕುಡಿವ ನೀರು ಪೂರೈಕೆಗೆ ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ ಎಂದು ದೂರಿದರು. ಜನರ ಅಳಲಿಗೆ ಸ್ಪಂದಿಸಿದ ಶಾಸಕರು, ತಕ್ಷಣ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿದರು. ಕೂಡಲೇ ನೀರು ಪೂರೈಕೆಗೆ ಕ್ರಮಕೈಗೊಳ್ಳಬೇಕೆಂದು ತಾಕೀತುಮಾಡಿದರು. ಕೃಷ್ಣಾ ನದಿ ದಂಡೆಯ ಜಾಕ್ವೆಲ್‌ನಲ್ಲಿ ಕಂಡುಬಂದ ತಾಂತ್ರಿಕ ದೋಷ ನಿವಾರಿಸಿ, ಎರಡ್ಮೂರು ದಿನಗಳಲ್ಲಿ ನೀರು ಪೂರೈಕೆಗೆ ಕ್ರಮಕೈಗೊಳ್ಳುವುದಾಗಿ ಸ್ಥಳೀಯ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿಯೂ ಆದ ತಹಸೀಲ್ದಾರ್‌ ಚಾಮರಾಜ್‌ ಪಾಟೀಲ್‌ ಭರವಸೆ ನೀಡಿದರು.

ಬರುವ ದಿನಗಳಲ್ಲಿ ಪದೇ ಪದೆ ಸಮಸ್ಯೆ ಉಂಟಾಗಬಾರದೆಂಬ ಉದ್ದೇಶದಿಂದ ಕೃಷ್ಣಾ ನದಿ ದಂಡೆಯಲ್ಲಿರುವ ವಾಟರ್‌ ಫಿಲ್ಟರ್‌ ಬೆಡ್‌ ಜಾಕ್ವೇಲ್‌ನ ಸಂಪೂರ್ಣ ನಿರ್ವಹಣೆಯನ್ನು ಹಟ್ಟಿಚಿನ್ನದಗಣಿ ಕಂಪನಿ ವಹಿಸಿಕೊಳ್ಳಬೇಕೆಂಬ ಉದ್ದೇಶದಿಂದ ಕಂಪನಿಯ ಮುಖ್ಯ ಆಡಳಿತಾಧಿಕಾರಿ ಡಾ.ಜಗದೀಶ ನಾಯ್ಕ್‌ ಅವರನ್ನು ಕರೆಯಿಸಿ ಶಾಸಕರು ಮಾತುಕತೆ ನಡೆಸಿದರು.

ಹಟ್ಟಿ ಪಟ್ಟಣ,ಚಿನ್ನದಗಣಿ ಕಂಪನಿ ಸ್ಥಾಪನೆಯಿಂದ ಸ್ಥಳಾಂತರಗೊಂಡ ಪಟ್ಟಣವಾಗಿದೆ. ಮೂಲ ಸೌಲಭ್ಯಗಳನ್ನು ಗಣಿ ಕಂಪನಿಯೇ ಒದಗಿಸಬೇಕು. ಗಣಿ ಕಂಪನಿ ಆಗೊಮ್ಮೆ ಈಗೊಮ್ಮೆ ಒಂದಿಷ್ಟು ದೇಣಿಗೆ ನೀಡಿ ಕೈತೊಳೆದುಕೊಳ್ಳುವುದು ಸರಿಯಲ್ಲ. ಕನಿಷ್ಠ ನೀರಿನ ನಿರ್ವಹಣೆಯಾದರೂ ಮಾಡಿಕೊಡಬೇಕು. ಹಟ್ಟಿಗಣಿ ಕಂಪನಿಯ ನೀರಿನ ಪ್ಲಾಂಟ್‌ ಸಹ ಕೃಷ್ಣಾ ನದಿ ದಂಡೆಯಲ್ಲಿದೆ. ಹಟ್ಟಿ ಪಟ್ಟಣದ ನೀರಿನ ಪ್ಲಾಂಟ್‌ ಸಹ ಅದರ ಪಕ್ಕದಲ್ಲಿದೆ. ಅಲ್ಲಿ ಏನಾದರೂ ಸಮಸ್ಯೆ ಉಂಟಾದರೆ ಗಣಿ ಕಂಪನಿ ನಿರ್ವಹಣೆಗೆ ಮುಂದಾಗಬೇಕು. ಇದಕ್ಕೆ ಸಂಬಂಧಿಸಿದಂತೆ ಕಂಪನಿ ವ್ಯವಸ್ಥಾಪಕ ನಿರ್ದೇಶಕರ ಜತೆ ಮಾತನಾಡುವೆ ಎಂದು ತಿಳಿಸಿದರು.

ಸ್ಥಳೀಯ ಅಧಿಕಾರಿಗಳಾದ ತಾವು, ವಾಸ್ತವ ಸ್ಥಿತಿ ಅರಿತು ನೀರು ಪೂರೈಕೆ ಸುಗಮಗೊಳಿಸಲು ಮುಂದಾಗಬೇಕು. ಇಲ್ಲದಿದ್ದರೆ ಪಟ್ಟಣದ ಜನತೆ, ಗಣಿ ಕಂಪನಿ ವಿರುದ್ಧ ಹೋರಾಟಕ್ಕೆ ಇಳಿಯುವ ಸಂಭವವಿದೆ. ಸಮಸ್ಯೆ ಉದ್ಭವಿಸದಂತೆ ನೀರು ಪೂರೈಕೆಗೆ ಸಹಕರಿಸಬೇಕು ಎಂದು ಶಾಸಕರು ಎಚ್ಚರಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ