ಆ್ಯಪ್ನಗರ

ಕೆರೆ ಬಲು ಸುಂದರ; ಕುಡಿಯಲು ನೀರು ಮಾತ್ರ ಸರಿಯಿಲ್ಲಾ !

ಸಮೀಪದ ಗೊರೇಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳಕ್ಯಾಂಪಿಗೆ ನೀರು ಪೂರೈಸುವ ಸಾರ್ವಜನಿಕ ಕೆರೆಯಲ್ಲಿ ಫ್ಲೋರೈಡ್‌ ಇರುವುದು ಬೆಳಕಿಗೆ ಬಂದಿದ್ದು, ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.

Vijaya Karnataka 31 Jul 2018, 5:00 am
ಜಾಲಿಹಾಳ : ಸಮೀಪದ ಗೊರೇಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಂಚಿನಾಳಕ್ಯಾಂಪಿಗೆ ನೀರು ಪೂರೈಸುವ ಸಾರ್ವಜನಿಕ ಕೆರೆಯಲ್ಲಿ ಫ್ಲೋರೈಡ್‌ ಇರುವುದು ಬೆಳಕಿಗೆ ಬಂದಿದ್ದು, ಆದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ.
Vijaya Karnataka Web RAC-RCH29JALIHAL01


ಆರೋಗ್ಯ ಇಲಾಖೆಯಿಂದ ಕೆರೆ ಪರಿಶೀಲಿಸಿದ ವೇಳೆ ಫ್ಲೋರೈಡ್‌ ಇರುವುದು ಬೆಳಕಿಗೆ ಬಂದಿದೆ. ಕೆರೆ ನೀರು ಯೋಗ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಗ್ರಾಮದ ಕೆಲವರು ನೀರು ಕುಡಿಯಲು ಆತಂಕ ಪಡುವಂತಾಗಿದೆ. ಜು.12.ರಂದು ಗ್ರಾಮ ಪಂಚಾಯಿತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಮದ ಕೆರೆ ನೀರಿನ ಬಗ್ಗೆ ಚರ್ಚೆ ನಡೆದಿತ್ತು. ಸಭೆಯಲ್ಲಿ ಆರೋಗ್ಯ ಸಹಾಯಕಿ ಮಾತನಾಡಿ, ಹಿರಿಯ ವೈದ್ಯಾಧಿಕಾರಿಗಳು ಗ್ರಾಮದ ಕೆರೆ ನೀರು ಪರಿಶೀಲಿಸಬೇಕು ಎಂದು ತಿಳಿಸಿದ್ದು, ನೀರು ಪರಿಶೀಲಿಸಿದರೆ ಫ್ಲೋರೈಡ್‌ ಅಂಶ ಇರುವುದು ಬೆಳಕಿಗೆ ಬಂದಿದೆ. ಗ್ರಾಮಸ್ಥರು ನೀರು ಕುಡಿಯದಂತೆ ಜಾಗೃತಿವಹಿಸಬೇಕು ಎಂದು ತಿಳಿಸಿದ್ದಾರೆ. ಆದರೆ ಜನರಿಗೆ ಮಾಹಿತಿ ನೀಡದೆ ಫ್ಲೋರೈಡ್‌ ನೀರನ್ನು ಪೂರೈಸಲಾಗುತ್ತಿದೆ. ಜನರಿಗೆ ಕೀಲು ನೋವು ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಗ್ರಾಮಸ್ಥರಿಗೆ ಬೇರೆ ನೀರು ಪೂರೈಸಬೇಕು ಎಂದು ಹೇಳಿದರು.

ಆದರೆ, ಕೆಲ ಗ್ರಾ.ಪಂ.ಸದಸ್ಯರು, ಶುದ್ಧೀಕರಣ ಘಟಕದ ಕೆರೆ ಪಕ್ಕದಲ್ಲಿ ನಿರ್ಮಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಕೆರೆಯಿಂದ ಹಾಕಿದ ಪೈಪ್‌ಗಳು ನಾನಾ ಭಾಗದಲ್ಲಿ ದುರಸ್ತಿಯಾದ ಕಾರಣ ಶುದ್ಧ ನೀರು ನೀರು ಹಾಳಾಗುತ್ತಿದೆ. ಅದೆ ನೀರನ್ನೇ ಗ್ರಾಮದ ಮೇಲೆತ್ತರದ ಟ್ಯಾಂಕಿಗೆ ಏರಿಸಿ ಬಿಡುವುದರಿಂದ ನೀರಿನ ಮೂಲ ಕೆಡುತ್ತಿದೆ, ಮೇಲಧಿಕಾರಿಗಳಿಗೆ ತಿಳಿಸಿ ಹೊಸ ಪೈಪ್‌ಲೈನ್‌ ಹಾಕಿದರೆ ಸರಿಯಾಗುತ್ತೆ ಎಂದು ತೀರ್ಮಾನಿಸಲಾಗಿತ್ತು. ಸಭೆ ನಡೆದು 15ದಿನ ಕಳೆದರೂ ಯಾವುದೇ ಕ್ರಮಕೈಗೊಳ್ಳದೇ ಎಂದಿನಂತೆ ಫ್ಲೋರೈಡ್‌ ನೀರನ್ನೇ ಪೂರೈಸಲಾಗುತ್ತಿದೆ. ಈ ಅಶುದ್ಧ ನೀರು ಕುಡಿದ ಕೆಲ ಗ್ರಾಮಸ್ಥರು, ಕೀಲು ನೋವು ಸೇರಿದಂತೆ ನಾನಾ ರೋಗದಿಂದ ಬಳಲುವಂತಾಗಿದೆ. ಸಂಬಂಧಪಟ್ಟ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗಮನಹರಿಸಿ, ಜಲನಿರ್ಮಲ ಸಮಿತಿ ಸಭೆ ಕರೆದು ಗ್ರಾಮಕ್ಕೆ ಶುದ್ಧ ನೀರು ಪೂರೈಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

----
ಪ್ಲೋರೈಡ್‌ಯುಕ್ತ ಕೆರೆಯಿಂದ ಹಂಚಿನಾಳ ಕ್ಯಾಂಪ್‌ ಮತ್ತು ಶಾಂತಿನಗರ ಗ್ರಾಮದ 3,800 ಜನರು ಉಪಯೋಗಿಸುತ್ತಾರೆ. ಈ ಪ್ರದೇಶದಲ್ಲಿ ಕೊಳವೆಬಾವಿ ಹಾಕಿಸಿದರೆ ಉಪ್ಪು, ಸವಳು ನೀರು ಬಿಳುತ್ತದೆ. ಆದ್ದರಿಂದ ಎರಡು ಗ್ರಾಮದ ಜನರು ಈ ಕೆರೆ ನೀರನ್ನು ಕುಡಿಯಲು ಉಪಯೋಗಿಸುತ್ತಾರೆ. ಸುತ್ತಲು ನಾಲ್ಕು ಕೆರೆಗಳಿದ್ದರು ಕೆವಲ ಜಾನುವಾರುಗಳಿಗೆ ಕುಡಿವ ನೀರಿಗೆ ಬಳಕೆ ಮಾಡಿಕೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ