ಆ್ಯಪ್ನಗರ

'ಸಮಯ ಪಾಲನೆ ಮಾಡುವುದು ಕಡ್ಡಾಯ

ಸರಕಾರಿ ಆಸ್ಪತ್ರೆಯಲ್ಲಿಸರಕಾರಿ ಸಂಬಳ ತೆಗೆದುಕೊಳ್ಳುತ್ತಿರುವ ವೈದ್ಯರು, ಆಸ್ಪತ್ರೆ ಎದುರಿಗೇ ದೊಡ್ಡ ನಾಮಫಲಕ ಹಾಕಿಸಿ ಖಾಸಗಿ ಆಸ್ಪತ್ರೆ ತೆರೆದಿದ್ದಾರೆ. ಆದರೆ ಯಾರೇ ವೈದ್ಯರಿರಲಿ ಸರಕಾರದ ನಿಗದಿತ ಸಮಯದಲ್ಲಿಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ತಾಕೀತು ಮಾಡಿದರು.

Vijaya Karnataka 26 Feb 2020, 5:00 am
ಸಿಂಧನೂರು: ಸರಕಾರಿ ಆಸ್ಪತ್ರೆಯಲ್ಲಿಸರಕಾರಿ ಸಂಬಳ ತೆಗೆದುಕೊಳ್ಳುತ್ತಿರುವ ವೈದ್ಯರು, ಆಸ್ಪತ್ರೆ ಎದುರಿಗೇ ದೊಡ್ಡ ನಾಮಫಲಕ ಹಾಕಿಸಿ ಖಾಸಗಿ ಆಸ್ಪತ್ರೆ ತೆರೆದಿದ್ದಾರೆ. ಆದರೆ ಯಾರೇ ವೈದ್ಯರಿರಲಿ ಸರಕಾರದ ನಿಗದಿತ ಸಮಯದಲ್ಲಿಕಡ್ಡಾಯವಾಗಿ ಹಾಜರಿರಬೇಕು ಎಂದು ಜಿಲ್ಲಾಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ತಾಕೀತು ಮಾಡಿದರು.
Vijaya Karnataka Web timekeeping is imperative
'ಸಮಯ ಪಾಲನೆ ಮಾಡುವುದು ಕಡ್ಡಾಯ


ನಗರದ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆ ಕುರಿತಂತೆ ಮಂಗಳವಾರ ಕ್ರಾಂತಿಕಾರಿ ಯುವಜನ ರಂಗ ಹಾಗೂ ವೈದ್ಯರೊಡನೆ ನಡೆದ ಸಭೆಯಲ್ಲಿಅವರು ಮಾತನಾಡಿದರು. ಆಸ್ಪತ್ರೆ ಸಮಸ್ಯೆಗಳ ಕುರಿತಾಗಿ ಇತ್ತೀಚೆಗೆ ಸಂಘಟಕರು ದೂರು ನೀಡಿದ್ದ ಹಿನ್ನೆಲೆಯಲ್ಲಿಎಲ್ಲವಿಚಾರಗಳ ಕುರಿತಾಗಿ ಗಂಭೀರ ಚರ್ಚೆ ನಡೆಯಿತು. ಸಭೆಯಲ್ಲಿಮಾಹಿತಿ ಪಡೆದ ಡಾ.ರಾಮಕೃಷ್ಣ, ಅವ್ಯವಸ್ಥೆ, ಮುಖ್ಯ ವೈದ್ಯಾಧಿಕಾರಿ ಡಾ.ನರಸಿಂಹಲು ಬೇಜವಾಬ್ದಾರಿ, ವೈದ್ಯರ ನಿರ್ಲಕ್ಷತ್ರ್ಯದ ಕುರಿತಾಗಿ ಬೇಸರ ವ್ಯಕ್ತಪಡಿಸಿದರು.

ಸೂಚನೆ: ಆಸ್ಪತ್ರೆಯಲ್ಲಿವೈದ್ಯರು ಇಲ್ಲದೆ ಇರುವ ಕುರಿತಾಗಿ ಸಾರ್ವಜನಿಕರಿಂದ ದೂರುಗಳು ಹೆಚ್ಚಿವೆ. ವೈದ್ಯರು, ಸಿಸ್ಟರ್‌ಗಳು ಜನರಿಂದ ಹಣ ಪಡೆಯುತ್ತಿರುವ ಗಂಭೀರ ಆರೋಪವಿದೆ. ನಿಗದಿತ ಸಮಯದಲ್ಲಿವೈದ್ಯರು ಇರುವುದೇ ಇಲ್ಲ. ಎಲ್ಲರೂ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆ, 1.45 ರಿಂದ 4 ಗಂಟೆವರೆಗೆ ಸಮಯ ಪಾಲನೆ ಮಾಡಬೇಕು. ನಂತರದಲ್ಲಿನೀವು ಖಾಸಗಿ ಕರ್ತವ್ಯ ನಿರ್ವಹಿಸಲು ನಮ್ಮ ವಿರೋಧವಿಲ್ಲ. ಆದರೆ ಸರಕಾರದ ಸಮಯದಲ್ಲಿಮಾತ್ರ ವ್ಯತ್ಯಾಸ ಆಗದಂತೆ ಇನ್ನುಮುಂದೆ ಎಚ್ಚರಿಕೆವಹಿಸಬೇಕು ಎಂದು ಸೂಚಿಸಿದರು.

ನೋಟಿಸ್‌ ನೀಡಿ: ಈ ಮೊದಲು ಆಸ್ಪತ್ರೆಯಲ್ಲಿವೈದ್ಯರುಗಳು ಇರಲಿಲ್ಲ. ಆದರೀಗ ಎಲ್ಲರೂ ಇದ್ದಾರೆ. ಜನರಿಗೆ ಉತ್ತಮ ಚಿಕಿತ್ಸೆ ನೀಡಬೇಕು. ದಿನಂಪ್ರತಿ ಒಳ ರೋಗಿಗಳಿಗೆ ತಪಾಸಣೆ ಮಾಡಬೇಕು. ಅರವಳಿಕೆ ತಜ್ಞರು ಆಸ್ಪತ್ರೆಯಲ್ಲಿಇರುವುದಿಲ್ಲಎಂಬ ದೂರಿದೆ. ಕೂಡಲೇ ಸರಿಪಡಿಸಿಕೊಂಡು ಕೆಲಸ ಮಾಡಬೇಕು ಎಂದು ವೈದ್ಯೆಗೆ ಸೂಚಿಸಿದರು. ಗರ್ಭಿಣಿಯರ ಹೆರಿಗೆ ಕುರಿತಂತೆ ಡಾ.ನಾಗರಾಜ ಕಾಟವಾ ಅವರ ಮೇಲೇ ಏನೇ ಆರೋಪಗಳಿರಬಹುದು. ಆದರೆ ಅವರು ಸೇವೆ ನೀಡುತ್ತಿದ್ದಾರೆ. ಕೆಲ ಸಿಸ್ಟರ್‌ಗಳು ಗರ್ಭಿಣಿಯರ ಕುಟುಂಬದವರಿಗೆ ಹಣ ಪಡೆಯುತ್ತಿರುವ ದೂರುಗಳಿದ್ದು, ಕ್ರಮಕೈಗೊಳ್ಳಲಾಗುವುದು. ಮಕ್ಕಳ ವೈದ್ಯರು ಹೊರಗಡೆ ಚೀಟಿ ಬರೆದುಕೊಡುತ್ತಿದ್ದು, ಅವರಿಗೆ ನೋಟಿಸ್‌ ನೀಡಬೇಕು ಎಂದು ವೈದ್ಯಾಧಿಕಾರಿಗೆ ಸೂಚಿಸಿದರು. ಡಿ ಗ್ರೂಪ್‌ ನೌಕರರು ಸ್ವಚ್ಛತೆ ಕಾಪಾಡದೆ ಇರುವುದು, ಬೆಡ್‌ಶೀಟ್‌ಗಳ ಸ್ವಚ್ಛತೆ ಕುರಿತಾಗಿಯೂ ಗಮನಹರಿಸಬೇಕು ಎಂದು ಸಿಸ್ಟರ್‌ಗಳಿಗೆ ಡಾ.ರಾಮಕೃಷ್ಣ ಹೇಳಿದರು. ಕ್ರಾಂತಿಕಾರಿ ಯುವಜನ ರಂಗದ ರಾಜ್ಯ ಸಂಚಾಲಕ ನಾಗರಾಜ್‌ ಪೂಜಾರ್‌, ಆಸ್ಪತ್ರೆ ಸಮಸ್ಯೆ, ವೈದ್ಯರ ನಿರ್ಲಕ್ಷತ್ರ್ಯದ ಕುರಿತು ಕ್ರಮಕೈಗೊಂಡು ವರದಿ ನೀಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ಸಂಘಟನೆಯ ಬಸವರಾಜ ಎಕ್ಕಿ, ಬಿ.ಎನ್‌.ಯರದಿಹಾಳ ಸೇರಿದಂತೆ ಹಲವರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ