ಆ್ಯಪ್ನಗರ

ಡಿ.21 ರಂದು ತಂಬಿಹಳ್ಳಿ ಶ್ರೀಗಳ ಭವ್ಯ ಮೆರವಣಿಗೆ

ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ರಾಮದೇವರ ಹಾಗೂ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಡಿ.20 ರಿಂದ 22 ವರೆಗೆ ಹನುಮವ್ರತ ಹಮ್ಮಿಕೊಳ್ಳಲಾಗಿದೆ.

Vijaya Karnataka 18 Dec 2018, 5:24 pm
ರಾಯಚೂರು : ತಾಲೂಕಿನ ಕಾಡ್ಲೂರು ಗ್ರಾಮದ ಕೃಷ್ಣಾ ನದಿ ತೀರದ ವನವಾಸಿ ರಾಮದೇವರ ಹಾಗೂ ಉಪೇಂದ್ರ ತೀರ್ಥ ಕರಾರ್ಚಿತ ಪ್ರಾಣದೇವರ ದೇವಸ್ಥಾನದಲ್ಲಿ ಡಿ.20 ರಿಂದ 22 ವರೆಗೆ ಹನುಮವ್ರತ ಹಮ್ಮಿಕೊಳ್ಳಲಾಗಿದೆ.
Vijaya Karnataka Web the grand march of thambihalli sree on 21st december
ಡಿ.21 ರಂದು ತಂಬಿಹಳ್ಳಿ ಶ್ರೀಗಳ ಭವ್ಯ ಮೆರವಣಿಗೆ


ಡಿ.20 ರಂದು ಹನುಮದ ವ್ರತದ ನಿಮಿತ್ತ ರಾಮದೇವರ ಮತ್ತು ಪ್ರಾಣದೇವರಿಗೆ ವಿಶೇಷ ಪೂಜೆ, ಹನುಮದವ್ರತ ಕಥೆ, ಅಲಂಕಾರ, ನೈವೇದ್ಯ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಡಿ.21 ರಂದು ಬೆಳಗ್ಗೆ 9 ಗಂಟೆಗೆ ತಂಬಿಹಳ್ಳಿ ಮಾಧವತೀರ್ಥ ಮಠದ ಪೀಠಾಧಿಪತಿ ಶ್ರೀವಿದ್ಯಾಸಿಂಧು ಮಾಧವತೀರ್ಥರ ಭವ್ಯ ಮೆರವಣಿಗೆ, ಪಾದ ಪೂಜೆ, ಶ್ರೀಪಾದಂಗಳವರಿಂದ ನದಿಯಲ್ಲಿ ದಂಡಕಾಷ್ಟ ಸ್ನಾನ, ರಾಮ ದೇವರಿಗೆ, ಪ್ರಾಣದೇವರಿಗೆ ಮಧು ಅಭಿಷೇಕ, ಶ್ರೀಗಳಿಂದ ಸಂಸ್ಥಾನ ಪೂಜೆ, ಆಶೀರ್ವಚನ ಜರುಗಲಿದ್ದು. ರಾತ್ರಿ ನದಿಯಲ್ಲಿ ದೀಪೋತ್ಸವ, ತೆಪೊ್ಪೕತ್ಸವ ನಡೆಯಲಿದೆ.

ಡಿ.22 ರಂದು ಹುಣ್ಣಿಮೆ ನಿಮಿತ್ತ ರಾಮದೇವರಿಗೆ ಹಾಗೂ ಪ್ರಾಣದೇವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ಕಾಡ್ಲೂರು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ