ಆ್ಯಪ್ನಗರ

ಛಾಯಾಗ್ರಾಹಕರ ಕಡೆಗಣನೆ ಸರಿಯಲ್ಲ

ಎಲ್ಲರನ್ನು ನಗಿಸುವ ಫೋಟೊಗ್ರಾಫರ್‌ಗಳ ಬದುಕು ಹಸನಗೊಳಿಸುವ ಯಾವ ಕಾರ್ಯವನ್ನೂ ಸರಕಾರ ಮಾಡಿಲ್ಲ. ಹೀಗಾಗಿ ಎಲ್ಲರೂ ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕೆಪಿಎ ರಾಜ್ಯಾಧ್ಯಕ್ಷ ಶಶಿಧರ ಬಿ.ಎ. ಹೇಳಿದರು.

Vijaya Karnataka 21 Sep 2018, 5:00 am
ಸಿಂಧನೂರು : ಎಲ್ಲರನ್ನು ನಗಿಸುವ ಫೋಟೊಗ್ರಾಫರ್‌ಗಳ ಬದುಕು ಹಸನಗೊಳಿಸುವ ಯಾವ ಕಾರ್ಯವನ್ನೂ ಸರಕಾರ ಮಾಡಿಲ್ಲ. ಹೀಗಾಗಿ ಎಲ್ಲರೂ ಸಂಘಟಿತ ಹೋರಾಟಕ್ಕೆ ಸಿದ್ಧರಾಗಬೇಕು ಎಂದು ಕೆಪಿಎ ರಾಜ್ಯಾಧ್ಯಕ್ಷ ಶಶಿಧರ ಬಿ.ಎ. ಹೇಳಿದರು.
Vijaya Karnataka Web RAC-RCH20SND5


ನಗರದ ಖಾಸಗಿ ಸಭಾಂಗಣದಲ್ಲಿ ಸಿಂಧನೂರು ತಾಲೂಕು ಫೋಟೋಗ್ರಾಫರ್ಸ್‌ ಮತ್ತು ವಿಡಿಯೊಗ್ರಾಫರ್ಸ್‌ ಅಸೋಷಿಯೇಷನ್‌ನಿಂದ ಗುರುವಾರ ಹಮ್ಮಿಕೊಂಡಿದ್ದ 179ನೇ ವಿಶ್ವ ಛಾಯಾಗ್ರಹಣ ದಿನಾಚರಣೆ, 16ನೇ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚೆಗೆ ಮೊಬೈಲ್‌ ಫೋಟೊಗ್ರಫಿಯಿಂದ ಸಮಸ್ಯೆಯಾಗುವ ಆತಂಕವಿದೆ. ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲರೂ ತಾಂತ್ರಿಕ ಜ್ಞಾನ ಪಡೆಯಬೇಕು. ಫೋಟೊಗ್ರಾಫರ್‌ಗಳು ಕಷ್ಟದಲ್ಲಿದ್ದಾಗ ನೆರವು ನೀಡಲು ನಮ್ಮ ಸಂಘ ಸಿದ್ಧವಿದೆ ಎಂದರು.

ಜೆಡಿಎಸ್‌ ವಕ್ತಾರ ಬಸವರಾಜ ನಾಡಗೌಡ, ಸಮಾರಂಭ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೆಪಿಎ ಉಪಾಧ್ಯಕ್ಷ ಎಚ್‌.ನಾಗೇಶ, ತಾಲೂಕಾಧ್ಯಕ್ಷ ಜಿ.ಕೆ.ವಿಶ್ವನಾಥ ಚೌಧರಿ, ಕೆಪಿಎ ಉತ್ತರ ವಲಯ ಸಮಿತಿ ಕಾರ್ಯದರ್ಶಿ ಕೆ.ವೆಂಕಟೇಶ, ಬಾಬುಜಿ ಎಸ್‌.ಮೈಸೂರು, ಶ್ರೀನಿವಾಸ ಇನಾಂದಾರ್‌, ಬಾಬುಸಾ ಕಾಟವಾ, ಕೆ.ಸಂಪತ್‌ ಕುಮಾರ, ಉಮಾಶಂಕರ, ಸಿ.ಎಸ್‌.ದೇವರಮನಿ, ರಾಜು ಇಲ್ಲೂರು, ಗಿರೀಶ ಕದಂ, ಲಕ್ಷ್ಮಿನಾರಾಯಣಭಟ್‌ ಶಿರಸಿ, ರವಿನಾರಾಯಣ ಭಟ್‌, ದೊ.ರಾ.ಸುರೇಶ, ವಿಠ್ಠಲಭಟ್‌, ಅಕ್ಬರ್‌ಸಾಬ್‌, ಶ್ರೀನಿವಾಸ ಚೌದ್ರಿ, ಉದಯಕುಮಾರ ಮಸ್ಕಿ, ಸಂಗಮೇಶ ಹರವಿ, ಆನಂದ ಬಡಿಗೇರ, ಶ್ರೀನಿವಾಸ ಗಂಗಾವತಿ, ಪ್ರಹ್ಲಾದ್‌ ಕೆಂಗಲ್‌, ವೀರಾರೆಡ್ಡಿ ಜವಳಗೇರಾ ಸೇರಿ ಹಲವರಿದ್ದರು. ಇದೇ ವೇಳೆ ವಿವಿಧ ಕಂಪನಿಗಳ ಕ್ಯಾಮೆರಾ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ