ಚಂದ್ರಶೇಖರ ಬೆನ್ನೂರು ಸಿಂಧನೂರು
ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದ ಸಮ್ಮಿಶ್ರ ಪಕ್ಷ ದ ನಾಯಕರು ಇದೀಗ ಮತ್ತೆ ಪ್ರತಿಷ್ಠೆಗೆ ಇಳಿದಿದ್ದಾರೆ. ತಾಲೂಕಿನಲ್ಲಿ ನಡೆದಿರುವ ತಾಲೂಕು ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದು, ದೋಸ್ತಿಗಳ ಕದನ ಕಂಡು ಹಿಂಬಾಲಕರು ದಂಗಾಗಿದ್ದಾರೆ.
ಸದ್ಯ ಧಡೇಸೂಗೂರು, ಉದ್ಬಾಳ(ಯು) ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಿ, ಮುಕ್ತಾಯವೂ ಆಗಿದೆ. ಧಡೇಸೂಗೂರು ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಪಾರ್ವತಿ ನಂದಪ್ಪ, ಬಿಜೆಪಿಯಿಂದ ಮಾಳಪ್ಪ ರಾಮಣ್ಣ, ಜೆಡಿಎಸ್ನಿಂದ ರತ್ನಮ್ಮ ಯಂಕಪ್ಪ, ಪಕ್ಷೇತರರಾಗಿ ಖಾಜಾಬನಿ ಫಾರೂಕ್ ಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಿರುವ ಉದ್ಬಾಳ ಯು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ರಾಮಣ್ಣ, ಬಿಜೆಪಿಯಿಂದ ಸಿದ್ದಪ್ಪ, ಜೆಡಿಎಸ್ನಿಂದ ಸಲ್ಮಾನ್ರಾಜು ಕಣದಲ್ಲಿದ್ದು, 18 ತಿಂಗಳ ಅಧಿಕಾರಕ್ಕೆ ಭಾರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಅಲೆದಾಟ: ಕಳೆದ ತಿಂಗಳಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಸೇರಿ ಪ್ರಮುಖರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರವಾಗಿ ಕ್ಷೇತ್ರದಲ್ಲಿ ಸುತ್ತಾಡಿದ್ದರು. ರಾಜ್ಯಮಟ್ಟದಲ್ಲಿ ಸಮ್ಮಿಶ್ರ ಸರಕಾರವಿರುದರಿಂದ ಆಂತರಿಕವಾಗಿ ವಿರೋಧಗಳಿದ್ದರೂ, ಬಾಹ್ಯವಾಗಿ ಜೊತೆಗೂಡಿ ಚುನಾವಣೆ ಎದುರಿಸಿದ್ದರು. ಆದರೆ ತಿಂಗಳು ಕಳೆಯುವುದರೊಳಗೆ ದೋಸ್ತಿ ಕಲಹ ಬೀದಿಗೆ ಬಂದಿದೆ. ಎರಡು ಕ್ಷೇತ್ರದಲ್ಲಿ ಆಯಾ ಪಕ್ಷ ದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಬೆಂಬಲಿಗರು ಗಲಿಬಿಲಿಗೊಂಡಿದ್ದಾರೆ. ಎಲ್ಲಾ ವಿರೋಧದ ನಡುವೆಯೂ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಯಿತು. ಆದರೀಗ ಮತ್ತೆ ಪರಸ್ಪರ ವಿರೋಧ ಎದುರಾಗಿದ್ದು, ಇದೇನಪ್ಪಾ ಸ್ಥಿತಿ? ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ. ನಾಯಕರುಗಳ ಆಟಕ್ಕೆ ತಳಹಂತದ ಕಾರ್ಯಕರ್ತರು ಕಂಗಾಲಾಗಿದ್ದಾರೆ.
ಕ್ಷೇತ್ರಗಳು: ಉದ್ಬಾಳ ಯು ಕ್ಷೇತ್ರ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಇಲ್ಲಿ ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಗರು ಸ್ಪರ್ಧಿಸಿದ್ದು, ಜೆಡಿಎಸ್ನಿಂದ ಸಚಿವ ವೆಂಕಟರಾವ್ ನಾಡಗೌಡ ಬೆಂಬಲಿಗರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದಲೂ ತೀವ್ರ ಸ್ಪರ್ಧೆ ಇದೆ. ಧಡೇಸೂಗೂರು ಕ್ಷೇತ್ರದಲ್ಲಿಯೂ ಈ ಹಿಂದೆ ತಾ.ಪಂ.ಅಧ್ಯಕ್ಷೆಯ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆದಿದೆ. ಚುನಾವಣೆ ಘೋಷಣೆ ಸಮಯದಲ್ಲಿ ಬಹುತೇಕರು ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುವುದು ಅನುಮಾನ ಎಂದೇ ಭಾವಿಸಿದ್ದರು. ಬದಲಾದ ಸನ್ನಿವೇಶನದಲ್ಲಿ ಸ್ಪರ್ಧೆ ನಡೆದಿದ್ದು, ಮುಖಂಡರುಗಳ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಲೆಕ್ಕಾಚಾರ: ಧಡೇಸೂಗೂರು ಕ್ಷೇತ್ರದಲ್ಲಿ ಏಳು ಮತಗಟ್ಟೆಗಳು ಇದ್ದು, 5579 ಮತದಾರರು ಇದ್ದಾರೆ. ಉದ್ಬಾಳ ಯು ಕ್ಷೇತ್ರದಲ್ಲಿ 12 ಮತಗಟ್ಟೆಗಳಿದ್ದು, 10014 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ. 29ಕ್ಕೆ ಮತದಾನ ನಡೆಯಲಿದ್ದು, 31ರಂದು ಮತ ಎಣಿಕೆ ನಡೆಯಲಿದೆ. ಧಡೇಸೂಗೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ಗೆ ಮೇಲೆ ಅನುಕಂಪವಿದ್ದರೆ, ಜೆಡಿಎಸ್ಗೆ ಅಧಿಕಾರದ ಬಲವಿದೆ. ಇತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿಯ ತವರು ಕ್ಷೇತ್ರವಾಗಿರುವುದರಿಂದ ಬಿಜೆಪಿ ಅಭ್ಯರ್ಥಿಯೂ ಅವಕಾಶಕ್ಕೆ ಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರಕಾರದ ಪ್ರಮುಖರ ಕದನ ಮತ್ತೆ ಶುರುವಾಗಿದ್ದು, ಈ ಬೆಳವಣಿಗೆಯಿಂದ ಯಾರಿಗೆ ಲಾಭವಾಗಲಿದೆಯೋ ಕಾದು ನೋಡಬೇಕಿದೆ.
ಲೋಕಸಭಾ ಚುನಾವಣೆಯಲ್ಲಿ ಕೈ ಹಿಡಿದುಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದ ಸಮ್ಮಿಶ್ರ ಪಕ್ಷ ದ ನಾಯಕರು ಇದೀಗ ಮತ್ತೆ ಪ್ರತಿಷ್ಠೆಗೆ ಇಳಿದಿದ್ದಾರೆ. ತಾಲೂಕಿನಲ್ಲಿ ನಡೆದಿರುವ ತಾಲೂಕು ಪಂಚಾಯಿತಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷ ದ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದು, ದೋಸ್ತಿಗಳ ಕದನ ಕಂಡು ಹಿಂಬಾಲಕರು ದಂಗಾಗಿದ್ದಾರೆ.
ಸದ್ಯ ಧಡೇಸೂಗೂರು, ಉದ್ಬಾಳ(ಯು) ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದೆ. ನಾಮಪತ್ರ ಸಲ್ಲಿಕೆ ಆರಂಭವಾಗಿ, ಮುಕ್ತಾಯವೂ ಆಗಿದೆ. ಧಡೇಸೂಗೂರು ಕ್ಷೇತ್ರದಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾದ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಪಾರ್ವತಿ ನಂದಪ್ಪ, ಬಿಜೆಪಿಯಿಂದ ಮಾಳಪ್ಪ ರಾಮಣ್ಣ, ಜೆಡಿಎಸ್ನಿಂದ ರತ್ನಮ್ಮ ಯಂಕಪ್ಪ, ಪಕ್ಷೇತರರಾಗಿ ಖಾಜಾಬನಿ ಫಾರೂಕ್ ಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿಗೆ ಮೀಸಲಿರುವ ಉದ್ಬಾಳ ಯು ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ರಾಮಣ್ಣ, ಬಿಜೆಪಿಯಿಂದ ಸಿದ್ದಪ್ಪ, ಜೆಡಿಎಸ್ನಿಂದ ಸಲ್ಮಾನ್ರಾಜು ಕಣದಲ್ಲಿದ್ದು, 18 ತಿಂಗಳ ಅಧಿಕಾರಕ್ಕೆ ಭಾರಿ ಪೈಪೋಟಿ ನಡೆಯುವ ನಿರೀಕ್ಷೆ ಇದೆ.
ಅಲೆದಾಟ: ಕಳೆದ ತಿಂಗಳಷ್ಟೇ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಹಾಗೂ ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಮಾಜಿ ಸಂಸದ ಕೆ.ವಿರೂಪಾಕ್ಷ ಪ್ಪ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಸೇರಿ ಪ್ರಮುಖರೆಲ್ಲರೂ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಪರವಾಗಿ ಕ್ಷೇತ್ರದಲ್ಲಿ ಸುತ್ತಾಡಿದ್ದರು. ರಾಜ್ಯಮಟ್ಟದಲ್ಲಿ ಸಮ್ಮಿಶ್ರ ಸರಕಾರವಿರುದರಿಂದ ಆಂತರಿಕವಾಗಿ ವಿರೋಧಗಳಿದ್ದರೂ, ಬಾಹ್ಯವಾಗಿ ಜೊತೆಗೂಡಿ ಚುನಾವಣೆ ಎದುರಿಸಿದ್ದರು. ಆದರೆ ತಿಂಗಳು ಕಳೆಯುವುದರೊಳಗೆ ದೋಸ್ತಿ ಕಲಹ ಬೀದಿಗೆ ಬಂದಿದೆ. ಎರಡು ಕ್ಷೇತ್ರದಲ್ಲಿ ಆಯಾ ಪಕ್ಷ ದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರುವುದರಿಂದ ಬೆಂಬಲಿಗರು ಗಲಿಬಿಲಿಗೊಂಡಿದ್ದಾರೆ. ಎಲ್ಲಾ ವಿರೋಧದ ನಡುವೆಯೂ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ನಡೆಯಿತು. ಆದರೀಗ ಮತ್ತೆ ಪರಸ್ಪರ ವಿರೋಧ ಎದುರಾಗಿದ್ದು, ಇದೇನಪ್ಪಾ ಸ್ಥಿತಿ? ಎಂದು ಕೈಕೈ ಹಿಸುಕಿಕೊಳ್ಳುವಂತಾಗಿದೆ. ನಾಯಕರುಗಳ ಆಟಕ್ಕೆ ತಳಹಂತದ ಕಾರ್ಯಕರ್ತರು ಕಂಗಾಲಾಗಿದ್ದಾರೆ.
ಕ್ಷೇತ್ರಗಳು: ಉದ್ಬಾಳ ಯು ಕ್ಷೇತ್ರ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಿದೆ. ಇಲ್ಲಿ ಶಾಸಕ ಪ್ರತಾಪಗೌಡ ಪಾಟೀಲ್ ಬೆಂಬಲಿಗರು ಸ್ಪರ್ಧಿಸಿದ್ದು, ಜೆಡಿಎಸ್ನಿಂದ ಸಚಿವ ವೆಂಕಟರಾವ್ ನಾಡಗೌಡ ಬೆಂಬಲಿಗರು ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದಲೂ ತೀವ್ರ ಸ್ಪರ್ಧೆ ಇದೆ. ಧಡೇಸೂಗೂರು ಕ್ಷೇತ್ರದಲ್ಲಿಯೂ ಈ ಹಿಂದೆ ತಾ.ಪಂ.ಅಧ್ಯಕ್ಷೆಯ ಅಕಾಲಿಕ ನಿಧನದಿಂದ ಉಪ ಚುನಾವಣೆ ನಡೆದಿದೆ. ಚುನಾವಣೆ ಘೋಷಣೆ ಸಮಯದಲ್ಲಿ ಬಹುತೇಕರು ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸುವುದು ಅನುಮಾನ ಎಂದೇ ಭಾವಿಸಿದ್ದರು. ಬದಲಾದ ಸನ್ನಿವೇಶನದಲ್ಲಿ ಸ್ಪರ್ಧೆ ನಡೆದಿದ್ದು, ಮುಖಂಡರುಗಳ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ.
ಲೆಕ್ಕಾಚಾರ: ಧಡೇಸೂಗೂರು ಕ್ಷೇತ್ರದಲ್ಲಿ ಏಳು ಮತಗಟ್ಟೆಗಳು ಇದ್ದು, 5579 ಮತದಾರರು ಇದ್ದಾರೆ. ಉದ್ಬಾಳ ಯು ಕ್ಷೇತ್ರದಲ್ಲಿ 12 ಮತಗಟ್ಟೆಗಳಿದ್ದು, 10014 ಸಾವಿರಕ್ಕೂ ಅಧಿಕ ಮತದಾರರು ಇದ್ದಾರೆ. 29ಕ್ಕೆ ಮತದಾನ ನಡೆಯಲಿದ್ದು, 31ರಂದು ಮತ ಎಣಿಕೆ ನಡೆಯಲಿದೆ. ಧಡೇಸೂಗೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಕಾಂಗ್ರೆಸ್ಗೆ ಮೇಲೆ ಅನುಕಂಪವಿದ್ದರೆ, ಜೆಡಿಎಸ್ಗೆ ಅಧಿಕಾರದ ಬಲವಿದೆ. ಇತ್ತ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿಯ ತವರು ಕ್ಷೇತ್ರವಾಗಿರುವುದರಿಂದ ಬಿಜೆಪಿ ಅಭ್ಯರ್ಥಿಯೂ ಅವಕಾಶಕ್ಕೆ ಯತ್ನಿಸುತ್ತಿದ್ದಾರೆ. ಒಟ್ಟಿನಲ್ಲಿ ಸಮ್ಮಿಶ್ರ ಸರಕಾರದ ಪ್ರಮುಖರ ಕದನ ಮತ್ತೆ ಶುರುವಾಗಿದ್ದು, ಈ ಬೆಳವಣಿಗೆಯಿಂದ ಯಾರಿಗೆ ಲಾಭವಾಗಲಿದೆಯೋ ಕಾದು ನೋಡಬೇಕಿದೆ.