ದೇವದುರ್ಗ : ಬಿರುಬಿಸಿಲ ನಾಡಲ್ಲಿ ಶುಕ್ರವಾರ ಮಲೆನಾಡು ಅನುಭವ ಕಂಡುಬಂತು. ಶುಕ್ರವಾರ ಬೆಳಗ್ಗೆ 6ರಿಂದ 8ರವರೆಗೆ ದಟ್ಟವಾದ ಮಂಜು ಆವರಿಸಿತ್ತು. ಸೂರ್ಯೋದಯದ ವೈಭವ ಮರೆಯಾಯಿತು. ಬೆಳಗಿನ ಏಳರವರೆಗೂ ಕತ್ತಲು ಆವರಿಸಿತ್ತು. ವಾಹನಗಳು ದೀಪ ಹಚ್ಚಿಕೊಂಡೇ ಸಂಚರಿಸಿದವು. ಬೀದಿ ದೀಪ ಸೇರಿ ಹೋಟೆಲ್, ಅಂಗಡಿ ಮುಂಗಟ್ಟುಗಳಲ್ಲಿ 8ರ ವರೆಗೆ ವಿದ್ಯುತ್ ದೀಪ ಉರಿದವು. ತೀವ್ರ ಮಳೆ ಕೊರತೆ ಮಧ್ಯೆ ಶುಕ್ರವಾರ ಬೆಳಗ್ಗೆ ಮುಸುಕಿದ ಇಬ್ಬನಿ, ಇಲ್ಲಿನ ಜನರಿಗೆ ಮಲೆನಾಡು ಸೊಬಗಿನ ಅನುಭವವಾಯಿತು.
ಬಿಸಿಲ ನಾಡಲ್ಲಿ ಮಲೆನಾಡು ಸೊಬಗು
ಬಿರುಬಿಸಿಲ ನಾಡಲ್ಲಿ ಶುಕ್ರವಾರ ಮಲೆನಾಡು ಅನುಭವ ಕಂಡುಬಂತು. ಶುಕ್ರವಾರ ಬೆಳಗ್ಗೆ 6ರಿಂದ 8ರವರೆಗೆ ದಟ್ಟವಾದ ಮಂಜು ಆವರಿಸಿತ್ತು. ಸೂರ್ಯೋದಯದ ವೈಭವ ಮರೆಯಾಯಿತು.
Vijaya Karnataka 20 Oct 2018, 5:00 am