ಆ್ಯಪ್ನಗರ

ನಾನಾ ಕಡೆ ಕಳವು: ಚಿನ್ನಾಭರಣ ಜಪ್ತಿ

ನಾನಾ ಕಡೆ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಆರು ಪ್ರಕರಣಗಳಲ್ಲಿ ಕಳವಾದ 140ಗ್ರಾಂ ಚಿನ್ನಾಭರಣ,750ಗ್ರಾಂ ಬೆಳ್ಳಿ ಸಾಮಗ್ರಿ ಸೇರಿ 5ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಬುಧವಾರ ಜಪ್ತಿ ಮಾಡಿಕೊಳ್ಳಲಾಗಿದೆ.

Vijaya Karnataka 23 Aug 2019, 2:42 pm
ರಾಯಚೂರು : ನಾನಾ ಕಡೆ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ ಆರು ಪ್ರಕರಣಗಳಲ್ಲಿ ಕಳವಾದ 140ಗ್ರಾಂ ಚಿನ್ನಾಭರಣ,750ಗ್ರಾಂ ಬೆಳ್ಳಿ ಸಾಮಗ್ರಿ ಸೇರಿ 5ಲಕ್ಷ ರೂ. ಬೆಲೆಬಾಳುವ ವಸ್ತುಗಳನ್ನು ಬುಧವಾರ ಜಪ್ತಿ ಮಾಡಿಕೊಳ್ಳಲಾಗಿದೆ.
Vijaya Karnataka Web theft across the country jewelery foreclosure
ನಾನಾ ಕಡೆ ಕಳವು: ಚಿನ್ನಾಭರಣ ಜಪ್ತಿ


ರಾಯಚೂರು ನಗರ ಸೇರಿದಂತೆ ವಿವಿಧೆಡೆ ಸ್ವತ್ತಿನ ಅಪರಾಧ ಪ್ರಕರಣಗಳು ವರದಿಯಾಗಿದ್ದವು.ಈ ಸಂಬಂಧ ಆರೋಪಿಗಳನ್ನು ಪತ್ತೆ ಮಾಡಲು ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಎಎಸ್‌ಪಿ ಹರಿಬಾಬು, ಪೊಲೀಸ್‌ ಉಪಾಧೀಕ್ಷ ಕ ಶೀಲವಂತ ಎಸ್‌.ಹೆಚ್‌ ಮಾರ್ಗದರ್ಶನದಲ್ಲಿ ಪಶ್ಚಿಮ ಪೊಲೀಸ್‌ ವೃತ್ತ ನಿರೀಕ್ಷ ಕ ಉಮೇಶ್‌ ಎಂ., ಮಾರ್ಕೆಟ್‌ಯಾರ್ಡ್‌ ಠಾಣೆ ಮಲ್ಲಿಕಾರ್ಜುನ ಇಕ್ಕಳಕಿ, ಪಶ್ಚಿಮ ಠಾಣೆ ಪಿಎಸ್‌ಐ ದಾದಾವಲಿ ಸೇರಿ ಸಿಬ್ಬಂದಿ ಒಳಗೊಂಡ ತಂಡ ರಚಿಸಲಾಗಿತ್ತು.

ಆರೋಪಿಯ ಮಾಹಿತಿ ದೊರೆತ ನಂತರ ಆರೋಪಿ ಸೈಯದ್‌ ಬಾಬರ್‌ ಅಲಿಯಾಸ್‌ ಸಿಕಂದರ್‌ನನ್ನು ದಸ್ತಗಿರಿ ಮಾಡಿ ಬೆಲೆಬಾಳುವ ವಸ್ತು ವಶಕ್ಕೆ ಪಡೆಯಲಾಗಿದೆ. ಎಸ್ಪಿ ಪೊಲೀಸ್‌ ತಂಡದ ಕಾರ್ಯ ವೈಖರಿ ಶ್ಲಾಘಿಸಿ, ಅಧಿಕಾರಿ, ಸಿಬ್ಬಂದಿ ವರ್ಗದವರಿಗೆ ಸೂಕ್ತ ಬಹುಮಾನ ಘೋಷಿಸಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ