ಆ್ಯಪ್ನಗರ

ರಾಷ್ಟ್ರೀಯ ವಿಪತ್ತು ಘೋಷಿಸಲು ಆಗ್ರಹ

ರೈತರಿಗೆ ಮುನ್ಸೂಚನೆ ನೀಡದೇ ಕೃಷ್ಣಾನದಿಗೆ ಲಕ್ಷಗಟ್ಟಲೆ ಕ್ಯೂಸೆಕ್‌ ನೀರನ್ನು ಹರಿಬಿಟ್ಟಿದ್ದರಿಂದ ನದಿಪಾತ್ರದ ರೈತರು ನೆರೆಗೆ ಜಾನುವಾರು, ಮನೆ ಮಠ ಕಳೆದುಕೊಂಡಿದ್ದು, ಕೂಡಲೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಪದಾಧಿಕಾರಿಗಳು ಡಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

Vijaya Karnataka 27 Aug 2019, 5:00 am
ರಾಯಚೂರು: ರೈತರಿಗೆ ಮುನ್ಸೂಚನೆ ನೀಡದೇ ಕೃಷ್ಣಾನದಿಗೆ ಲಕ್ಷಗಟ್ಟಲೆ ಕ್ಯೂಸೆಕ್‌ ನೀರನ್ನು ಹರಿಬಿಟ್ಟಿದ್ದರಿಂದ ನದಿಪಾತ್ರದ ರೈತರು ನೆರೆಗೆ ಜಾನುವಾರು, ಮನೆ ಮಠ ಕಳೆದುಕೊಂಡಿದ್ದು, ಕೂಡಲೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಪದಾಧಿಕಾರಿಗಳು ಡಿಸಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.
Vijaya Karnataka Web the urge to declare it a national disaster
ರಾಷ್ಟ್ರೀಯ ವಿಪತ್ತು ಘೋಷಿಸಲು ಆಗ್ರಹ


ನಂತರ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ರವಾನಿಸಿದ ರೈತರು ಮುನ್ಸೂಚನೆ ನೀಡದೇ ಲಕ್ಷಾಂತರ ಕ್ಯೂಸೆಕ್‌ ನೀರು ಹರಿಬಿಟ್ಟಿದ್ದರಿಂದ ರೈತರ ಬೆಳೆ, ಆಸ್ತಿಪಾಸ್ತಿ ನಷ್ಟವಾಗಿದೆ. ಹಳ್ಳಿಗರ ಬದುಕು ಬೀದಿಗೆ ಬಿದ್ದಿದೆ. ಪ್ರಾಣಹಾನಿಯೂ ಸಂಭವಿಸಿದ್ದು, ಮನೆ ಮಠ ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿರಾಜ್ಯ ಸರಕಾರ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಇಲ್ಲಿನ ಚಿತ್ರಣವನ್ನು ಕೇಂದ್ರದ ಮುಂದೆ ಕಟ್ಟಿಕೊಡಬೇಕು. ಕೇಂದ್ರದ ಮೇಲೆ ಒತ್ತಡಹೇರುವ ಮೂಲಕ ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವಂತೆ ಮಾಡಬೇಕು. ರಾಜ್ಯ ಸರಕಾರ ತನ್ನ ಪಾಲನ್ನು ಸೇರಿಸಿ ಹೆಚ್ಚಿನ ಅನುದಾನ ಕೊಡಿಸಲು ಮುಂದಾಗಬೇಕು. ಪೂರ್ವಾಪರ ಮಾಹಿತಿಯಿಲ್ಲದೇ ಭಾರಿ ಪ್ರಮಾಣದ ನೀರನ್ನು ನದಿಗೆ ಹರಿಬಿಟ್ಟಿರುವುದು ಸರಕಾರದ ನಿರ್ಲಕ್ಷತ್ರ್ಯಧೋರಣೆಯಾಗಿದೆ. ಇದರಿಂದ ಸಂಭವಿಸಿರುವ ಸಾವುನೋವುಗಳಿಗೆ ಸರಕಾರವೇ ನೇರ ಹೊಣೆ ಹೊರಬೇಕು ಎಂದು ಆಗ್ರಹಿಸಿದರು.

ಜಿಲ್ಲಾಘಟಕದ ಪದಾಧಿಕಾರಿಗಳಾದ ಮಲ್ಲಿಕಾರ್ಜುನರೆಡ್ಡಿ, ಸಿ.ಹೆಚ್‌.ರವಿ, ಶರಣಪ್ಪ ಮರಳಿ, ಬಸವರಾಜ, ರಾಮಯ್ಯ, ತಿಮ್ಮಣ್ಣ, ಕೃಷ್ಣ ಸೇರಿ ಅನೇಕರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ