ಕವಿತಾಳ: ಪಟ್ಟಣದ ಡಿ.ದೇವರಾಜು ಅರಸು ಹಿಂದುಳಿದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿಮೂಲ ಸೌಲಭ್ಯಗಳಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಅನುದಾನದ ಕೊರತೆಯೋ, ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ದಾಸ್ತಾನು ಕೊಠಡಿ ಸಮಸ್ಯೆಯೋ? ಒಟ್ಟಾರೆ ಆಹಾರ ಧಾನ್ಯವನ್ನು ಅಂದಂದೇ ತಂದು ಅಡುಗೆ ಮಾಡುತ್ತಿರುವ ಸ್ಥಿತಿ ಇಲ್ಲಿದೆ. ಈ ಸಮಸ್ಯೆಯಿಂದಾಗಿ ಕಳೆದ ಮೂರು ದಿನಗಳಿಂದ ಆಹಾರವನ್ನೇ ತಯಾರಿಸಿಲ್ಲಎಂದು ವಿದ್ಯಾರ್ಥಿಗಳು ದೂರಿದ್ದಾರೆ.
ವಸತಿ ನಿಲಯದಲ್ಲಿ6ನೇ ತರಗತಿಯಿಂದ 10ನೇ ತರಗತಿವರೆಗಿನ 70 ವಿದ್ಯಾರ್ಥಿಗಳ ದಾಖಲಾತಿ ಇದ್ದು ಹಳ್ಳಿಹೊಸೂರು, ಕಸಂದೊಡ್ಡಿ, ಹೀರಾ, ಚೀಕಲಪರ್ವಿ, ನಕ್ಕುಂದಿ, ಹರ್ವಾಪುರ, ಚಿಂಚರಕಿ ಸೇರಿ ನಾನಾ ಹಳ್ಳಿಗಳ ವಿದ್ಯಾರ್ಥಿಗಳು ವಸತಿ ನಿಯದಲ್ಲಿಪ್ರವೇಶ ಪಡೆದಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ.
ಒಂದೇ ಶೌಚಾಲಯ: ವಸತಿ ನಿಲಯದಲ್ಲಿರುವ 70 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಶೌಚಾಲಯ ನಿರ್ಮಿಸಲಾಗಿದೆ. ಅದು ನಿರ್ಮಾಣಗೊಂಡು ಬಿಲ್ ಎತ್ತುವಳಿಗೆ ಪ್ರಯೋಜನವಾಗಿದೆಯೇ ಹೊರತು ಇದುವರೆಗೆ ನೀರಿನ ಸಂಪರ್ಕವಿಲ್ಲದೆ, ಬಾಗಿಲು ಮುರಿದು ಉಪಯೋಗಕ್ಕೆ ಬಾರದಂತಾಗಿದೆ.
ನೀರಿಲ್ಲ: ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರಿಲ್ಲದೆ ಕೊಳವೆ ಬಾವಿಯ ನೀರನ್ನು ಕುಡಿಯುವಂತಾಗಿದೆ. ಇದರಿಂದ ಒಮ್ಮೊಮ್ಮೆ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ಬಳಲಿದ ಉದಾಹರಣೆಗಳಿವೆ.
ವಿದ್ಯಾರ್ಥಿಗಳಿಗೆ ಜಳಕ ಮಾಡಲು ಸ್ನಾನದ ಕೋಣೆಗಳಿಲ್ಲದೇ ಇರುವುದರಿಂದ ವಸತಿ ನಿಲಯದ ಬಯಲಲ್ಲೇ ಜಳಕ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿಬಟ್ಟೆ, ಮುಸುರಿ ತೊಳೆಯುವುದರಿಂದ ಸ್ನಾನ ಮಾಡುವ ಬಯಲಿನಲ್ಲಿಗಿಡಗಂಟಿಗಳು ಬೆಳೆದು ಕೆಸರಿನಿಂದ ಕೂಡಿದ್ದು ವಿದ್ಯಾರ್ಥಿಗಳು ಕೆಸರಿನಲ್ಲೇ ನಿಂತು ಸ್ನಾನ ಮಾಡಬೇಕಾಗಿದೆ.
ಗಬ್ಬೆದ್ದು ನಾರುವ ಕೋಣೆಗಳು: ವಸತಿ ನಿಲಯದ ಮೈದಾನದಲ್ಲಿಕಳೆದ 10-15 ವರ್ಷಗಳ ಹಿಂದೆ ನಿರ್ಮಿಸಿದ ಸ್ನಾನದ ಕೋಣೆಗಳು ಇಂದು ಮೂತ್ರಾಲಯಗಳಾಗಿ ಮಾರ್ಪಟ್ಟು ವಸತಿ ನಿಲಯವೆ ಗಬ್ಬೆದ್ದು ನಾರುತ್ತಿದೆ. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಮೂಗಿಗೆ ಬಟ್ಟೆ ಕಟ್ಟಿಕೊಂಡು ಅಭ್ಯಾಸ ಮಾಡುವುದಲ್ಲದೆ ಊಟ, ನಿದ್ರೆ ಮಾಡಲು ತೊಂದರೆಯಾಗಿ ಉಸಿರುಗಟ್ಟುವಂತ ವಾತಾವರಣ ಸೃಷ್ಟಿಯಾಗಿದೆ.
ಆಹಾರವಿಲ್ಲ: ವಸತಿ ನಿಲಯದಲ್ಲಿಸಮಪರ್ಕವಾದ ಆಹಾರ ಧಾನ್ಯಗಳಿಲ್ಲದಿರುವುದರಿಂದ ಪ್ರತಿದಿನ ಕಿರಾಣಿ ಅಂಗಡಿಯಿಂದ ಅಕ್ಕಿ, ಬೇಳೆ ಖರೀದಿಸಿ ಊಟ ತಯಾರು ಮಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಊಟ ದೊರೆಯದಂತಾಗಿದೆ. ಅಡುಗೆಯಲ್ಲಿಯಾವುದೇ ತರಕಾರಿ ಬಳಸುತ್ತಿಲ್ಲಎಂಬ ಆರೋಪವೂ ಕೇಳಿ ಬರುತ್ತಿವೆ.
----
ಮುಂಜಾನೆ ಚಪಾತಿ ಕೊಟ್ಟಾರ್ರಿ, ನನಗೆ ಸಾಲ್ಯಾಗ ಇವತ್ತು ಹೊಟ್ಟಿ ನೋಯ್ಯಾಕತ್ತಿತ್ರಿ, ವಾಂತಿ ಆಗೈತ್ರಿ, ಅದ್ಕ ವಾಪಸ್ ಬಂದು ರೆಸ್ಟ್ ಮಾಡಕತ್ತೀನ್ರಿ.
-ಹೆಸರು ಹೇಳಲಿಚ್ಛಿಸದ ವಸತಿ ನಿಲಯದ ವಿದ್ಯಾರ್ಥಿ
ಈಗಾಗಲೆ ಸ್ನಾನದ ಕೋಣೆ, ಶೌಚಾಲಯ ನಿರ್ಮಾಣ ವರದಿ ತಯಾರಾಗಿದೆ, ಆದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುವುದು, ತಾಲೂಕಾಧಿಕಾರಿಯನ್ನು ಕೂಡಲೇ ವಸತಿ ನಿಲಯಕ್ಕೆ ಕಳುಹಿಸುವೆ. ಸಮಸ್ಯೆ ಅರಿತು ಸರಿಪಡಿಸುವಂತೆ ಸೂಚಿಸುವೆ.
-ಎಂ.ಎಸ್.ಗೋನಾಳ, ಜಿಲ್ಲಾಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು.
ವಸತಿ ನಿಲಯದಲ್ಲಿ6ನೇ ತರಗತಿಯಿಂದ 10ನೇ ತರಗತಿವರೆಗಿನ 70 ವಿದ್ಯಾರ್ಥಿಗಳ ದಾಖಲಾತಿ ಇದ್ದು ಹಳ್ಳಿಹೊಸೂರು, ಕಸಂದೊಡ್ಡಿ, ಹೀರಾ, ಚೀಕಲಪರ್ವಿ, ನಕ್ಕುಂದಿ, ಹರ್ವಾಪುರ, ಚಿಂಚರಕಿ ಸೇರಿ ನಾನಾ ಹಳ್ಳಿಗಳ ವಿದ್ಯಾರ್ಥಿಗಳು ವಸತಿ ನಿಯದಲ್ಲಿಪ್ರವೇಶ ಪಡೆದಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಮರೀಚಿಕೆಯಾಗಿವೆ.
ಒಂದೇ ಶೌಚಾಲಯ: ವಸತಿ ನಿಲಯದಲ್ಲಿರುವ 70 ವಿದ್ಯಾರ್ಥಿಗಳಿಗೆ ಕೇವಲ ಒಂದೇ ಒಂದು ಶೌಚಾಲಯ ನಿರ್ಮಿಸಲಾಗಿದೆ. ಅದು ನಿರ್ಮಾಣಗೊಂಡು ಬಿಲ್ ಎತ್ತುವಳಿಗೆ ಪ್ರಯೋಜನವಾಗಿದೆಯೇ ಹೊರತು ಇದುವರೆಗೆ ನೀರಿನ ಸಂಪರ್ಕವಿಲ್ಲದೆ, ಬಾಗಿಲು ಮುರಿದು ಉಪಯೋಗಕ್ಕೆ ಬಾರದಂತಾಗಿದೆ.
ನೀರಿಲ್ಲ: ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರಿಲ್ಲದೆ ಕೊಳವೆ ಬಾವಿಯ ನೀರನ್ನು ಕುಡಿಯುವಂತಾಗಿದೆ. ಇದರಿಂದ ಒಮ್ಮೊಮ್ಮೆ ವಿದ್ಯಾರ್ಥಿಗಳು ಹೊಟ್ಟೆ ನೋವಿನಿಂದ ಬಳಲಿದ ಉದಾಹರಣೆಗಳಿವೆ.
ವಿದ್ಯಾರ್ಥಿಗಳಿಗೆ ಜಳಕ ಮಾಡಲು ಸ್ನಾನದ ಕೋಣೆಗಳಿಲ್ಲದೇ ಇರುವುದರಿಂದ ವಸತಿ ನಿಲಯದ ಬಯಲಲ್ಲೇ ಜಳಕ ಮಾಡಬೇಕಾದ ಅನಿವಾರ್ಯತೆ ಇದೆ. ಇಲ್ಲಿಬಟ್ಟೆ, ಮುಸುರಿ ತೊಳೆಯುವುದರಿಂದ ಸ್ನಾನ ಮಾಡುವ ಬಯಲಿನಲ್ಲಿಗಿಡಗಂಟಿಗಳು ಬೆಳೆದು ಕೆಸರಿನಿಂದ ಕೂಡಿದ್ದು ವಿದ್ಯಾರ್ಥಿಗಳು ಕೆಸರಿನಲ್ಲೇ ನಿಂತು ಸ್ನಾನ ಮಾಡಬೇಕಾಗಿದೆ.
ಗಬ್ಬೆದ್ದು ನಾರುವ ಕೋಣೆಗಳು: ವಸತಿ ನಿಲಯದ ಮೈದಾನದಲ್ಲಿಕಳೆದ 10-15 ವರ್ಷಗಳ ಹಿಂದೆ ನಿರ್ಮಿಸಿದ ಸ್ನಾನದ ಕೋಣೆಗಳು ಇಂದು ಮೂತ್ರಾಲಯಗಳಾಗಿ ಮಾರ್ಪಟ್ಟು ವಸತಿ ನಿಲಯವೆ ಗಬ್ಬೆದ್ದು ನಾರುತ್ತಿದೆ. ವಸತಿ ನಿಲಯದಲ್ಲಿನ ವಿದ್ಯಾರ್ಥಿಗಳು ಮೂಗಿಗೆ ಬಟ್ಟೆ ಕಟ್ಟಿಕೊಂಡು ಅಭ್ಯಾಸ ಮಾಡುವುದಲ್ಲದೆ ಊಟ, ನಿದ್ರೆ ಮಾಡಲು ತೊಂದರೆಯಾಗಿ ಉಸಿರುಗಟ್ಟುವಂತ ವಾತಾವರಣ ಸೃಷ್ಟಿಯಾಗಿದೆ.
ಆಹಾರವಿಲ್ಲ: ವಸತಿ ನಿಲಯದಲ್ಲಿಸಮಪರ್ಕವಾದ ಆಹಾರ ಧಾನ್ಯಗಳಿಲ್ಲದಿರುವುದರಿಂದ ಪ್ರತಿದಿನ ಕಿರಾಣಿ ಅಂಗಡಿಯಿಂದ ಅಕ್ಕಿ, ಬೇಳೆ ಖರೀದಿಸಿ ಊಟ ತಯಾರು ಮಾಡುವಂತಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮರ್ಪಕವಾದ ಊಟ ದೊರೆಯದಂತಾಗಿದೆ. ಅಡುಗೆಯಲ್ಲಿಯಾವುದೇ ತರಕಾರಿ ಬಳಸುತ್ತಿಲ್ಲಎಂಬ ಆರೋಪವೂ ಕೇಳಿ ಬರುತ್ತಿವೆ.
----
ಮುಂಜಾನೆ ಚಪಾತಿ ಕೊಟ್ಟಾರ್ರಿ, ನನಗೆ ಸಾಲ್ಯಾಗ ಇವತ್ತು ಹೊಟ್ಟಿ ನೋಯ್ಯಾಕತ್ತಿತ್ರಿ, ವಾಂತಿ ಆಗೈತ್ರಿ, ಅದ್ಕ ವಾಪಸ್ ಬಂದು ರೆಸ್ಟ್ ಮಾಡಕತ್ತೀನ್ರಿ.
-ಹೆಸರು ಹೇಳಲಿಚ್ಛಿಸದ ವಸತಿ ನಿಲಯದ ವಿದ್ಯಾರ್ಥಿ
ಈಗಾಗಲೆ ಸ್ನಾನದ ಕೋಣೆ, ಶೌಚಾಲಯ ನಿರ್ಮಾಣ ವರದಿ ತಯಾರಾಗಿದೆ, ಆದಷ್ಟು ಬೇಗ ಅನುಷ್ಠಾನಕ್ಕೆ ತರಲಾಗುವುದು, ತಾಲೂಕಾಧಿಕಾರಿಯನ್ನು ಕೂಡಲೇ ವಸತಿ ನಿಲಯಕ್ಕೆ ಕಳುಹಿಸುವೆ. ಸಮಸ್ಯೆ ಅರಿತು ಸರಿಪಡಿಸುವಂತೆ ಸೂಚಿಸುವೆ.
-ಎಂ.ಎಸ್.ಗೋನಾಳ, ಜಿಲ್ಲಾಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ರಾಯಚೂರು.