ಆ್ಯಪ್ನಗರ

ಪ್ರತಿಮೆಗೆ ಅವಮಾನ: ಒಬ್ಬನ ಬಂಧನ

ಇಲ್ಲಿನ ಅಂಬೇಡ್ಕರ್ ವತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ತಲೆ ಮೇಲೆ ಮಾವಿನ ಹಣ್ಣಿನ ಸಿಪ್ಪೆ ಇರಿಸಿ, ಅವಮಾನಿಸಿದ್ದ ಎನ್ನಲಾದ ಉತ್ತರ ಪ್ರದೇಶ ಮೂಲದ ಯುವಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ವಿಕ ಸುದ್ದಿಲೋಕ 4 Apr 2016, 7:29 am
ರಾಯಚೂರು; ಇಲ್ಲಿನ ಅಂಬೇಡ್ಕರ್ ವತ್ತದಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ತಲೆ ಮೇಲೆ ಮಾವಿನ ಹಣ್ಣಿನ ಸಿಪ್ಪೆ ಇರಿಸಿ, ಅವಮಾನಿಸಿದ್ದ ಎನ್ನಲಾದ ಉತ್ತರ ಪ್ರದೇಶ ಮೂಲದ ಯುವಕನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
Vijaya Karnataka Web the statue an insult one arrested
ಪ್ರತಿಮೆಗೆ ಅವಮಾನ: ಒಬ್ಬನ ಬಂಧನ


ಸುರೇಂದ್ರ ಪ್ರಜಾಪತಿ (26) ಬಂಧಿತ. ಈ ಯುವಕ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂಬುದನ್ನು ತಜ್ಞ ವೈದ್ಯರು ಖಚಿತಪಡಿಸಿದ್ದಾರೆ. ಕಳೆದ ಎರಡು ತಿಂಗಳಿಂದ ನಗರದಲ್ಲಿ ಅಲೆದಾಡುತ್ತಿದ್ದ ಈ ಯುವಕ ಶನಿವಾರ ಬೆಳಗ್ಗೆ 10ರ ಸುಮಾರಿಗೆ, ಅಂಬೇಡ್ಕರ್ ಅವರ ಪ್ರತಿಮೆ ಮೇಲೆ ಮಾವಿನ ಹಣ್ಣಿನ ಸಿಪ್ಪೆ ಇರಿಸಿದ್ದ. ಈ ದೃಶ್ಯ, ವೃತ್ತದಲ್ಲಿರುವ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ಎಸ್ಪಿ ಡಾ.ಚೇತನ್‌ಸಿಂಗ್ ರಾಥೋರ್ ತಿಳಿಸಿದ್ದಾರೆ. ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ