ಆ್ಯಪ್ನಗರ

ದಿ ವಿಲನ್‌ ಚಿತ್ರ ಬಿಡುಗಡೆ: ಟಿಕೆಟ್‌ ಸಿಗದೆ ನೂಕು ನುಗ್ಗಲು, ಲಾಠಿ ಪ್ರಹಾರ

ಭಾರಿ ಕ್ರೇಜ್‌ ಮೂಡಿಸಿರುವ ಶಿವರಾಜ್‌, ಸುದೀಪ್‌ ಅಭಿಯನಯದ ಚಿತ್ರ

Vijaya Karnataka Web 18 Oct 2018, 6:31 pm
ರಾಯಚೂರು: : ಭಾರಿ ನಿರೀಕ್ಷೆ ಮೂಡಿಸಿದ್ದ, ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್‌, ಅಭಿನಯ ಚಕ್ರವರ್ತಿ ಸುದೀಪ್‌ ನಟಿಸಿರುವ ದಿ ವಿಲನ್‌ ಚಿತ್ರ ಗುರುವಾರ ರಾಜ್ಯದಾದ್ಯಂತ ಬಿಡುಗಡೆಯಾಗಿದೆ.
Vijaya Karnataka Web ವಿಲನ್‌ ಪೋಸ್ಟರ್‌
ವಿಲನ್‌ ಪೋಸ್ಟರ್‌


ರಾಯಚೂರಿನಲ್ಲಿ ದಿ ವಿಲನ್‌ ಸಿನಿಮಾ ಟಿಕೆಟ್‌ಗಾಗಿ ನೂಕು ನುಗ್ಗಲು ಉಂಟಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು.

ಸಿಂಧನೂರು ನಗರದ ಸಂಗಮ ಚಿತ್ರಮಂದಿರದಲ್ಲಿ ದಿ ವಿಲನ್‌ ಚಿತ್ರ ಪ್ರದರ್ಶನಗೊಂಡಿತು.

ಇದನ್ನು ವೀಕ್ಷಿಸಲು ಬಂದಿದ್ದ ಹಲವರಿಗೆ ಟಿಕೆಟ್‌ ಸಿಗದ ಕಾರಣ ಆಕ್ರೋಶಗೊಂಡು ಕಲ್ಲು ತೂರಾಟ ನಡೆಸಿದರು. ಈ ಸಂದರ್ಭದಲ್ಲಿ ಭಾರಿ ನೂಕು ನುಗ್ಗಲು ಕೂಡ ಉಂಟಾಯಿತು.

ಪರಿಸ್ಥಿತಿ ಕೈ ಮೀರಿದಾಗ ಪೊಲೀಸರು ಮಧ್ಯ ಪ್ರವೇಶಿಸಿ ಲಾಠಿ ಪ್ರಹಾರ ನಡೆಸಿದರು, ಪರಿಸ್ಥಿತಿ ತಿಳಿಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ